Yakshagana; ಹಾಸ್ಯಗಾರನಿಗೂ ಬೇಕು ಒಂದು ಚೌಕಟ್ಟು

ಹಾಸ್ಯವೂ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ....

Team Udayavani, Nov 26, 2023, 6:16 AM IST

1-sasdsad

ಹಾಸ್ಯಗಾರ(ವಿದೂಷಕ)ನಿಲ್ಲದ ಯಕ್ಷಗಾನ ಪ್ರಸಂಗ ಎಂದರೆ ಉಪ್ಪು ಇಲ್ಲದೆ ಮಾಡಿದ ಅಡುಗೆಯಂತೆ ಎಂದರೆ ತಪ್ಪಾಗದು. ಹಾಸ್ಯಗಾರನಿಲ್ಲದ ಯಕ್ಷಗಾನ ಪ್ರದರ್ಶನ ಯಾವತ್ತೂ ಅಪೂರ್ಣವೇ.ಹಾಸ್ಯಗಾರರು ತಮ್ಮಲ್ಲಿರುವ ಸ್ಥಿತಪ್ರಜ್ಞೆ, ವಿಶೇಷ ಅಭಿವ್ಯಕ್ತಿ, ಅಭಿನಯದಿಂದ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ದೊರೆಗಳು. ಕಥೆಗೆ ಲೋಪವಾಗದಂತೆ ಪ್ರೇಕ್ಷಕರಿಗೆ ಹಾಸ್ಯ ರಸಧಾರೆಯನ್ನು ಉಣಬಡಿಸುವುದು ಅವರ ಚಾಣಾಕ್ಷತನ.
ಹಾಸ್ಯಗಾರನಾದವರಿಗೆ ತಮ್ಮ ಸುತ್ತಲಿನ ಘಟನಾವಳಿ ಗಳ ಪರಿಜ್ಞಾನ ಇದ್ದು, ಸಂದರ್ಭಾನುಸಾರ ಬಳಕೆ ಮಾಡುತ್ತಾರೆ. ಪ್ರೇಕ್ಷಕರನ್ನು ರಂಜಿಸಲು ಹೆಚ್ಚು ಜನಪ್ರಿಯ ವಾಗಿರುವ ವಿಚಾರವನ್ನು ಬಳಸಿಕೊಳ್ಳುವುದೂ ಇದೆ.

ದೇಹಾಕೃತಿ, ವಾಕ್ಚಾತುರ್ಯ, ಭಾವಾಭಿವ್ಯಕ್ತಿ, ಸ್ವರ ಸಂಯೋಜನೆ ಇವನ್ನೆಲ್ಲ ಪರಿಗಣಿಸಿ ಒಂದು ಪ್ರಸಂಗಕ್ಕೆ ಹಾಸ್ಯಗಾರರನ್ನು ಆಯ್ಕೆ ಮಾಡುತ್ತಾರೆ. ಕುಣಿತ, ಅಭಿನಯ ಮಾತುಗಾರಿಕೆಯಲ್ಲಿ ಮುಕ್ತ ಅವಕಾಶ ಇದ್ದು, ಸಂದರ್ಭಕ್ಕೆ ಅನುಗುಣವಾಗಿ ಹಾಸ್ಯ ಇದ್ದರೆ ಹೆಚ್ಚು ಔಚಿತ್ಯಪೂರ್ಣ. ಹಾಗೆಂದು ಮಾಡುವ ಪಾತ್ರದಿಂದಷ್ಟೇ ಹಾಸ್ಯಗಾರನೆಂದು ಗುರುತಿಸಲು ಸಾಧ್ಯವಿಲ್ಲ. ಎಂತಹ ಪಾತ್ರದಲ್ಲೂ ಹಾಸ್ಯದ ಹೊನಲನ್ನು ಪಸರುವ ವಿಶೇಷ ಗುಣ ಆತನಲ್ಲಿ ಇರಬೇಕು. ಪೌರಾಣಿಕ ಪ್ರಸಂಗಗಳಲ್ಲಿ ಬರುವ ಅಕ್ರೂರ, ಬಾಹುಕ ಮುಂತಾದ ಪಾತ್ರಗಳನ್ನು ಹಾಸ್ಯಗಾರರು ಅದ್ಭುತವಾಗಿ ನಿರ್ವಹಿಸುತ್ತಿದ್ದು, ಪ್ರಬುದ್ಧತೆ ನೆಲೆಯಲ್ಲಿ ಹಾಸ್ಯ ಕಲಾವಿದನ ಚಾಕಚಕ್ಯತೆ ಪ್ರದರ್ಶನಗೊಳ್ಳುತ್ತಲಿದೆ.

ಬದಲಾಗುತ್ತಿದೆ ಈ ಕಾಲಘಟ್ಟ
ಹಿಂದಿನ ಹಾಸ್ಯಗಾರರು ತಮ್ಮ ಪಾತ್ರದ ಒಳಗಿದ್ದು ಕಲಾವಂತಿಕೆಯನ್ನು ಪ್ರದರ್ಶಿಸುತ್ತಿದ್ದರು. ಯಾವ ತೆರನಾದ ಹಾಸ್ಯ ಪ್ರೇಕ್ಷಕರ ಮನಸ್ಸನ್ನು ಗೆಲ್ಲಬಹುದು ಎಂಬುದನ್ನು ಊಹಿಸುತ್ತಿದ್ದರು. ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನೆಲ್ಲ ತಿಳಿದುಕೊಂಡು ಗಂಭೀರ ಚಿಂತನೆಗಳನ್ನು ಹಾಸ್ಯದ ಮೂಲಕ ಸಾಮಾಜಿಕ ಸಂದೇಶವನ್ನಾಗಿ ನೀಡುತ್ತಿದ್ದರು. ಕಥೆಯ ಒಳಹೊಕ್ಕು ಪ್ರೇಕ್ಷಕರಿಗೆ ಎಷ್ಟರಮಟ್ಟಿಗೆ ಹಾಸ್ಯದ ರಸದೌತಣ ಉಣಬಡಿಸಬಹುದು ಎಂಬ ಬಗೆಗೆ ಹಾಸ್ಯಗಾರರು ಪೂರ್ವತಯಾರಿ ನಡೆಸಿ ಹಾಸ್ಯದ ಹೊನಲನ್ನೇ ಹರಿಸುತ್ತಿದ್ದರು.

ಈಗಿನ ಹಾಸ್ಯಗಾರರಲ್ಲಿ ದ್ವಂದ್ವಾರ್ಥ ಹೆಚ್ಚುತ್ತಿರುವುದು ಖೇದಕರ. ಇದು ಕಲೆಯ ಶ್ರೇಷ್ಠತೆ, ಘನತೆಗೆ ಕುಂದುಂಟು ಮಾಡುತ್ತಿದೆ. ಇತ್ತೀಚೆಗೆ ಬರುತ್ತಿರುವ ಹೊಸ ಪ್ರಸಂಗಗಳು ಸಿನೆಮಾದಿಂದ ಪ್ರೇರೇಪಿತವಾಗಿದ್ದು, ಅಲ್ಲಿ ಹಾಸ್ಯವೂ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ.
ದ್ವಂದ್ವಾರ್ಥ ಕೊಡುವ ಹಾಸ್ಯಗಳು ಕೇವಲ ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರ ರಂಜಿಸುತ್ತದೆಯೇ ಹೊರತು ಸದಭಿರುಚಿಯ, ಪರಿಪಕ್ವ ಯಕ್ಷಗಾನ ಪ್ರಸಂಗವನ್ನು ಆಸ್ವಾದಿಸ ಬಯಸುವ ಪ್ರಜ್ಞಾವಂತ ಪ್ರೇಕ್ಷಕರಿಗೆ ಸಹ್ಯವಾಗುವುದಿಲ್ಲ.

ಪ್ರಸಂಗದ ಕಥೆ ಸರಾಗವಾಗಿ ಸಾಗುತ್ತಿರುವಾಗ ಅಶ್ಲೀಲವೆನಿಸುವಂಥ ಹಾಸ್ಯಗಳು ಕಥೆಯ ಓಘ, ಗಾಂಭೀರ್ಯಕ್ಕೆ ತೊಡರುಗಾಲಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಹಾಸ್ಯಮಾಡಲು ಹೋದವರೇ ಅಪಹಾಸ್ಯಕ್ಕೆ ಗುರಿಯಾಗುವುದೂ ಇದೆ. ಒಂದು ಪೌರಾಣಿಕ ಪ್ರಸಂಗದಲ್ಲಿ ವಟವೃಕ್ಷ ಎನ್ನುವ ಬದಲು ಆಟೋರಿಕ್ಷಾ ಎಂದೂ, ದೇವಲೋಕದ ಅಪ್ಸರೆ ಅಂಬುಲಾಶೆಯ ಹೆಸರನ್ನು ಆ್ಯಂಬುಲೆನ್ಸ್ ಎಂದದ್ದೂ ಇದೆ. ಇಂತಹ ಹಾಸ್ಯಗಳನ್ನು ನಿರೂಪಿಸುವುದು ಸುಲಭದ ಮಾತಲ್ಲ. ಆದರೆ ಪ್ರೇಕ್ಷಕರೂ ಅಷ್ಟೇ ತೀಕ್ಷ್ಣಮತಿಯವ ರಾದರೆ ಬಹುಬೇಗ ಅರ್ಥವಾಗುತ್ತದೆ. ಕೆಲವೊಮ್ಮೆ ಸಹ ಪಾತ್ರಧಾರಿಗಳು ಸರಿಯಾದ ಪದವನ್ನು ಹೇಳಿ ಪ್ರೇಕ್ಷಕರಿಗೆ ತಿಳಿಸುವುದೂ ಇದೆ. ಇಲ್ಲದಿದ್ದರೆ ಹಾಸ್ಯಗಾರ ಹೇಳಿದದ್ದೇನು ಎಂದು ತಿಳಿಯುವುದೇ ಇಲ್ಲ. ಪೌರಾಣಿಕ ಪ್ರಸಂಗದಲ್ಲಿ ವರ್ತಮಾನದ ಪದ ಬಳಕೆ ಸಮಂಜಸವಲ್ಲ. ಪ್ರಸ್ತುತ ಸಾಮಾಜಿಕ ಮಾಧ್ಯಮಗಳು ಬಲಿಷ್ಠ ವಾಗಿರುವ ಈಗಿನ ಕಾಲದಲ್ಲಿ ಎಲ್ಲವೂ ಬಹುಬೇಗ ಟ್ರೋಲ್‌ ಆಗುತ್ತವೆ.

ಹಾಸ್ಯಗಾರರ ಮನೋಧರ್ಮ ಬದಲಾಗ ಬೇಕಾದದ್ದು ಈ ಕಾಲದ ಅಗತ್ಯವಾಗಿದೆ. ಹಾಸ್ಯ ವೆಂದರೆ ಕೇವಲ ಆ ಕ್ಷಣದ ನಗುವಿಗೆ ಸೀಮಿತವಾಗದೆ ಅದು ರಂಜಿಸುವಂತಿರಬೇಕು. ಒಂದು ಪ್ರಸಂಗದಿಂದ ಪ್ರೇಕ್ಷಕರು ಬಯಸಿದ್ದನ್ನು ಕಥೆಯ ವ್ಯಾಪ್ತಿಯಲ್ಲೇ ನೀಡುವಂತಿರಬೇಕು. ಹಾಸ್ಯಗಾರರು ವೈಯಕ್ತಿಕ ನಿಂದನೆ, ಇತರರಿಗೆ ಅವಮಾನ ಆಗುವಂಥ ಹಾಸ್ಯವನ್ನು ಮಾಡುವುದು ಸರಿಯಲ್ಲ. ಯಾವ ಪಾತ್ರಕ್ಕೆ ಎಷ್ಟು ಅಭಿನಯ ಬೇಕು ಎಂಬ ಅರಿವು ಹಾಸ್ಯಗಾರನಲ್ಲಿ ಇರಬೇಕು. ಈ ಬಗ್ಗೆ ಹಾಸ್ಯಗಾರನಿಗೂ ಒಂದಿಷ್ಟು ತರಬೇತಿ ಅವಶ್ಯವಾಗಿದೆ.

ಹಾಸ್ಯಕಷ್ಟೇ ಸೀಮಿತನಾಗಬೇಕೇ?
ಕೆಲವು ಹಾಸ್ಯಗಾರರು ಬೇರೆ ಬೇರೆ ರೀತಿಯ ಪ್ರತಿಭೆಯನ್ನು ಹೊಂದಿರುತ್ತಾರೆ. ಆದರೆ ಅದಕ್ಕೆಲ್ಲ ಅವಕಾಶ ಸಿಗುವುದಿಲ್ಲ. ಯಾವುದೇ ಕಲಾವಿದ ಕೇವಲ ಒಂದೇ ವಿಧದ ಪಾತ್ರಕ್ಕೆ ಸೀಮಿತವಾಗದೆ ತನಗೆ ಸಾಮರ್ಥ್ಯವಿರುವ ಇತರ ಪಾತ್ರಗಳಲ್ಲೂ ಅಭಿನಯಿಸಿದರೆ ಆಗ ತಮ್ಮ ಪರಿಮಿತಿಯನ್ನು ಅವರು ಅರಿಯಲು ಸಾಧ್ಯ. ಹಾಸ್ಯ ಕಲಾವಿದರು ಒಟ್ಟು ಯಕ್ಷಗಾನ ರಂಗಕ್ಕೆ ಎಷ್ಟು ಬೇಕು ಅಷ್ಟನ್ನು ಕೊಟ್ಟು ಇನ್ನಷ್ಟು ಪ್ರೌಢಿಮೆ ಯಿಂದ ತಮ್ಮ ಪಾತ್ರವನ್ನು ನಿರ್ವಹಿಸಿದ್ದೇ ಆದಲ್ಲಿ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರರಾಗುವುದು ಖಚಿತ.

ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.