ರಾಜ್ಯದಲ್ಲಿ ಇಂದಿನಿಂದ ಮನೆಗೆ ಮದ್ಯ ವಿತರಣೆ
Team Udayavani, May 15, 2020, 8:34 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ರಾಜ್ಯದಲ್ಲಿ ಮನೆಗೆ ಮದ್ಯದ ವಿತರಣೆ ಮೇ 15ರಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಹೇಳಿದೆ. ಕೋವಿಡ್ ವೈರಸ್ ಹಿನ್ನೆಲೆ ಜಾರಿಗೊಳಿಸಲಾಗಿರುವ ಲಾಕ್ಡೌನ್ ಮಧ್ಯೆ ಅಂಗಡಿಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ರಾಜ್ಯ ಸರಕಾರವು ಮಂಗಳವಾರ ಮನೆಗೆ ಮದ್ಯ ವಿತರಿಸಲು ಅನುಮತಿ ನೀಡಿತ್ತು.
ಆದರೆ, ಅಂಗಡಿ ಮಾಲಕರು ತಯಾರಿಗಾಗಿ ಇನ್ನೂ ಸ್ವಲ್ಪ ಸಮಯ ಕೋರಿರುವುದರಿಂದ ಶುಕ್ರವಾರದಿಂದ ಸೇವೆ ಪ್ರಾರಂಭವಾಗಲಿದೆ ಎಂದು ರಾಜ್ಯ ಅಬಕಾರಿ ಇಲಾಖೆ ಹೊರಡಿಸಿರುವ ಸರಕಾರಿ ಅಧಿಸೂಚನೆ (ಜಿಆರ್) ತಿಳಿಸಿದೆ. ರಾಜ್ಯಾದ್ಯಂತ ಕಂಟೈನ್ಮೆಂಟ್ ರಹಿತ ಪ್ರದೇಶಗಳಲ್ಲಿ ಶುಕ್ರವಾರದಿಂದ ಮದ್ಯ ವಿತರಣೆ ಪ್ರಾರಂಭವಾಗಲಿದೆ. ಓರ್ವ ಅಂಗಡಿ ಮಾಲಕನಿಗೆ 10ಕ್ಕಿಂತ ಹೆಚ್ಚು ವಿತರಣ ವ್ಯಕ್ತಿಗಳನ್ನು ನೇಮಿಸಲು ಅವಕಾಶವಿಲ್ಲ ಮತ್ತು ಒಬ್ಬ ವಿತರಣಾ ವ್ಯಕ್ತಿಯು ಒಂದು ಬಾರಿಗೆ 24 ಬಾಟಲಿಗಳಿಗಿಂತ ಹೆಚ್ಚು ಮದ್ಯವನ್ನು ಸಾಗಿಸುವಂತಿಲ್ಲ ಎಂದು ಆದೇಶವು ಹೇಳಿದೆ.
ಅಂತೆಯೇ, ಗ್ರಾಹಕರಿಗೆ ಪರಿಹಾರ ಒದಗಿಸುತ್ತ ಸರ ಕಾರವು ಬಾಟಲಿಯ ಮೇಲೆ ಮುದ್ರಿಸಲಾದ ಎಂಆರ್ಪಿಗಿಂತ ಹೆಚ್ಚಿನ ದರವನ್ನು ವಿಧಿಸಬಾರದು ಎಂದು ಮದ್ಯದಂಗಡಿಗಳಿಗೆ ಆದೇಶಿಸಿದೆ. ಆನ್ಲೈನ್ ಮದ್ಯ ಮಾರಾಟವು ಖರೀದಿದಾರ ಮತ್ತು ಮಾರಾಟಗಾರರ ನಡುವಿನ ಅಲಿಖೀತ ಒಪ್ಪಂದವಾಗಿದೆ, ಆದ್ದರಿಂದ ರಾಜ್ಯವು ಅವರ ನಡುವಿನ ಯಾವುದೇ ವಿವಾದಕ್ಕೆ ಕಾರಣವಾಗುವುದಿಲ್ಲ ಎಂದು ಜಿಆರ್ ಸ್ಪಷ್ಟಪಡಿಸಿದೆ. ಆನ್ಲೈನ್ ಮಾರಾಟದ ಹೊರತಾಗಿಯೂ, ಮದ್ಯದಂಗಡಿಗಳು ಅದರ ಸಿಬಂದಿಗಳ ದೈಹಿಕ ಅಂತರ ಮತ್ತು ನೈರ್ಮಲಿಕರಣದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಲಾಕೌxನ್ ಮಾನದಂಡಗಳು ಸಡಿಲಗೊಂಡ ಅನಂತರ ಕಳೆದ ವಾರದ ಆರಂಭದಲ್ಲಿ ಮದ್ಯದಂಗಡಿಗಳು ತೆರೆದಾಗ ಅವುಗಳ ಹೊರಗೆ ಭಾರಿ ಜನಸಂದಣಿ ಕಂಡುಬಂದ ಹಿನ್ನೆಲೆಯಲ್ಲಿ ಸರಕಾರವು ಮದ್ಯವನ್ನು ಮನೆಗೆ ತಲುಪಿಸಲು ಅನುಮತಿ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು