ಗೋರೆಗಾಂವ್ ಕರ್ನಾಟಕ ಸಂಘದ 61ನೇ ವಾರ್ಷಿಕ ಮಹಾಸಭೆ
Team Udayavani, Jun 25, 2019, 3:48 PM IST
ಮುಂಬಯಿ: ಇತರ ಕೆಲವು ಸಂಘಟನೆಯಲ್ಲಿ ನಾನಿದ್ದರೂ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷನಾದ ಅನಂತರ ಒಂದು ವಿಶೇಷ ರೀತಿಯಲ್ಲಿ ನನ್ನನ್ನು ಜನರು ಪರಿಚಯಿಸುತ್ತಿ¨ªಾರೆ. ಅಧ್ಯಕ್ಷನಾಗಿ ನಾನೀಗ ನಿರ್ಗಮಿಸುತ್ತಿದ್ದರೂ ನಾನು ಇಲ್ಲಿ ಗಳಿಸಿದ ಪ್ರೀತ್ಯಾದರವನ್ನು ಎಂದೂ ಮರೆಯುವಂತಿಲ್ಲ. ಮಾನವೀಯತೆಯೊಂದಿಗೆ ಇಲ್ಲಿ ಪ್ರೀತಿ ವಿಶ್ವಾಸದ ವಾತವರಣವಿದ್ದು, ಅದರೊಂದಿಗೆ ನಾವು ಸಂಘವನ್ನು ಬೆಳೆಸುತ್ತಾ ನಾವೂ ಬೆಳೆಯೋಣ ಎಂದು ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ದೇವಲ್ಕುಂದ ಭಾಸ್ಕರ ಶೆಟ್ಟಿ ನುಡಿದರು.
ಗೋರೆಗಾಂವ್ ಕರ್ನಾಟಕ ಸಂಘದ 61 ನೇ ಮಹಾಸಭೆ ಜೂ. 23 ರಂದು ಸಂಘದ ಬಾಕೂìರು ರುಕ್ಮಿಣಿ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಸ್ತಿಗೆ ಹೆಸರಾದ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ವಿವಿಧ ಭಾಷಿಗರು ಹಾಗೂ ಸಮುದಾಯದವರಿದ್ದರೂ ಎಲ್ಲವನ್ನೂ ಮರೆತು ಇದು ಕನ್ನಡ ಸಂಘ ಎಂಬ ಒಂದೇ ಬಾವನೆಯಿಂದ ಇಲ್ಲಿ ಎಲ್ಲರೂ ದುಡಿಯುತ್ತಿ¨ªಾರೆ. ನೂತನವಾಗಿ ಆಯ್ಕೆಯಾದ ಸಂಘದ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಹಾಗೂ ಸಮಿತಿಯ ಸದಸ್ಯರೆಲ್ಲರನ್ನು ಅಭಿನಂದಿಸುತ್ತಿ ದ್ದೇನೆ. ಭವಿಷ್ಯದಲ್ಲೂ ಸಂಘದ ಅಭಿವೃದ್ಧಿಯಲ್ಲಿ ನನ್ನ ಸಹಕಾರ, ಪ್ರೋತ್ಸಾಹ ಸದಾಯಿದೆ ಎಂದು ನುಡಿದರು.
ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ ಆರ್. ಮೆಂಡನ್ ಅವರು ಮಾತನಾಡಿ, ನಾನು ಸಂಘದಲ್ಲಿ ಕೋಶಾಧಿಕಾರಿಯಾಗಿ, ಉಪಾಧ್ಯಕ್ಷನಾಗಿ ನನ್ನಿಂದಾಗುವ ಸೇವೆ ಸಲ್ಲಿಸಿದ್ದು ಇದೀಗ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಎಲ್ಲರೂ ನಿಸ್ವಾರ್ಥ ಸೇವೆಯಿಂದ ಸಂಘದ ಅಭಿವೃದ್ದಿಗಾಗಿ ದುಡಿಯೋಣ ಎಂದರು.
ನೂತನ ಉಪಾಧ್ಯಕ್ಷರಾಗಿ ಪದ್ಮಜಾ ಮಣ್ಣೂರು ಆಯ್ಕೆಯಾಗಿದ್ದು, ಟ್ರಷ್ಟಿಗಳಾಗಿ ರಮೇಶ ಶೆಟ್ಟಿ ಪಯ್ನಾರ್, ಜಿ. ಟಿ. ಆಚಾರ್ಯ ಮತ್ತು ಸುರೇಂದ್ರ ಸಾಲ್ಯಾನ್ ಮುಂಡ್ಕೂರು ಪುನರಾಯ್ಕೆಯಾಗಿ¨ªಾರೆ. ಕಾರ್ಯಕಾರಿ ಸಮಿತಿಗೆ ಹತ್ತು ಮಂದಿ ನೂತನ ಸದಸ್ಯರನ್ನು ಆಯ್ಕೆಮಾಡಲಾಯಿತು.
ವಸಂತಿ ಕೋಟೆಕಾರ್ ಮತ್ತು ವೇದಾ ಎಂ. ಸುವರ್ಣ ಪ್ರಾರ್ಥನೆಗೈದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ದೇವಪ್ಪ ಪೂಜಾರಿ ಗತ ಮಹಾಸಭೆಯ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ವಿಶಾಲಾಕ್ಷೀ ಉಳುವಾರ ಲೆಕ್ಕಪತ್ರವನ್ನು ಮಂಡಿಸಿದರು. ಸಭಿಕರ ಪರವಾಗಿ ಸಚ್ಚೀಂದ್ರ ಕೋಟ್ಯಾನ್, ನಿತ್ಯಾನಂದ ಡಿ. ಕೋಟ್ಯಾನ್, ಡಿ. ವಿ. ಡಂಬಲ್, ಗಣೇಶ್ ಕುಮಾರ್, ಪದ್ಮಜಾ ಮಣ್ಣೂರು ಅವರು ಮಾತನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಜಯಕರ ದೇವಪ್ಪ ಪೂಜಾರಿ ವಂದಿಸಿದರು. ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಉಪಸಮಿತಿಗಳ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಈಶ್ವರ ಎಂ. ಐ.ಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು