ವಿಪಿಎಂ ಕನ್ನಡ ಪ್ರಾಥಮಿಕ  ಶಾಲೆಯಲ್ಲಿ  ಶಾಲಾ ಪರಿಕರ ವಿತರಣೆ


Team Udayavani, Aug 7, 2018, 3:02 PM IST

0608mum05.jpg

ಮುಂಬಯಿ: ಮುಂಬಯಿ  ವಲಯದ ಲಯನ್ಸ್‌ ಕ್ಲಬ್‌ ಬಳಗದ ವತಿಯಿಂದ ಮುಲುಂಡ್‌ ವಿಪಿಎಂ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂ ಗಣದಲ್ಲಿ ನಡೆಯಿತು.

ಲಯನ್ಸ್‌ ಕ್ಲಬ್‌ನ ಮಕ್ಕಳ ತಜ್ಞರು ಮತ್ತು ವಿದ್ಯಾ ಪ್ರಸಾರಕ ಮಂಡಳದ ಉಪಾಧ್ಯಕ್ಷರಾದ ಡಾ|  ಮೋಹನ್‌ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿ, ನಾನು ಸಹ ಬಡತನದಲ್ಲಿಯೇ ಶಿಕ್ಷಣ ಪಡೆದಿದ್ದೆ. ಮೂಲಭೂತ ವಸ್ತುಗಳ ಕೊರತೆಯಿಂದ ಚಪ್ಪಲಿ ಇಲ್ಲದೆ, ಶಾಲೆಯಲ್ಲಿ ಅಧ್ಯಯನ ಮಾಡಿ ಬಡತನದ ನೋವು, ನಲಿವಿನಿಂದ ಬೆಂದು, ನೊಂದು, ಸೋತು, ಸವೆದು ಇಂದು ಕೆಸರಿನಲ್ಲಿ ಬೆಳೆದ ಕಮಲದಂತೆ ಅರಳಿದ್ದು ಬಡತನದ ಅಮೃತದಿಂದ. ಇದ್ದವರು ಇಲ್ಲದವರಿಗೆ ಸದ್ವಿನಿಯೋಗವಾಗಲು ದಾನ, ಧರ್ಮ, ಸಹಾಯ, ಸಹಕಾರ ಮಾಡಿದರೆ ತಪ್ಪಲ್ಲ ಎಂದು ನುಡಿದರು.

ಮತ್ತೋರ್ವ ಗೌರವ ಅತಿಥಿ ತ್ರಿಲೋಕಿನಾಥ್‌ ಮಾತನಾಡಿ,  ಬಡತನದಲ್ಲಿ ಬೆಂದು, ನೊಂದು, ಸೋತು, ಬಳಲಿದ ಈ ಮಕ್ಕಳಿಗೆ ವಿದ್ಯಾ ವಿಕಾಸಕ್ಕಾಗಿ ದಾನ-ಧರ್ಮ ಮಾಡಲು ಅತ್ಯಂತ ಸಂತೋಷವಾಗುತ್ತದೆ. ಮನ

ದಾಳದಿಂದ, ಉದಾರ ಮನೋಭಾ ವನೆಯಿಂದ ಮಾಡಿದ ದಾನದಿಂದ  ಸಕಾರಾತ್ಮಕದ ವಿದ್ಯುತ್‌ ಸಂಚಾರ ವಾಗುತ್ತದೆ. ಈ ಸಮಾಜ ದಲ್ಲಿ ಇದ್ದವರು ಇಲ್ಲದವರಿಗೆ ಸಹಾಯ-ಸಹಕಾರ ಮಾಡಿದರೆ ಅದಕ್ಕಿಂತ ಮಿಗಿಲಾದ ಹೃದಯ ಶ್ರೀಮಂತಿಕೆ ಮತ್ತು ಹೃದಯ ವಿಶಾಲತೆ ಮತ್ತೂಂದಿಲ್ಲ. ನಾನು ಎನ್ನುವುದರ ಬದಲು ನಾವು ಎನ್ನುವ ಮನೋಭಾವನೆಯಿಂದ ಮಾನವೀಯತೆಯ ಮತ್ತು ಮನು ಷ್ಯತ್ವದ ದೃಷ್ಟಿಯಿಂದ ದೇಶದ ಭವ್ಯ ಭವಿಷ್ಯಕ್ಕಾಗಿ, ದಿವ್ಯಭರಿತವಾದ ಪ್ರಜೆ ಗಳನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಮರೆಯಬಾರದು ಎಂದರು.

ವಿದ್ಯಾ ಪ್ರಸಾರಕ ಮಂಡಳದ ಪ್ರಧಾನ ಗೌರವ ಕಾರ್ಯದರ್ಶಿ ಡಾ| ಪಿ. ಎಂ. ಕಾಮತ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,  ಈ ಶೈಕ್ಷಣಿಕ ವರ್ಷದಲ್ಲಿ ಮಂಡಳವು ಹಮ್ಮಿಕೊಳ್ಳುವ ಮೊದಲೇ, ಪ್ರಥಮ ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿ, ನಮ್ಮ ವಿದ್ಯಾರ್ಥಿಗಳ ಮೇಲಿನ ಅಪಾರವಾದ ಪ್ರೀತಿ ಮತ್ತು ಕರುಣೆಯಿಂದ, ಬೃಹತ್‌ ಬಳಗ ಆಗಮಿಸಿ ವಿತರಿಸುತ್ತಿರುವುದನ್ನು ನೋಡಿ ಮಹಾದಾನಂದವಾಗುತ್ತಿದೆ. ಮುಂಬಯಿ ವಲಯದ ಲಯನ್ಸ್‌ ಬಳಗಕ್ಕೆ ವಿದ್ಯಾ ಪ್ರಸಾರಕ ಮಂಡಳವು ಕೃತಜ್ಞತೆಯನ್ನು ಅರ್ಪಿಸುತ್ತಿದೆ ಎಂದರು.

ಮುಂಬಯಿ ವಲಯದ ಲಯನ್ಸ್‌  ಕ್ಲಬ್‌ನ ಅಧ್ಯಕ್ಷ ವಿನೂ ಭಗತ್‌ ಅವರು ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ವಿತರಿಸಿ ಮಾತನಾಡಿ,  ಈ ಶೈಕ್ಷಣಿಕ ವರ್ಷದ ನಮ್ಮ ಈ ಕಾರ್ಯಕ್ರಮವನ್ನು ವಿಪಿಎಂ ವಿದ್ಯಾ ದೇಗುಲದಲ್ಲಿ ಹಮ್ಮಿಕೊಳ್ಳಲು  ಅವಕಾಶ ಮಾಡಿಕೊಟ್ಟ ವಿದ್ಯಾ ಪ್ರಸಾರಕ ಮಂಡಳಕ್ಕೆ ಮನದಾಳದ ನಮನಗಳು. ಕಳೆದ ಬಾರಿ  ಮುಖ್ಯ ಶಿಕ್ಷಕಿ ಅರುಣಾ ಭಟ್‌ ಅವರು ನನಗೆ ತಿಳಿಸಿದ ಹಾಗೆ ವಿದ್ಯಾರ್ಥಿಗಳು ಕೊಳಚೆ ಪ್ರದೇಶದಿಂದ ಆರ್ಥಿಕ ಅಸ್ಥಿರತೆಯಿಂದ ಬರುತ್ತಿದ್ದು ಬಡತನದಿಂದ ಬಳಲುತ್ತಿರುವ ಅವರಿಗೆ ಶಾಲೆಯಲ್ಲಿಯ ಮೂಲಭೂತ ಅವಶ್ಯಕತೆಗಳನ್ನು ಮಂಡಳವು ಪೂರೈಸುತ್ತದೆ.

ವೇದಿಕೆಯ ಮೇಲೆ ಮಂಡಳದ ಕೋಶಾಧಿಕಾರಿ ಪ್ರೊ| ಸಿ. ಜೆ. ಪೈ ಮತ್ತು ಮುಂಬಯಿ ವಲಯದ ಲಯನ್ಸ್‌  ಕ್ಲಬ್‌ನ ಪದಾಧಿಕಾರಿಗಳಾದ ಕಾರ್ಯದರ್ಶಿ ಸಂದೀಪ್‌ ಡೊಂಗ್ರೆ, ಕೋಶಾಧಿಕಾರಿ ಬಾಸ್ಕರ್‌ ಲೊಹಕರೆ, ಪ್ರಕಾಶ್‌ ಚರತ್ಕರ್‌, ಆಲೆøಡ್‌, ಮೋಹನ್‌ ಸಲಿತ್ರಿ ಉಪಸ್ಥಿತರಿದ್ದರು. 

ಅಥಿತಿ ಗಣ್ಯರ ಪರಿಚಯವನ್ನು ಶಿಕ್ಷಕಿ ಲಕ್ಷ್ಮೀ ಕೆಂಗನಾಳ ಮಾಡಿಕೊಟ್ಟರು. ವಿದ್ಯಾರ್ಥಿಗಳ ಯಾದಿಯನ್ನು ಶಿಕ್ಷಕಿ ರೇಖಾ ರಾವ್‌ ಓದಿದರು. ಶಾಲಾ ಪರಿವೀಕ್ಷಕಿ   ಶೋಭಾ ದೇಶಪಾಂಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.