ದೆಹಲಿ ಕರ್ನಾಟಕ ಸಂಘ: ರಂಗಕರ್ಮಿH.S.K ಅವರಿಗೆ ರಂಗನಮನ
Team Udayavani, Sep 13, 2017, 3:31 PM IST
ಮುಂಬಯಿ: ಹೊಸದಿಲ್ಲಿಯಲ್ಲಿ ಮೂರ್ನಾಲ್ಕು ದಶಕಗಳಿಂದ ಕನ್ನಡ ರಂಗ ಭೂಮಿಯ ಸೇವೆ ಸಲ್ಲಿಸುತ್ತಿದ್ದು, ಇತ್ತೀಚೆಗೆ ನಿಧನ ಹೊಂದಿದ ರಂಗಕರ್ಮಿ ಎಚ್.ಎಸ್.ಕುಲಕರ್ಣಿ ಅವರಿಗೆ ದೆಹಲಿ ಕರ್ನಾಟಕ ಸಂಘದಲ್ಲಿ ರಂಗನಮನ ಕಾರ್ಯಕ್ರಮ ಜರಗಿತು.
ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಭೀಮರಾವ್ ಮುರಗೋಡ, ಚೆನ್ನು ಎಸ್. ಮಠದ, ಡಾ| ಎಸ್. ಎಲ್. ಭಂಡಾರ್ಕರ್, ಕನ್ನಡತಿ ಡಾ| ಅಹಲ್ಯಾ ಚಿಂತಾಮಣಿ, ರಾಧಾ ಕೌಜಲಗಿ ಅವರು ರಂಗ ಕರ್ಮಿಗೆ ನಮನ ಸಲ್ಲಿಸಿದರು. ಸ್ತ್ರೀ ಸಬಲೀಕರಣ ಕುರಿತಂತೆ ಸಂದೇಶವನ್ನು ಒಳಗೊಂಡ 2 ನಾಟಕಗಳು ಹಾಗೂ ಉತ್ತರ ಕರ್ನಾಟಕದ ಬಾಗಲಕೋಟೆಯ ಜಾನಪದ ತಂಡದಿಂದ ಜಾನಪದ ಗೀತೆಗಳು ಮತ್ತು ರಂಗಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ನಡೆದಾಡುವ ರಂಗಭೂಮಿ ತಂಡದಿಂದ ಡಾ| ಸಾರಾ ಅಬೂಬಕ್ಕರ್ಅವರ ಕಾದಂಬರಿ ಆಧಾರಿತ ನಯನಾ ಜೆ. ಸೂಡ ನಿರ್ದೇಶನದ ನಾಟಕ ಚಂದ್ರಗಿರಿ ತೀರದಲ್ಲಿ ಪ್ರದರ್ಶನಗೊಂಡಿತು. ರಂಗ ಪಯಣ ತಂಡ ಬೆಂಗಳೂರು ಪ್ರಸ್ತುತಪಡಿಸಿದ ಸ್ತ್ರೀವಾದಿಯಾದ ಸಂಪತ್ಪಾಲ್ ದೇವಜಿಯವರ ಜೀವನ ಆಧಾರಿತ ನಾಟಕ ಗುಲಾಬಿ ಗ್ಯಾಂಗು ಪ್ರದರ್ಶಿಸಲಾಯಿತು. ರಾಜ್ಗುರು ಹೊಸಕೋಟಿ ಅದರ ವಿನ್ಯಾಸ, ಸಂಗೀತ ಮತ್ತು ನಿರ್ದೇಶನಗೈದರು.
ರಾಜ್ಗುರು ಹೊಸಕೋಟಿ ತಂಡವು ರಂಗಗೀತೆಗಳನ್ನು ಪ್ರಸ್ತುತಪಡಿಸಿತು. ಗೌರಿಗಣೇಶ ಸಾಂಸ್ಕೃತಿಕ ಕಲಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೇರೂರು ಬಾಗಲಕೋಟೆಯ ಪವಿತ್ರಾ ಜಕ್ಕಪ್ಪನವರ್ ಮತ್ತು ತಂಡದವರು ನಶಿಸಿಹೋಗುತ್ತಿರುವ ಲಾವಣಿ, ಕುಟ್ಟು ಹಾಡು, ಬೀಸುಕಲ್ಲಿನ ಪದ ಮತ್ತು ತತ್ವಪದಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ರಂಗಾಯಣದ ಕಲಾವಿದ ಮತ್ತು ರಂಗ ನಿರ್ದೇಶಕರಾಗಿದ್ದ ಮಂಜುನಾಥ ಬೆಳಕೆರೆ ಅವರ ಪತ್ನಿ ಪ್ರಶಾಂತಿ ಅವರಿಗೆ ಸಂಘದಿಂದ ಸಂಗ್ರಹಿಸಿದ 3 ಲಕ್ಷದ 25 ಸಾವಿರ ರೂ. ಗೌರವ ನಿಧಿ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್