ಶ್ರೀ ವೆಂಕಟರಮಣ ಭಜನ ಮಂಡಳಿಯವರಿಂದ ಭಜನೆ
Team Udayavani, Sep 18, 2018, 4:16 PM IST
ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಬಾಲಾಜಿ ಸೇವಾ ಸಮಿತಿ ಶ್ರೀ ವೆಂಕಟರಮಣ ಭಜನ ಮಂಡಳಿ ಅವರಿಂದ ಭಜನ ಕಾರ್ಯಕ್ರಮವು ಸೆ. 16ರಂದು ಸಂಜೆ ವಸಾಯಿಗಾಂವ್ ಕೋಳಿವಾಡಾದ ಶ್ರದ್ಧಾನಂದ ವೃದ್ಧಾಶ್ರಮದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆಯಿತು.
ಸುಮಾರು ಎರಡು ತಾಸುಗಳ ಕಾಲ ಭಜನ ಕಾರ್ಯಕ್ರಮ ನಡೆಯಿತು. ಮಂಡಳಿಯವರು ಮರಾಠಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ತಬಲಾದಲ್ಲಿ ಪುರುಷೋತ್ತಮ ಶೆಣೈ ಅವರು ಸಹಕರಿಸಿದರು. ಶ್ರದ್ಧಾನಂದ ವೃದ್ಧಾಶ್ರಮದ ಅಸಿಸ್ಟೆಂಟ್ ಸುಪರಿಂ ಟೆಂಡೆಂಟ್ ಅರುಂಧತಿ ಡೊಲಾಸ್, ಸಹಾಯಕಿ ಅರ್ಚನಾ, ವಿಶ್ವಸ್ತರಾದ ಜಗದೀಶ್ ಶೆಟ್ಟಿ ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಬಾಲಾಜಿ ಸಮಿತಿಯ ಸಂಚಾಲಕ ದೇವೇಂದ್ರ ಭಕ್ತ, ಕಾರ್ಯದರ್ಶಿ ಪುರು ಷೋತ್ತಮ ಶೆಣೈ, ಸಹ ಕಾರ್ಯದರ್ಶಿ ವಿವೇಕಾನಂದ ಭಕ್ತ, ಸತ್ಯೇಂದ್ರ ನಾಯಕ್, ಜತೆ ಕೋಶಾಧಿಕಾರಿ ವಿಶ್ವನಾಥ್ ಪೈ, ಉಪಾಧ್ಯಕ್ಷ ಶ್ರೀನಿವಾಸ ಪಡಿಯಾರ್, ಸದಸ್ಯರಾದ ರಾಮಕೃಷ್ಣ ಹೆಗ್ಡೆ, ವೆಂಕಟೇಶ್ ಪೈ, ಬಾಲಕೃಷ್ಣ ಪೈ, ಶ್ಯಾಮಸುಂದರ್ ಆಚಾರ್ಯ, ಯುವ ವಿಭಾಗದ ಉಪಾಧ್ಯಕ್ಷ ಪಲ್ಲವಿ ಶೆಣೈ ಅವರು ಉಪಸ್ಥಿತರಿದ್ದು ಸಹಕರಿಸಿದರು. ಶ್ರದ್ದಾನಂದ ವೃದ್ಧಾಶ್ರಮದವರು ಭಜನ ಮಂಡಳಿಯವರಿಗೆ ಪ್ರಸಾದ ವನ್ನಿತ್ತು ಗೌರವಿಸಿದರು. ಕೊನೆಯಲ್ಲಿ ಫಲಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ