Desi swara ರೈನ್‌ಮೈನ್‌ ಕನ್ನಡ ಸಂಘ: ಜೀವ-ಭಾವದೊಳಗೆ ಬೆರೆತ ಕನ್ನಡ ಉತ್ಸವ


Team Udayavani, Nov 26, 2023, 6:20 AM IST

Desi swara ರೈನ್‌ಮೈನ್‌ ಕನ್ನಡ ಸಂಘ: ಜೀವ-ಭಾವದೊಳಗೆ ಬೆರೆತ ಕನ್ನಡ ಉತ್ಸವ

ಫ್ರಾಂಕ್‌ಫ‌ರ್ಟ್‌: ಭಾಷಾಮೃತ ತುಂಬಿದ ಹೊಂಗೂಡ ನಮ್ಮ ಕನ್ನಡ, ಸಾವಿರಾರು ಮೈಲಿಗಳಾಚೆ ನಮ್ಮನ್ನೆಲ್ಲ ಒಂದು ಗೂಡಿಸಿರುವ ಶಕ್ತಿ ನಮ್ಮ ಕನ್ನಡ. ನಮ್ಮ ಜೀವ-ಭಾವದೊಳಗೆ ಬೆರೆತ ನಮ್ಮ ನುಡಿಗಂಪನ್ನು ಜರ್ಮನಿಯ ಫ್ರಾಂಕ್‌ಫ‌ರ್ಟ್‌ನಲ್ಲಿ ಪಸರಿಸಿದ್ದು ರೈನ್‌ ಮೈನ್‌ ಕನ್ನಡ ಸಂಘ.(RMKS)

ಇಲ್ಲಿನ ಸಾಲ್ಬಾವ್‌ ಸೊಸೆನ್ಹೈಮ್ ನಲ್ಲಿ ಇತ್ತೀಚೆಗೆ 500ಕ್ಕೂ ಹೆಚ್ಚು ಕನ್ನಡಿಗರು ಒಗ್ಗೂಡಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು. ಈ ಮೂಲಕ ಕನ್ನಡಿಗರೆದೆಯಲ್ಲಿ ಒಲವ ಸ್ಪುರಣೆಯೊಂದಿಗೆ ಕನ್ನಡಿಗರೇತರರಿಗೂ ಕನ್ನಡ ತನದ ಪ್ರಭಾವ ಜತೆಗೆ ನಮ್ಮ ಮುಂದಿನ ತಲೆಮಾರಿಗೆ ಕನ್ನಡವನ್ನು ಪ್ರವಹಿಸುವ ಕೆಲಸವನ್ನು ಪುನರಾವರ್ತಿಸಿದೆ.

ಮಂದಸ್ಮಿತ ತಂಡದ ಗಜಾನನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪುಟ್ಟಮಕ್ಕಳ ಛದ್ಮವೇಷ ಮತ್ತು ಅದರೊಂದಿಗೆ ಮೊಳಗಿದ ಕನ್ನಡದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ’ ನೆರೆದವರ ಅಂತರ್ಭಾವವನ್ನು ಅನಂತವಾಗಿಸಿತು. ಸ್ನೇಹಕ್ಕೊಂದು, ಬಾನಲ್ಲಿ ಹಾರುವ ಗಾಳಿಪಟಕ್ಕೊಂದು ಹಾಡಾದರೆ, ಶಾರದೆಯನ್ನು ನಮಿಸುತ್ತಾ ಗೋಪಾಲನನ್ನು ಕರೆಯಲು ನೃತ್ಯ ಹಾಗೂ ಜೀವ ಕನ್ನಡ ಭಾವ ಕನ್ನಡವೆಂದ ಹಾಡಿಗೆ ಬಣ್ಣತುಂಬಿದ್ದು ಗಮನ ಸೆಳೆಯಿತು.

ಏಳು ಮಲೆಯ ಮಾದೇವನನ್ನು ಸ್ಮರಿಸಿ ಹೆಜ್ಜೆ ಹಾಕಲಾಯಿತು. ಜೀವನದ ಏಳು-ಬೀಳುಗಳಲ್ಲಿ ಸದಾ ಜತೆ ನಿಲ್ಲುವ ಕುಟುಂಬದ ಅನುಬಂಧ ಅನಾವರಣಗೊಳಿಸಿದ ಫ್ಯಾಷನ್‌ ಶೋ, ಶ್ಯಾನೆ ಟಾಪ್‌ ಆಗಿ ಮುದ್ದಾದ ಮನ್ಮಥನನ್ನು ಕರೆದ RMKSನ ಮುದ್ದು ಮಕ್ಕಳು. ನಾಟ್ಯ ಮಯೂರಿ, ಲಯ, ಸೌರಭ ತಂಡಗಳ ನೃತ್ಯ ಪ್ರದರ್ಶನ ವೇದಿಕೆಯನ್ನು ಆವರಿಸಿದರೆ ಹೆಚ್ಚು ಅಬ್ಬರವಿಲ್ಲದ ಸೋಮಾರಿ ನೃತ್ಯವೂ ಎಲ್ಲರ ಗಮನ ಸೆಳೆಯಿತು.

ಕೇವಲ ಮೊಬೈಲ್‌ಗ‌ಳಲ್ಲೇ ಬಾಲ್ಯ ಕಳೆದು ಬಿಡುತ್ತಿರುವ ಪ್ರಸ್ತುತ ಪೀಳಿಗೆಗೆ ದಶಕಗಳ ಹಿಂದಿನ ಸೊಗಸಾದ ಬಾಲ್ಯವನ್ನು ಪರಿಚಯಿಸಲು ಮಾಡಿದ ಪ್ರಯತ್ನ, ಅದರೊಡನೆ ಜಾನಪದ ಗೀತೆಗಳ ಸೊಗಸನ್ನು ಉಣಬಡಿಸಿ, ರೆಟ್ರೋ ಹಾಡಿಗೆ ತಲೆದೂಗುವಂತೆ ಮಾಡಿದ ಪರಿ, ಚಿಕ್ಕದಾಗಿ ಕರುನಾಡನ್ನು ಪರಿಚಯಿಸುವಂತಿದ್ದ ಮತ್ತು ಓಎಊನ ಮಾದರಿಯ ಸ್ಕಿಟ್‌ಗಳು ನೆರೆದವರ ಚಪ್ಪಾಳೆ ಗಿಟ್ಟಿಸಿತು. ಚಂದನವನದ ಫೋಟೋ ಬೂತ್‌, ಕರ್ನಾಟಕದ ನಕ್ಷೆ ಮತ್ತು ರಸಪ್ರಶ್ನೆಗಳು ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ALL OK (ಅಲೋಕ್‌ ಬಾಬು) ಅವರ ಹಾಡುಗಳು ಹಾಗೂ DJ/VJ ಎಲ್ಲರು ಕುಣಿದು ಕುಪ್ಪಳಿಸುವಂತೆ ಮಾಡಿತು. ಕಾರ್ಯಕ್ರಮಕ್ಕೆ ಪಾಟೀಲ್‌ ಫೈನಾನ್ಸ್‌ ಮತ್ತು ಏರ್‌ವಿಸ್ತಾರ ಅವರಿಂದ ಆರ್ಥಿಕ ಸಹಾಯ ದೊರೆತಿದ್ದಲ್ಲದೆ, ಲಕ್ಕಿ ಡ್ರಾ ಮೂಲಕ 2 ಅದೃಷ್ಟ ಶಾಲಿಗಳಿಗೆ ಭಾರತಕ್ಕೆ ಉಚಿತ ಟಿಕೆಟ್‌ ದೊರೆಯಿತು. ಕಾನ್ಸುಲೇಟ್‌ ಜನರಲ್‌ ಆಫ್‌ ಇಂಡಿಯಾ ಫ್ರಾಂಕ್‌ಫ‌ರ್ಟ್‌ ವತಿಯಿಂದ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು RMಓಖ ಸಮಿತಿಯವರಿಗೆ ಅಭಿನಂದಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

ಜತೆಗೆ RMKS ಕಳೆದ 3 ವರ್ಷಗಳಿಂದ ಉಚಿತವಾಗಿ ಫ್ರಾಂಕ್‌ಫ‌ರ್ಟ್‌ನ ಸುತ್ತಮುತ್ತಲಿನ ಮಕ್ಕಳಿಗೆ ಕನ್ನಡ ಕಲಿ ಯೋಜನೆಯ ಮೂಲಕ, ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರಶಂಸಾ ಪತ್ರ ಜತೆಗೆ ನೆನಪಿನ ಕಾಣಿಕೆಯನ್ನು ನೀಡುವುದರ ಮೂಲಕ ಮಕ್ಕಳಿಗೆ ಪ್ರೋತ್ಸಾಹಿಸಿ ನಾವು ಕೇವಲ ನವೆಂಬರ್‌ ಕನ್ನಡಿಗರಾಗದೆ, ನಂಬರ್‌ 1 ಕನ್ನಡಿಗರು ಎಂಬುದನ್ನು ಸಾರಿದೆ. ಅಸೀಮ ಆದಿಗಂತವಾಗಿ ಹರಿದ ನನ್ನುಡಿ, ಚೆನ್ನುಡಿಯಾಗಿ ಸನ್ಮಿತ್ರರನ್ನು ಸಂಧಿಸುವ ಸ್ನೇಹಸೇತುವಾಗಿಸಿಹ RMKS ಮತ್ತಷ್ಟು ಕನ್ನಡಿಗರನ್ನು ತಲುಪಲಿ.

– ಶೋಭಾ ಚೌಹಾಣ್, ಫ್ರಾಂಕ್‌ಫ‌ರ್ಟ್‌

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.