ಬಿಲ್ಲವ ಸಮಾಜ ಸೇವಾ ಸಂಘ ಪುಣೆ: ಬೆಳ್ಳಿ ಮಹೋತ್ಸವ‌ ಉದ್ಘಾಟನೆ


Team Udayavani, Feb 7, 2018, 4:41 PM IST

0502mum01a.jpg

ಪುಣೆ: ಮನಸ್ಸು ಮನಸ್ಸುಗಳು  ಬೆರೆತು, ಸಾಮರಸ್ಯದಿಂದ ಬದುಕುವ ಕಲೆಯಿಂದ ಯಾವುದೇ ಕಠಿನ ಕಾರ್ಯವು ಸುಲಭವಾಗಿ ಕಾರ್ಯರೂಪಕ್ಕೆ ಬರ‌ಬಹುದು. ಅದಕ್ಕಾಗಿ ನಾವೆಲ್ಲ  ಒಂದೇ ಎಂಬ ಭಾವನೆ ಪ್ರತಿಯೋರ್ವರ ಹೃದಯದಲ್ಲಿರಬೇಕು. ಮನಸ್ಸು ಶುದ್ಧವಾಗಿ, ಕೃತಿ ಕಾರ್ಯಗಳು ನಿಸ್ವಾರ್ಥ ಮನೋಭಾವನೆಯಿಂದ ಕೂಡಿದಾಗ ಅದು ಜನರನ್ನು ತಲುಪಬಹುದು.  ಎಲ್ಲ  ಸಮಾಜದವರೊಂದಿಗೆ ಬೆರೆತು ಬದುಕಬೇಕು. ಆಗ ನಮ್ಮ ಸಂಸ್ಥೆ ಸಂಘಟನೆ ಬೆಳೆದು ನಿಲ್ಲಲು ಸಾಧ್ಯ. ಇದಕ್ಕೆ ಉತ್ತಮ ನಿದರ್ಶನ ಈ ಬಿಲ್ಲವ ಸಮಾಜ ಸೇವಾ ಸಂಘದ  ಈ ಬೆಳ್ಳಿ  ಮಹೋತ್ಸವ ಸಂಭ್ರಮವೇ ಸಾಕ್ಷಿ. ನಮ್ಮ  ತಂದೆ ತಾಯಿಯೇ ದೇವರು. ಗುರುಗಳೇ ದೇವರು ಎಂಬ ಭಾವನೆಯೊಂದಿಗೆ ಅವರ ಮಾರ್ಗದರ್ಶನವೇ ದಾರಿ ದೀಪವೆಂಬಂತೆ ಒಳ್ಳೆಯ ಪಥದಲ್ಲಿ ನಡೆದರೆ ಯಶಸ್ಸು ತನ್ನಿಂತಾನೆ ಒಲಿದು ಬರುತ್ತದೆ. ಅದೇ ರೀತಿಯಾಗಿ ಹಿರಿಯರು ಸ್ಥಾಪಿಸಿದ ಈ ಸಂಸ್ಥೆ   ಸಮಾಜದ ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮನದಲ್ಲಿಟ್ಟು ಕೊಂಡು ಕಾರ್ಯ ಸಾಧನೆಯಿಂದ  ಇಂದು ಈ ಮಟ್ಟಕ್ಕೆ ಏರಿ ನಿಂತಿದೆ.  ಅಂದು ಹಿರಿಯರು ಹಚ್ಚಿದ ದೀಪ ಇಂದು ಪ್ರಕಾಶಮಾನವಾಗಿ ಬೆಳಗುತ್ತಿದೆ. ಇದು ನಿರಂತರವಾಗಿ ಬೆಳಗುತ್ತಿರಲಿ, ಸಮಾಜದ ಅಭಿವೃದ್ಧಿಗೆ ಸಹಾಯಕವಾಗುವಂತೆ ಕಾರ್ಯಗಳನ್ನು ಮಾಡುತ್ತಾ ಮಾದರಿಯಾಗಿ ಬೆಳಗಲಿ. ಹಿರಿಯರು  ಯುವಕರು ಮಹಿಳೆಯರು  ಸೇರಿಕೊಂಡು ಚಿಂತನೆಯ ಮೂಲಕ  ಶ್ರಮವಹಿಸಿ ಮಾಡಿದ ಕಾರ್ಯ ಸಾಧನೆಗೆ ಪ್ರತಿಫ‌ಲ ಸಿಕ್ಕಿಯೇ ಸಿಗುತ್ತದೆ. ಸಣ್ಣವರು ದೊಡ್ಡವರು, ಶ್ರೀಮಂತ ಬಡವ, ಜಾತಿ ಜಾತಿಯ ತಾರತಮ್ಯವನ್ನು ಹೊಡೆದೋಡಿಸಿ ಸಮಾಜವನ್ನು ಕಟ್ಟುವ ಕಾರ್ಯ ಅಗಬೇಕಾಗಿದೆ. ಸಮಾಜಕ್ಕೆ ರಕ್ಷಣೆಯನ್ನು ನಿಡುವ  ಜತೆಯಲ್ಲಿ ಸಂಘಟನೆ ಬೆಳೆಯಲಿ  ಅಧಿವೃದ್ಧಿಯಾಗಲಿ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ, ಕನ್ನಡ ಚಿತ್ರರಂಗದ ನಟ ಕುಮಾರ ಬಂಗಾರಪ್ಪ  ಹೇಳಿದರು.

ಫೆ. 4ರಂದು ಪುಣೆಯ ಕರ್ವೆ ನಗರದ ದುದಾನೆ ಲಾನ್ಸ್‌ನಲ್ಲಿ ನಡೆದ ಬಿಲ್ಲವ ಸಮಾಜ ಸೇವಾ ಸಂಘ  ಪುಣೆ ಇದರ  25ನೇ ವರ್ಷದ ಆಚರಣೆ ಬೆಳ್ಳಿ ಬೆಳಕು ರಜತ ಮಹೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಧನಾತ್ಮಕ ಚಿಂತನೆಯೊಂದಿಗೆ ನಾವು ಎÇÉೇ ಇದ್ದರು ಮನಸ್ಸು  ಮಾಡಿದ ಕಾರ್ಯಗಳನ್ನು ಸಾಧಿಸಲು ಸಾಧ್ಯ. ನಿಷ್ಠೆಯಿಂದ ಮಾಡಿದ ಸೇವೆಗೆ ದೇವರು ಕೂಡಾ  ಒಲಿದು ಬರುತ್ತಾನೆ. ಆದರೆ ಸೇವೆ ಎಂಬುದು ಸನ್ಮಾರ್ಗದಲ್ಲಿದರಬೇಕು. ಅದು ಸಮಾಜಕ್ಕೆ ಸಹಕಾರಿಯಗಿರಬೇಕು. ಇಂತಹ ಕಾರ್ಯ ಸಾಧನೆಯನ್ನು  ಈ ಬಿಲ್ಲವ ಸಂಘ ಮಾಡುತ್ತಾ ಬಂದಿದೆ. ಜನ್ಮವನ್ನು ನೀಡಿದ ಜನ್ಮಭೂಮಿ ಅನ್ನವನ್ನು ನೀಡಿದ ಕರ್ಮಭೂಮಿ ಎರಡನ್ನೂ ಪ್ರೀತಿಸಿ ಅದರ ಋಣವನ್ನು ತೀರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿಶೇಷವಾಗಿ ಕರಾವಳಿ ಕರ್ನಾಟಕದ ಜನರು ಇಂದು ದೇಶದ, ವಿದೇಶದ ಯಾವುದೇ ಪ್ರದೇಶಕ್ಕೆ  ಹೋದರು ಅಭಿವೃದ್ಧಿಯನ್ನು ಹೊಂದಿ   ತಮ್ಮ ಋಣವನ್ನು ಸಂದಾಯಗೊಲಿಸುವ ಪ್ರಮುಖ ಸ್ಥಾನದಲ್ಲಿ¨ªಾರೆ. ಅಲ್ಲದೆ   ಸಮಾಜಕ್ಕೆ, ದೇಶಕ್ಕೆ ಸೇವೆಯನ್ನು ನೀಡುವಲ್ಲಿಯೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಪುಣೆಯ ಈ   ಮಹಾನಗರದಲ್ಲಿಯು ಇಂತಹ ಸಂಘಟನೆಯ ಮೂಲಕ ಸಮಾಜ ಸೇವೆಗೈಯುವ ಬಿಲ್ಲವ ಸಂಘದ ಕಾರ್ಯ ಶ್ಲಾಘನೀಯ ಎಂದರು.

ಬೆಳ್ಳಿ ಮಹೋತ್ಸವ ಸಮಾರಂಭದ ಉದ್ಘಾಟನೆಯ ಮೊದಲಿಗೆ ಕುಮಾರ ಬಂಗಾರಪ್ಪ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಕರುಣಾಕರ ಶಾಂತಿ ಅವರು  ಬ್ರಹ್ಮಶ್ರೀ ನಾರಾಯಣ  ಸ್ವಾಮಿ, ಕೋಟಿ ಚೆನ್ನಯರ ಫೋಟೋಗೆ ಪೂಜೆ ಸಲ್ಲಿಸಿ  ಸ್ತೋತ್ರ  ಪಠಿಸಿ  ಆರತಿ ಬೆಳಗಿಸಿದರು. ಅನಂತರ ಕುಮಾರ ಬಂಗಾರಪ್ಪ ಹಾಗೂ ಸಂಘದ ಪದಾಧಿಕಾರಿಗಳು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. 

ಶಂಕರ್‌ ಪೂಜಾರಿ, ಸರೋಜಿನಿ ಬಂಗೇರ ಮತ್ತು ಬಳಗದವರು ಪ್ರಾರ್ಥನೆಗೈದರು.   ವಿಶ್ವನಾಥ್‌ ಪೂಜಾರಿ ಕಡ್ತಲ ಸ್ವಾಗತಿಸಿದರು.

ಅನಂತರ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕುಮಾರ ಬಂಗಾರಪ್ಪ,  ಪುಣೆ ಬಿಲ್ಲವ  ಸಂಘದ   ಸಂಸ್ಥಾಪಕ ಅಧ್ಯಕ್ಷರಾದ ಸುಂದರ್‌ ಪೂಜಾರಿ, ಸಂಘದ  ಅಧ್ಯಕ್ಷರಾದ ಶೇಖರ್‌ ಟಿ. ಪೂಜಾರಿ, ಬೆಳ್ಳಿ ಮಹೋತ್ಸವ ಸಮಿತಿ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿ ಕಡ್ತಲ, ನಿಕಟ ಪೂರ್ವ ಅಧ್ಯಕ್ಷ  ಸದಾಶಿವ ಎಸ್‌. ಸಾಲ್ಯಾನ್‌, ಮಾಜಿ ಅಧ್ಯಕ್ಷ ಸದಾನಂದ ಪೂಜಾರಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೋಕ್ತೆಸರ ಕರುಣಾಕರ ಶಾಂತಿ, ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಸರೋಜಿನಿ ಡಿ. ಬಂಗೇರ, ಬೆಳ್ಳಿ ಮಹೋತ್ಸವ ಸಮಿತಿಯ ಮಹಿಳಾ ಅಧ್ಯಕ್ಷೆ ರೇವತಿ ಪೂಜಾರಿ,  ಮಾಜಿ ಅಧ್ಯಕ್ಷೆ ಪ್ರಿಯಾ ಯು. ಪಣಿಯಾಡಿ ಅವರು ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ  ಕುಮಾರ ಬಂಗಾರಪ್ಪ ಅವರನ್ನು ಪುಣೇರಿ ಪೇಟ ತೊಡಿಸಿ, ಫಲಪುಷ್ಪ,  ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಪರಮಾನಂದ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ: ಹರೀಶ್‌ ಮೂಡಬಿದ್ರಿ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.