“ಸೃಜನಾ’ದಿಂದ ಡಾ| ಗಿರಿಜಾ ಶಾಸ್ತ್ರೀ ಅವರ ಕೃತಿ ಬಿಡುಗಡೆ

ಕನ್ನಡ ಲೇಖಕಿಯರ ಬಳಗ

Team Udayavani, Apr 30, 2019, 11:17 AM IST

2804MUM02

ಮುಂಬಯಿ: ಮರಾಠಿಯ ಪ್ರಸಿದ್ಧ ಪ್ರಕಾಶಕರಾದ ರಾಜಾ ದೇಶು¾ಖ್‌ ಅವರು ಅಕ್ಷರಶಃ ಪು.ಶಿ.ರೇಗೆ ಅವರ ಬೆನ್ನು ಬಿದ್ದು “ಸಾವಿತ್ರಿ’ ಕಾದಂಬರಿಯನ್ನು ಬರೆಸಿಕೊಂಡರು. ಅದರ ಬೆಳವಣಿಗೆಯನ್ನು ಪ್ರತಿ ರಾತ್ರಿ ಪುಣೆಯಿಂದ ಟ್ರಂಕ್‌ ಕಾಲ್‌ ಮಾಡಿ ತಿಳಿದುಕೊಳ್ಳುತ್ತಿದ್ದರು. ಕಾಕಾ ಕಾಳೇಕರ್‌ ಅವರಿಂದ ಮೊದಲ್ಗೊಂಡು ಮರಾಠಿಯ ಅನೇಕ ವಿದ್ವಾಂಸರು ಸಾವಿತ್ರಿ ಯನ್ನು ಮೆಚ್ಚಿಕೊಂಡಿದ್ದರು. “ಸಾವಿತ್ರಿ’ ಆ ಕಾಲಕ್ಕೆ ಬಹಳ ಹೊಸ ರೂಪದ ಕಾದಂಬರಿಯಾಗಿತ್ತು. ಅದರ ಕಾವ್ಯಮಯ ಭಾಷೆಗೆ ಅದು ಹೆಸರಾಗಿದೆ. ಇಂದಿಗೂ ಇದರ ಅನೇಕ ರಂಗ ಪ್ರಯೋಗಗಳು, ಚರ್ಚೆಗಳು ನಡೆಯುತ್ತಿವೆ ಎಂದು ಇಂಡಿಯನ್‌ ಎಕನಾಮಿಕ್‌ ಸರ್ವೀಸ್‌ ಸಂಸ್ಥೆಯ ನಿವೃತ್ತ ಅಧಿಕಾರಿ ಮನೋಜ್‌ ಸಿ. ರೇಗೆ ಐಇಎಸ್‌ ಅವರು ಅಭಿಪ್ರಾಯಿಸಿದರು.

ಎ. 27ರಂದು ಸಂಜೆ ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಶನ್‌ ಮುಂಬಯಿ ಇದರ ಕಿರು ಸಭಾಗೃಹ‌ದಲ್ಲಿ ಕನ್ನಡ ಲೇಖಕಿಯರ ಬಳಗ ಮುಂಬಯಿ “ಸೃಜನಾ’ ಸಂಸ್ಥೆಯು ಆಯೋಜಿಸಿದ್ದ ಪು. ಶಿ. ರೇಗೆ ಮರಾಠಿ ಭಾಷೆಯಲ್ಲಿ ರಚಿತ ಡಾ| ಗಿರಿಜಾ ಶಾಸ್ತ್ರೀ ಅವರಿಂದ ಕನ್ನಡ ಭಾಷಾಂತರಗೊಂಡ “ಸಾವಿತ್ರಿ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಮಿಳು, ಗುಜರಾತಿ, ಇಂಗ್ಲಿಷ್‌, ಹಿಂದಿಯೇ ಅಲ್ಲದೆ ಅನೇಕ ವಿದೇಶಿ ಭಾಷೆಗಳಲ್ಲೂ ಈ ಕಾದಂಬರಿ ಅನುವಾದಗೊಂಡಿದೆ. ಈಗ ಇದು ಕನ್ನಡಕ್ಕೂ ಬಂದಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಹೇಳಿ ಇದಕ್ಕೆ ಕಾರಣಕರ್ತರಾದ ಗಿರಿಜಾ ಶಾಸ್ತ್ರೀ ಅವರನ್ನು ಅಭಿನಂದಿಸಿ, ಸಾವಿತ್ರಿ ಕಾದಂಬರಿ ಹುಟ್ಟಿದ ಸಂದರ್ಭದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.

ನಗರದ ಹಿರಿಯ ಸಾಹಿತಿ, ಸೃಜನಾ ಬಳಗದ ಮಾರ್ಗದರ್ಶಿ ಡಾ| ಸುನೀತಾ ಎಂ. ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪ್ರಹ್ಲಾದ ದಿವಾಣಜಿ ಉಪಸ್ಥಿತರಿದ್ದು ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಅನುವಾದ ಕಾರ್ಯ ಎಂದರೆ ಅದು ಅನುಸೃಷ್ಟಿ ಎಂದೇ ಹೇಳಬಹುದು. ಕಾದಂಬರಿಗಳ ರೂಪಾಂತರ ಅಥವಾ ಭಾಷಾಂತರ ಸುಲಭದ ಮಾತಲ್ಲ. ಭಾಷಾಂತರದ ಕೆಲಸವು ಕಠಿನ ಮತ್ತು ಉತ್ಕೃಷ್ಟವಾದ ಕೆಲಸವಾಗಿದೆ. ಅನುವಾದಿತ “ಸಾವಿತ್ರಿ’ ಕೃತಿ ಉತ್ತಮವಾಗಿ ಮೂಡಿ ಬಂದಿದ್ದು, ಗಿರಿಜಾ ಶಾಸ್ತ್ರೀ ಅವರ ಬರಹ ಶೈಲಿಯೂ ಅಷ್ಟೇ ಚೆನ್ನಾಗಿದೆ. ಮೂಲ ಭಾಷೆಯಿಂದ ಇತರ ಭಾಷೆಗಳಿಗೆ ಅನುವಾದ ಮಾಡುವವರು ಹಲವು ವಿಶೇಷತೆಗಳನ್ನು ಅರಿತಿರಬೇಕು. ಆಗ ಮಾತ್ರ ಭಾಷಾಂತರ ಕಾರ್ಯ ಅರ್ಥಬದ್ಧವಾಗುತ್ತದೆ. ಗಿರಿಜಾ ಶಾಸ್ತ್ರೀ ಅವರು ಓರ್ವ ಉತ್ತಮ ಲೇಖಕಿ, ಸಂಶೋಧಕಿ, ಒಳ್ಳೆಯ ವಿಮರ್ಶಕಿ ಮತ್ತು ಅನುವಾದಕಿಯಾಗಿದ್ದಾರೆ. ಆದ್ದರಿಂದ ಈ

ಕೃತಿಯು ಅರ್ಥಪೂರ್ಣವಾಗಿ ಮೂಡಿಬಂದಿದೆ. ಅನುವಾದಕರು ಅವರ ಭಾಷೆಯಲ್ಲಿ ಮಾತ್ರವಲ್ಲದೆ ಎರಡೂ ಭಾಷೆಗಳಲ್ಲಿ
ಹಿಡಿತವಿದ್ದು ಸಹನೆವುಳ್ಳವರಾಗಿದ್ದಾಗ ಮಾತ್ರ ಕೃತಿಯೂ ಮೌಲಿಕವಾಗಿ ರೂಪುಗೊಳ್ಳುತ್ತದೆ. ಮೂಲಭಾಷೆಗೆ ಧಕ್ಕೆ ಯಾಗದಂತೆ ಅನುವಾದ ಕಾರ್ಯವಾದಾಗಲೇ ರೂಪಾಂತರಿತ ಕೃತಿ ಮಹತ್ವದ್ದಾಗುತ್ತದೆ ಎಂದರು.

ವಿಮರ್ಶಕಿ, ಲೇಖಕಿ, ಕವಯತ್ರಿ, “ಸಾವಿತ್ರೀ’ ಕಾದಂಬರಿ ಅನುವಾದಕಿ ಡಾ| ಗಿರಿಜಾ ಶಾಸ್ತ್ರೀ ಅವರು ಮಾತನಾಡಿ, ಮನೋಜ್‌ ರೇಗೆ, ಪ್ರಹ್ಲಾದ ದಿವಾಣಜಿ ಎಲೆಮರೆಯ ಕಾಯಿಯಂತಿದ್ದು, ಈ ಕೃತಿಯನ್ನು ರೂಪಿಸಲು ಸಹರಿಸಿದ ಫಲವಾಗಿ ಈ ಕೃತಿ ಸಾರಸ್ವತ ಲೋಕಕ್ಕೆ ಅರ್ಪಿಸುವಂತಾಗಿದೆ. ಅಂತೆಯೇ ಕನ್ನಡಕ್ಕೆ ಅನುವಾದಿಸಲು ಅನೇಕರ ಸಹಯೋಗವಿತ್ತು. ಇಂತಹ ಕೃತಿಯನ್ನು ರಚಿಸಿದ ನನಗೆ ತೃಪ್ತಿಯಿದೆ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಈ ಸಂದರ್ಭದಲ್ಲಿ ಸೃಜನಾ ಬಳಗದ ಜತೆ ಗೌರವ ಕೋಶಾಧಿಕಾರಿ ಅನಿತಾ ಪಿ. ಪೂಜಾರಿ ತಾಕೋಡೆ, ಸದಸ್ಯೆಯರಾದ ಡಾ| ಮಮತಾ ರಾವ್‌, ಸುರೇಖಾ ಎಚ್‌. ದೇವಾಡಿಗ, ಡಾ| ಕರುಣಾಕರ ಶೆಟ್ಟಿ, ಆರ್‌ಜೆ ಕಾಲೇಜು ಘಾಟ್‌ಕೋಪರ್‌ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಕೆ. ರಘುನಾಥ್‌, ಡಾ| ವ್ಯಾಸರಾಯ ನಿಂಜೂರು, ಗುರುರಾಜ್‌ ಎನ್‌. ನಾಯಕ್‌, ಸುಧಾಕರ ಪೂಜಾರಿ, ನಾರಾಯಣ ರಾವ್‌, ಡಾ| ಜಿ. ಪಿ. ಕುಸುಮಾ, ಬಾಲಚಂದ್ರ ದೇವಾಡಿಗ, ಭೀಮರಾಯ ಚಿಲ್ಕ, ವಿವೇಕ್‌ ಎಸ್‌. ಶ್ಯಾನುಭಾಗ್‌ ಮತ್ತಿತರರು ಉಪಸ್ಥಿತರಿದ್ದರು.

ಸೃಜನಾ ಬಳಗದ ಗೌರವ ಕೋಶಾಧಿಕಾರಿ ಡಾ| ದಾûಾಯಣಿ ಯಡಹಳ್ಳಿ ಪ್ರಾರ್ಥನೆ ಗೈದರು. ಸೃಜನಾ ಸಂಚಾಲಕಿ ಮೀನಾ ಕಾಳಾವರ ಸ್ವಾಗತಿಸಿ ಪ್ರಸ್ತಾವನೆಗೈದರು. ಅಕ್ಷತಾ ದೇಶಪಾಂಡೆ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಹೇಮಾ ಸದಾನಂದ ಅಮೀನ್‌ ವಂದಿಸಿದರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.