ಫೋರ್ಟ್ ಆ್ಯಂಡ್ ಕೊಲಬಾ ವೆಲ್ಫೇರ್ ಸೊಸೈಟಿ ಉಚಿತ ಪುಸ್ತಕ ವಿತರಣೆ
Team Udayavani, Jun 28, 2018, 4:40 PM IST
ಮುಂಬಯಿ: ದಿ ಫೋರ್ಟ್ ಆ್ಯಂಡ್ ಕೊಲಬಾ ವೆಲ್ಫೆàರ್ ಸೊಸೈಟಿಯ 65ನೇ ವಾರ್ಷಿಕ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ. 23 ರಂದು ಅಪರಾಹ್ನ 3.30ರಿಂದ ಬಾಂಬೇ ಸಿಟಿ ಆ್ಯಂಬುಲೆನ್ಸ್ ಕಾರ್ಪಸ್, ಜೇಮ್ಶೆಟ್ ಟಾಟಾ ಆ್ಯಂಬುಲೆನ್ಸ್ ಕಾಲೇಜ್, ಮೊದಲನೇ ಮಹಡಿ, 21-ನ್ಯೂ ಮರೀನ್ ಲೈನ್ಸ್, ಬಿರ್ಲಾ ಮಾತೋಶ್ರೀ ಸಭಾಗೃಹ ಸಮೀಪದಲ್ಲಿ ನಡೆಯಿತು.
ಸ್ಥಳೀಯ ಶಾಸಕ, ಕ್ಯಾಬಿನೆಟ್ ಸಚಿವ ರಾಜ್ ಪುರೋಹಿತ್ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಿ. ಎಲ್. ದೇಶಪಾಂಡೆ ಮಹಾರಾಷ್ಟÅ ಕಲಾ ಅಕಾಡೆಮಿ ಮುಂಬಯಿ ಇತರ ಎಡಿಷನಲ್ ಕಲೆಕ್ಟರ್ ಪ್ರೊಡಕ್ಟ್ ಡೈರೆಕ್ಟರ್ ಸಂಜೀವ ಸೂರ್ಯಕಾಂತ್ ಪಲಾಂಡೆ ಇವರು ಅಧ್ಯಕ್ಷತೆ ವಹಿಸಿದ್ದರು. ಚೆಂಬೂರು ಕರ್ನಾಟಕ ಹೈಸ್ಕೂಲ್ನ ಮುಖ್ಯ ಆಡಳಿತಾಧಿಕಾರಿ ಸುರೇಶ್ ಸುವರ್ಣ ಇವರು ಪಾಲ್ಗೊಂಡಿದ್ದರು.
ಗೌರವ ಅತಿಥಿಗಳಾಗಿ ಮಂಜಲ್ ಥೀಮ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ ರಾಜು ಸಾವೆÉ, ನ್ಯಾಯವಾದಿ ಬಿ. ಡಿ. ಬಿರಾಜ್ದಾರ್, ಹೊಟೇಲ್ ಉದ್ಯಮಿ ಪ್ರಶಾಂತ್ ಕೆ. ಅಮೀನ್, ಬಿರ್ಲಾ ಮಾತೋಶ್ರೀ ಸಭಾಗೃಹದ ದಾಮೋದರ ಬಿಂದಾಲ್, ಕ್ಯಾಪ್ಟನ್ ರಮೇಶ್ ಜೆ. ಲಾಡ್, ಕನ್ನಡ ಫೋರ್ಟ್ ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಎಲ್. ರಾಧಾಕೃಷ್ಣನ್, ಆರ್ಯ ಸಮಾಜ ಫೋರ್ಟ್ ಇಲ್ಲಿನ ಪುರೋಹಿತ ಧರ್ಮವೀರ ಶಾಸ್ತಿÅàಜಿ, ಉದ್ಯಮಿ ಇರ್ಫಾನ್ ಇಸ್ಮಾಯಿಲ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರಿಸರದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹಾಗೂ ಮುಂಬಯಿ ಮಹಾನಗರ ಪಾಲಿಕೆ ಹಾಗೂ ವಿವಿಧ ರಾತ್ರಿಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಗಣ್ಯರ ಉಪಸ್ಥಿತಿಯಲ್ಲಿ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಸಂಸ್ಥೆಯ ಗೌರವ ಕಾರ್ಯದರ್ಶಿ ವೈ. ಪಿ. ಬಂಗೇರ, ಗೌರವಾಧ್ಯಕ್ಷ ಎಂ. ಎಸ್. ಕೆವೆr, ಆಡಳಿತ ನಿರ್ದೇಶಕ ಜಿ. ಎನ್. ಕುಂದರ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿವಿಧ ಶಾಲಾ ಶಿಕ್ಷಕರು, ಶಿಕ್ಷಕೇತರ ಸಿಬಂದಿಗಳು, ತುಳು-ಕನ್ನಡಿಗರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ