ಪುಣೆ ಕನ್ನಡ ಸಂಘ ಸಂಸ್ಥಾಪಕ ಡಾ| ಶಾಮರಾವ್ ಜನ್ಮ ಶತಾಬ್ದ: ಸಂಗೀತ ಸಂಜೆ
Team Udayavani, Apr 4, 2018, 11:49 AM IST
ಪುಣೆ: ಪುಣೆ ಕನ್ನಡ ಸಂಘದ ವತಿಯಿಂದ ಸಂಘದ ಸಂಸ್ಥಾಪಕ ದಿವಂಗತ ಡಾ| ಶಾಮರಾವ್ ಕಲ್ಮಾಡಿ ಅವರ ಜನ್ಮಶತಾಬ್ದ ನಿಮಿತ್ತವಾಗಿ ಅವಿಸ್ಮರಣೀಯ ಸಂಗೀತ ಕಾರ್ಯಕ್ರಮ ವನ್ನು ಮಾ. 31ರಂದು ಶಕುಂತಲಾ ಜಗನ್ನಾಥ ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಲಾಯಿತು.
ಪುಣೆಯ ಪ್ರಸಿದ್ಧ ಹಿಂದೂಸ್ಥಾನಿ ಗಾಯಕಿ ಆರತಿ ಅಂಕಲಿಕರ್ ಮತ್ತು ಚೆನ್ನೈಯ ಹೆಸರಾಂತ ಕರ್ನಾಟಕ ಸಂಗೀತ ವಿದುಷಿ ಗಾಯತ್ರಿ ವೆಂಕಟರಾಮನ್ ಇವರ ಜುಗಲ್ಬಂದಿ ಮೋಡಿ ಮಾಡಿತು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪುಣೆಯ ಸಂಗೀತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪುಣೆಯಲ್ಲಿ ನೆಲೆಸಿರುವ ಕನ್ನಡಿಗ ಪ್ರಸಿದ್ಧ ಸಂತೂರ್ ವಾದಕ ಉಸ್ತಾದ್ ಉಸ್ಮಾನ್ ಖಾನ್, ಹಿಂದುಸ್ಥಾನಿ ಸಂಗೀತಜ್ಞೆ ಆರತಿ ಅಂಕಲಿಕರ್ ಮತ್ತು ಪುಣೆಯ ಸಂಗೀತ ಶಿಕ್ಷಕಿ ರಜನಿ ಪಾಚ್ಚಾಪುರ್ ಇವರನ್ನು ಸಂಘದ ವತಿಯಿಂದ “ಸಂಗೀತ ಗುರು’ ಪ್ರಶಸ್ತಿಯನ್ನು ನೀಡಿ ಪುಣೆಯ ಮಾಜಿ ಸಂಸದ ಸುರೇಶ ಕಲ್ಮಾಡಿ, ಮೀರಾ ಕಲ್ಮಾಡಿ ಹಾಗೂ ಕುಶಲ್ ಹೆಗ್ಡೆ ಅವರು ಸಮ್ಮಾನಿಸಿದರು.
ಅನಂತರ ನಿರಂತರ 2 ಗಂಟೆಗಳ ಕಾಲ ನಡೆದ ಜುಗಲ್ಬಂದಿ ತುಂಬಿದ ಸಭಾಗೃಹದಲ್ಲಿ ರಸಿಕರ ಮನತಣಿಸಿ ಮೆಚ್ಚುಗೆಗೆ ಪಾತ್ರವಾಯಿತು.
ಗಾಯತ್ರಿ ಅವರ ಕನ್ನಡ ಹಾಡು ಕಲ್ಲುಸಕ್ಕರೆ ಕೊಳ್ಳಿರೋ ಮತ್ತು ಕೃಷ್ಣಾ ನೀ ಬೇಗನೆ ಬಾರೋ ಆರತಿ ಅವರ ಹೋಳಿ ಗೀತೆ, ಭೈರವಿ ಮತ್ತು ತಬಲಾ ಮೃದಂಗದ ಜೋಡಿ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ದಿವಂಗತ ಶಾಮರಾವ್ ಅವರು ವೈದ್ಯಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದು ಪುಣೆಯ ಜನರ ಮೆಚ್ಚಿನ ವ್ಯಕ್ತಿಯಾಗಿದ್ದರು. ಅವರ ಜನ್ಮ ಶತಾಬ್ದಿ ವರ್ಷದಲ್ಲಿ ಕನ್ನಡ ಸಂಘ ಹಲವಾರು ಕಾರ್ಯಕ್ರಮಗಳನ್ನು ವರ್ಷವಿಡೀ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘದ ವಿಶ್ವಸ್ತರು, ಪದಾಧಿಕಾರಿಗಳು, ಕಲ್ಮಾಡಿ ಪರಿವಾರದ ಸದಸ್ಯರು ಕನ್ನಡಿಗರು ಮತ್ತು ಸ್ಥಳೀಯ ಸಂಗೀತಾಭಿಮಾನಿಗಳು ಕಿಕ್ಕಿರಿದು ನೆರೆದು ಈ ಅಪೂರ್ವ ಸಂಗೀತ ಸಂಜೆಯಯನ್ನು ಯಶಸ್ವಿಗೊಳಿಸಿದರು.
ಸಂಘದ ಕಾರ್ಯದರ್ಶಿ ಮಾಲತಿ ಕಲ್ಮಾಡಿ ಯವರು ವಂದಿಸಿದರು.
ಚಿತ್ರ -ವರದಿ :ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…