ಗೋರೆಗಾಂವ್‌ ಕರ್ನಾಟಕ ಸಂಘದ 60ನೇ ನಾಡಹಬ್ಬ ಸಂಭ್ರಮ


Team Udayavani, Mar 21, 2018, 4:34 PM IST

3-nn.jpg

ಮುಂಬಯಿ: “ಭಾರತದ ಬಹುತ್ವದ ನೆಲೆಗಳು’ ಇದೊಂದು ಒಳ್ಳೆಯ ವಿಷಯ. ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವೂ ಹೌದು. ಆದರೆ ಬಹುತ್ವ ಅಂದರೆ ಅದೊಂದು ಪರಿಕಲ್ಪನೆಯಾಗಿದೆ. ನಮ್ಮಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ವಿಚಾರಗಳು ಅತಿಯಾಗಿ ತಾಂಡವವಾಡುತ್ತಿದ್ದು, ವಾಸ್ತವಿಕವಾಗಿ ಇಂದು ಬಹುತ್ವ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ನಾವು ಬಹುತ್ವದ ಬಗ್ಗೆ ಸಾಂವಿಧಾನಿಕವಾಗಿ ಮಾತ್ರ ಮಾತನಾಡುತ್ತಿದ್ದರೂ ಸ್ವಾರ್ಥ ಮನೋಭಾವಿಗಳಾಗಿ ಕೌಟುಂಬಿಕವಾಗಿ ಕೂಡು ಕುಟುಂಬದಿಂದ ದೂರ ಸರಿದು ಚಿಕ್ಕ ಸಂಸಾರವಾಗಿ ಬಾಳುವುದರಿಂದ ಬಹುತ್ವ ಅರ್ಥವನ್ನು ಕಳೆದುಕೊಂಡಿದೆ. ಬರೇ ಮನೆಯೊಳಗಿನ ಮಾತಾಗಿ, ಬರೇ ನುಡಿಯಾಗಿ ಬಹುತ್ವ ಕಾಣುತ್ತಾ ನಡೆಯಲ್ಲಿ ಹಿನ್ನಡೆಯಾಗಿ ಉಳಿದಿದೆ    ಎಂದು ನಿವೃತ್ತ ಪ್ರಾಚಾರ್ಯ ಮತ್ತು ಪ್ರಸಿದ್ಧ ಸಾಹಿತಿ ಡಾ| ವಿಶ್ವನಾಥ ಕಾರ್ನಾಡ್‌ ಇವರು ನುಡಿದರು.

ಮಾ. 18ರಂದು  ಪೂರ್ವಾಹ್ನ ಮಲಾಡ್‌ ಪಶ್ಚಿಮ ಬಜಾಜ್‌ ಸಭಾಗೃಹದಲ್ಲಿ ಗೋರೆಗಾಂವ್‌ ಕರ್ನಾಟಕ ಸಂಘವು ಸಂಘದ ಮಾಜಿ ಅಧ್ಯಕ್ಷ ರವಿ ರಾ. ಅಂಚನ್‌ ಇವರ ಸ್ಮರಣಾರ್ಥ ವೇದಿಕೆಯಲ್ಲಿ ಆಯೋಜಿಸಿದ್ದ 60ನೇ ವಾರ್ಷಿಕ ನಾಡಹಬ್ಬ ಸಂಭ್ರಮದಲ್ಲಿ “ಭಾರತದ ಬಹುತ್ವದ ನೆಲೆಗಳು’ ಸಾಹಿತ್ಯ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕಾರಣಿಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಾಗಿ ಬಹುತ್ವದ ನೆಲೆಯನ್ನು ಮುಂದಿಟ್ಟು ನಮ್ಮನ್ನು ಆಟವಾಡಿಸುತ್ತಾ ಜಾತ್ಯತೀತರೆನಿಸಿ ಜಾತೀಕರಣದ ಮೂಲಕ ಮತಯಾಚನಾ ಅಸ್ತ್ರಕ್ಕೆ ಮುಂದಾಗಿರುವುದರಿಂದ ಬಹುತ್ವದ ನೆಲೆಯು ಅಲುಗಾಡುವಂತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

“ಧಾರ್ಮಿಕ ನೆಲೆಗಳು’  ಎಂಬ ವಿಷಯದಲ್ಲಿ ಪತ್ರಕರ್ತ, ಕವಿ ಗೋಪಾಲ್‌ ತ್ರಾಸಿ ಇವರು ಉಪನ್ಯಾಸ ನೀಡಿ, ಎಲ್ಲರಿಗೂ ಧರ್ಮಗಳ ಆಯ್ಕೆಯ ಸ್ವಾತಂತ್ರ್ಯವಿದೆ. ಉದಾತ್ತವಾದ ಆಶಯವಿದೆ. ಎಲ್ಲಾ ಧರ್ಮದೊಳಗೆ ವ್ಯಕ್ತಿಗತವಾದ ಸ್ವಾತಂತ್ರ್ಯವಿದೆ.  ಸಂವಿಧಾನದ ಮೂಲ ಆಶಯದಲ್ಲಿ ಸಮಾನತೆ, ಅಂತಃಸತ್ವ, ಅಂತರ್ಗತವಾಗಿದೆ. ಪ್ರತಿ ಜಾತಿ ಮತ್ತು ಧರ್ಮದವರು ಕಾನೂನಿನ ಪ್ರಕಾರ ಸಮಾನ ನೆಲೆಯಲ್ಲಿ ಪರಿಗಣಿಸುವವರು. ಗಾಂಧೀಜಿಯ ಧೋರಣೆ ದಲಿತರೊಳಗೊಂಡು ಸಮಗ್ರ ಸಮಾಜದ ಸರ್ವೋದಯದ,  ಸಮಜೀವನದ  ಕನಸು ಆಗಿದ್ದರೆ, ಗಾಂಧೀಜಿಗೆ ಸ್ವಾತಂತ್ರÂದ ತೊಟ್ಟಿಲಲ್ಲಿ ಎಲ್ಲರನ್ನೂ ತೂಗುವ ಮಹದಾಸೆಯಿತ್ತು.  ಆದರೆ ಈ ದೇಶದ ಬಹುಪಾಲು ದಲಿತ ಅಂತಃಸಾಕ್ಷಿಗೆ ಸ್ವಾತಂತ್ರ್ಯ ಇಲ್ಲ  ಅಂದ‌ ಮೇಲೆ ಸರ್ವೋದಯ ಹೇಗೆ ಸಾಧ್ಯ ಎಂಬ ಅನುಮಾನ ಮತ್ತು ಸಂಶಯ ಡಾ| ಅಂಬೇಡ್ಕರ್‌ ಅವರದ್ದಾಗಿತ್ತು ಎಂದರು.

“ಸಾಮಾಜಿಕ ನೆಲೆಗಳು’  ಎಂಬ ವಿಷಯದಲ್ಲಿ ಜಿ. ನಾಗರತ್ನಾ ಕೋಟ ಉಪನ್ಯಾಸ ನೀಡಿ, ಎಲ್ಲಿದೆ ಸಮಾನತೆ,  ಎಲ್ಲಿದೆ ಸ್ವಾತಂತ್ರ್ಯ , ಎಲ್ಲಿದೆ ಪ್ರಜಾಪ್ರಭುತ್ವ,  ಎಲ್ಲಿದೆ ಜಾತ್ಯಾತೀತತೆ ಎಲ್ಲಿದೆ ? ಎಲ್ಲಿದೆ ನಂದನ, ಎಲ್ಲಿದೆ ಬಂಧನ, ಎಲ್ಲ ಇವೆ ನಮ್ಮೊಳಗೆ ಎಂಬಂತೆ ಎಲ್ಲವೂ ಇವೆ ಪುಸ್ತಕಗಳೊ ಳಗೆ  ಮಾತ್ರ. ಇವೆಲ್ಲವೂ ಇರುವುದು ರಾಜಕೀಯ ಪಟ್ಟ ಭದ್ರ ಹಿತಾಸಕ್ತಿಯ ಕೈಯೊಳಗೆ ಎನ್ನಬಹುದು. ಭಾರತ ಜಾತ್ಯತೀತ ರಾಷ್ಟ್ರ. ಈ ಪರಿಕಲ್ಪನೆಯ ಮೂಲಾಧಾರ ಸಮಾನತೆ. ಇದರ ಆಧಾರದಲ್ಲಿಯೇ ನಮಗೆ ಸ್ವಾತಂತ್ರ್ಯ ದೊರಕಿದ್ದು ಎನ್ನುವುದು ನಮಗೆ ನೆನಪಿರಬೇಕು. ಅಂದರೆ ಈ ಜಾತ್ಯತೀತತೆ ನಮ್ಮ ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಲ್ಲಿ ಉಳಿದಿದೆಯೇ? ಈ ಪ್ರಶ್ನೆಗೆ ಬಹಳ ವಿಷಾದದಿಂದ ಇಲ್ಲ ಎಂದೇ ಹೇಳಬೇಕಾಗಿದೆ. ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿಕೊಳ್ಳಲು ಈ ಸಮತಾವಾದಕ್ಕೆ ವಿರುದ್ಧವಾದ ಜಾತೀಯತೆಯೇ ಪ್ರಾಧಾನ್ಯವನ್ನು ಪಡೆದುಕೊಂಡಿದೆ. ಜಾತಿಯ ಆಧಾರದಲ್ಲಿ ಮತಗಳನ್ನು ಎಣಿಕೆ ಮಾಡುವ ಮನಃಸ್ಥಿತಿಯ ರಾಜಕಾರಣಿಗಳು ಹೇರಳ ಸಂಖ್ಯೆಯಲ್ಲಿದ್ದಾರೆ. ರಾಜಕೀಯ ಪ್ರೇರಿತ ಲಾಲಸೆಯ ಕಾರಣದಿಂದ ಸಮತಾ ವಾದವನ್ನು ಗಾಳಿಗೆ ತೂರುತ್ತ ಬಂದು ಜಾತೀಯತೆಯ ಭೇದವನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ಸಾಮಾಜಿಕವಾಗಿಯೂ ಬಹುದೊಡ್ಡದಾದ ವಿಪ್ಲವವನ್ನು ನಾವಿಂದು ಕಾಣುತ್ತೇವೆ. 

ಇದಕ್ಕೆ ನೇರ ಕಾರಣ ರಾಜಕೀಯ ಪಕ್ಷಗಳಾಗಿವೆ. ಧರ್ಮ ಮತ್ತು ಜಾತಿಯನ್ನು ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲಲು ಪ್ರಮುಖ ಅಸ್ತ್ರವನ್ನಾಗಿ ಉಪ ಯೋಗಿಸಿಕೊಳ್ಳುತ್ತಿರುವುದು ರಾಷ್ಟ್ರದ ದುರದೃಷ್ಟ ಹಾಗೂ ತತ್ವ ಸಿದ್ಧಾಂತಗಳಿಗೆ ಮೀರಿದ ಒಂದಷ್ಟು ಸ್ವಾರ್ಥಗಳು ಇದಕ್ಕೆ ಕಾರಣ. ಇದರ ಕಾರಣದಿಂದ ಧರ್ಮದ ನೆಲೆಯಲ್ಲಿ ಧ್ರುವೀಕರಣಕ್ಕೆ ಕಾರಣವಾಗುತ್ತದೆ ಎಂದು ನುಡಿದರು.

ಸಂಘದ ಅಧ್ಯಕ್ಷ ರಮೇಶ್‌ ಕೆ. ಶೆಟ್ಟಿ ಪಯ್ನಾರು ಅವರು ಸ್ವಾಗತಿಸಿದರು. ಇಂದಿರಾ ಮೊಲಿ, ಶಾಂತಾ ಎನ್‌. ಶೆಟ್ಟಿ, ಸ್ನೇಹಾ ಆರ್‌. ಕುಲಕರ್ಣಿ ಇವರು ಅತಿಥಿಗಳನ್ನು ಪರಿಚಯಿಸಿದರು. ಸಚ್ಚೀಂದ್ರ ಕೆ. ಕೋಟ್ಯಾನ್‌, ಲಕ್ಷ್ಮೀ ಆರ್‌. ಶೆಟ್ಟಿ ಅವರು ಅತಿಥಿಗಳನ್ನು  ಪುಷ್ಪಗುಚ್ಚವನ್ನಿತ್ತು ಗೌರವಿಸಿದರು. ಗುಣೋದಯ ಐಲ್‌ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.