ರಂಗಭೂಮಿಯ ಸೆನ್ಸಾರ್‌ ಮಂಡಳಿಗೆ ನಾರಾಯಣ ಶೆಟ್ಟಿ ನಂದಳಿಕೆ ಆಯ್ಕೆ


Team Udayavani, Mar 21, 2018, 12:28 PM IST

5.jpg

ಮುಂಬಯಿ: ರಂಗಭೂಮಿಯ ಪ್ರದರ್ಶನ ಪೂರ್ವ ಮತ್ತು ಪ್ರತಿ ಪರಿವೀಕ್ಷಣ (ಸೆನ್ಸಾರ್‌) ಮಂಡಳಿಯ ತುಳು-ಕನ್ನಡ ವಿಭಾಗಕ್ಕೆ ನಗರದ ರಂಗಕರ್ಮಿ, ಕವಿ, ಲೇಖಕ ನಾರಾಯಣ ಶೆಟ್ಟಿ ನಂದಳಿಕೆ ಇವರು ಆಯ್ಕೆಯಾಗಿದ್ದಾರೆ. ಮುಂಬಯ ಕನ್ನಡ, ತುಳು ರಂಗಭೂಮಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸಕ್ರಿಯರಾಗಿರುವ ಇವರು ಕನ್ನಡ, ತುಳು ಭಾಷೆಗಳಲ್ಲಿ  ಒಟ್ಟು 16 ನಾಟಕಗಳನ್ನು ರಚಿಸಿದ್ದಾರೆ.

ಎರಡು ಮಹಿಳಾ ನಾಟಕ ಅಲ್ಲದೆ ಹಲವಾರು ನಾಟಕಗಳಿಗೆ ಸಾಹಿತ್ಯ, ಸಂವಾದ, ಪದ್ಯ ರಚನೆಗೈದಿದ್ದಾರೆ. ಇವರ ರಚನೆಯ ಬೊಜ್ಜ ನಾಟಕಕ್ಕೆ ಗಡಿನಾಡ ಕಲಾವಿದರು ಕಾಸರಗೋಡು  ಇವರಿಂದ ಹೊರನಾಡ ಉತ್ತಮ ಕೃತಿ ಪ್ರಶಸ್ತಿ ಮಾತ್ರವಲ್ಲದೆ ಈ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇದೇ ನಾಟಕವನ್ನು ಮಾರ್ನಾಡು ಸಹೋದರು ಪಿ. ಎನ್‌. ರಾಮಚಂದ್ರ ಇವರ ನಿರ್ದೇಶನದಲ್ಲಿ ಸುದ್ಧ ಎನ್ನುವ ಹೆಸರಿನಿಂದ ನಿರ್ಮಾಣ ಮಾಡಿದ  ತುಳು ಡಿಜಿಟಲ್‌ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಮುಂಬಯಿಯಲ್ಲದೆ ಮಂಗಳೂರು ಮೊದಲಾದೆ‌ಡೆ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಣಾಯಕರಾಗಿ ಭಾಗವಹಿಸಿದ್ದಾರೆ. ಈ ಹಿಂದೆ ಮಂಗಳೂರು ಹಾಗೂ ಬಪ್ಪನಾಡು ಇಲ್ಲಿ ನಡೆದ ವಿಶ್ವತುಳು ಸಮ್ಮೇಳನದಲ್ಲಿ ಮುಂಬಯಿ ಸಾಹಿತ್ಯ ಹಾಗೂ ಮುಂಬಯಿ  ರಂಗ ಭೂಮಿಯ ಬಗ್ಗೆ ವಿಚಾರ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ್ದಾರೆ. ನಮ್ಮ ಕುಡ್ಲ ಟಿವಿಯಲ್ಲಿ ಎರಡು ಸಲ ಇವರ ಪರಿಚಯದ ನೇರ ಪ್ರಸಾರ ಕಾರ್ಯಕ್ರಮ ಪ್ರಸಾರಗೊಂಡಿದೆ. ಮುಂಬಯಿ, ಸೂರತ್‌, ವಾಪಿ, ಬರೋಡ, ಪುಣೆ, ಕೋಲ್ಹಾಪುರ, ಸಾಂಗ್ಲಿ ಮೀರಜ್‌ ಮಂಗಳೂರು ಹೀಗೆ ಹಲವಾರು ಕಡೆಗಳಲ್ಲಿ ಗೌರವಗಳು ಲಭಿಸಿದೆ. ಸಾಂಗ್ಲಿ ಮೀರಜ್‌ನ ತುಳು ಭವನದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಪೆರ್ಮೆದ ತುಳುವೆ ಎಂಬ ಬಿರುದು ಹಾಗೂ ನಂದಳಿಕೆ ಮುದ್ದಣ ಪ್ರಶಸ್ತಿಯೊಂದಿಗೆ ಇತ್ತೀಚೆಗೆ  ಮುಂಬಯಿ ವಿವಿಯಿಂದ ಗೌರವ ಸಮ್ಮಾನಗಳು ಲಭಿಸಿವೆ.

ಚೆಂಬೂರು ಕರ್ನಾಟಕ ಶಾಲೆಯು ಕಳೆದ ಹಲವಾರು ವರ್ಷಗಳಿಂದ ರಜೆ ಸಮಯದಲ್ಲಿ  ನಡೆಸುತ್ತಿರುವ ಮಕ್ಕಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸತತ ಭಾಗವಹಿಸುತ್ತಿದ್ದಾರೆ. ಇವರ ಬೊಜ್ಜ ನಾಟಕ, ತುಳು ತುಪ್ಪೆ ಅಂಕಣ ಲೇಖನಗಳ ಕೃತಿಗಳು ಪ್ರಕಟಗೊಂಡಿವೆ. ಕಳೆದ ಹದಿನೈದು ವರ್ಷಗಳಿಂದ ಬಂಟರವಾಣಿ ಪತ್ರಿಕೆಯ ಸಂಪಾದಕ ಮಂಡಳಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.