“ಪತ್ತನಾಜೆ’ ಸಿನೆಮಾಗೆ “ರೆಡ್‌ಎಫ್‌ಎಂ’ವಾರ್ಷಿಕ ಆರು ಪ್ರಶಸ್ತಿ

ಕಲಾಜಗತ್ತು ಕ್ರಿಯೇಶನ್ಸ್‌ ನಿರ್ಮಾಣದ ಚಿತ್ರ

Team Udayavani, May 29, 2019, 12:31 PM IST

2805MUM02

ಮುಂಬಯಿ: ರೆಡ್‌ ಎಫ್‌ಎಂ ಫಿಲ್ಮ್ ಅವಾರ್ಡ್‌ನಲ್ಲಿ ಕಲಾಜಗತ್ತು ಕ್ರಿಯೇಶನ್ಸ್‌ ಮುಂಬಯಿ ನಿರ್ಮಾಣದ ಪತ್ತನಾಜೆ ತುಳು ಸಿನೆಮಾವು ಆರು ಪ್ರಶಸ್ತಿಗಳನ್ನು ಬಾಚಿ ವರ್ಷದ ಅತ್ಯುತ್ತಮ ತುಳು ಸಿನೆಮಾವಾಗಿ ಹೊರಹೊಮ್ಮಿದ್ದು ಇದರ ಸಂಭ್ರಮಾಚರಣೆಯು ದಹಿಸರ್‌ನ ಹೊಟೇಲ್‌ ಮಹಾರಾಜ್‌ ಸಭಾಗೃಹದಲ್ಲಿ ನಡೆಯಿತು.

ರೆಡ್‌ ಎಫ್‌ಎಂ ಸಂಸ್ಥೆಯ ವಾರ್ಷಿಕ ಪ್ರಶಸ್ತಿಯಲ್ಲಿ ಪತ್ತನಾಜೆ ಸಿನೆಮಾದ ಚಿತ್ರಕಥೆಗೆ ತೋನ್ಸೆ ವಿಜಯಕುಮಾರ್‌ ಶೆಟ್ಟಿ, ಸಂಭಾಷಣೆಗೆ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌, ಗೀತ ರಚನೆಗೆ ಡಾ| ಸುನೀತಾ ಎಂ. ಶೆಟ್ಟಿ, ಹಾಡಿಗೆ ಸಂಗೀತಾ ಬಾಲಚಂದ್ರ, ಕ್ಯಾಮರಾದಲ್ಲಿ ಸುರೇಶ್‌ ಬಾಬು, ಕೊರಿಯೋಗ್ರಾಫರ್‌ಗೆ

ಮದನ್‌ ಹರಿಣಿ ಹೀಗೆ ಒಟ್ಟು ಆರು ಪ್ರಶಸ್ತಿಗಳು ಲಭಿಸಿದ್ದು, ಇದರ ಅಂಗವಾಗಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾ ನಗರದ ಉದ್ಯಮಿ, ಸಂಘಟಕ ಎರ್ಮಾಳ್‌ ಹರೀಶ್‌ ಅವರು ಮಾತನಾಡಿ, ತುಳುನಾಡ ಕರಾವಳಿಯ ಜನಪದ, ಶ್ರೀಮಂತಿಕೆ ಯನ್ನು ಸಿನೆಮಾದ ಮೂಲಕ ಜಗತ್ತಿಗೆ ಪರಿಚಯಿ
ಸಿದ ಪತ್ತನಾಜೆ ಸಿನೆಮಾ ನಮ್ಮ ಬೆಳ್ಳಿತೆರೆಗೆ ಅಮೂಲ್ಯ ಕೊಡುಗೆಯಾಗಿದೆ. ಇಂತಹ ಸಿನೆಮಾಗಳು ವಿಜಯಕುಮಾರ್‌ ಶೆಟ್ಟಿ ಅವರಿಂದ ಇನ್ನಷ್ಟು ಹೊರಹೊಮ್ಮಲಿ ಎಂದು ಹಾರೈಸಿದರು.

ಪ್ರಶಸ್ತಿ ವಿಜೇತರೆಲ್ಲರ ಪರವಾಗಿ ಮಾತನಾಡಿದ ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು, ನಾನು ಕವಿಯಾಗಿ, ಲೇಖಕಿ ಯಾಗಿ ಸಾಹಿತ್ಯ ನಿರ್ಮಿಸಿರುವುದು ಬೇರೆ, ತುಳು ಸಿನಿಮಾವೊಂದಕ್ಕೆ ಗೀತಾ ಸಾಹಿತ್ಯ ರಚಿಸಿದ ಸಂದರ್ಭ ಬೇರೆ. ಇದೊಂದು ಭಿನ್ನ ಹಾಗೂ ವಿಶಿಷ್ಟ ಅನುಭವ. ಇಲ್ಲಿ ನಾನು ಬರೆದು ದಕ್ಕಿಂತಲೂ ಗೀತೆಗಳೇ ನನ್ನನ್ನು ಬರೆಸಿದವು ಎಂದು ನುಡಿದು ಕಲಾಜಗತ್ತು ಕ್ರಿಯೇಶನ್ಸ್‌ಗೆ ಶುಭ ಹಾರೈಸಿದರು.

ನಾಟಕ ಕ್ಷೇತ್ರ ಹಾಗೂ ಸಿನಿಮಾ ಎರಡನ್ನೂ ಶ್ರೀಮಂತಗೊಳಿಸಿದ ಕಲಾಜಗತತ್ತು ನಮ್ಮ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಕಲಾಜಗತ್ತಿನ ವಿಶೇಷ ಸಮ್ಮಾನ ಸ್ವೀಕರಿಸಿದ ಪುಣೆಯ ಉದ್ಯಮಿ, ಸಮಾಜ ಸೇವಕ ಪ್ರವೀಣ್‌ ಶೆಟ್ಟಿ ಪುತ್ತೂರು ನುಡಿದರು.

ಅತಿಥಿಯಾಗಿ ಆಗಮಿಸಿದ ಪಯ್ಯಡೆ ಸಮೂಹದ ಮುಂಡಪ್ಪ ಪಯ್ಯಡೆ ಅವರು ಮಾತನಾಡಿ, ಪತ್ತನಾಜೆ ಎಂಬ ಹೆಸರೇ ಒಂದು ಜಾನಪದದ ಮಹತ್ವವನ್ನು ಹೊಂದಿದೆ. ಆ ಹೆಸರು ಹೊತ್ತ ಸಿನಿಮಾ ಇವತ್ತು ತುಳುವರ ಬದುಕಿನ ವೈಶಿಷ್ಟÂವನ್ನು ಜಗತøಸಿದ್ಧಗೊಳಿಸಿದೆ ಎಂದರು. ಪತ್ತನಾಜೆ ನಿರ್ಮಾಣ ನೀಡಿದ ವ್ಯಾಪಕ ಅನುಭವ, ಅಡಚಣೆಗಳೆಲ್ಲವನ್ನೂ ಈ ಸಂದರ್ಭದಲ್ಲಿ ನಿರ್ದೇಶಕ, ನಿರ್ಮಾಪಕ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರು ಹಂಚಿಕೊಂಡು, ಒಟ್ಟಿನಲ್ಲಿ ಇದು ತನ್ನನ್ನು ರಂಗದ ಅನುಭವದ ಹೊರತಾಗಿ ಚಿತ್ರ ನಿರ್ಮಾಣದ ನಿರ್ದೇಶನದ ಕಾರ್ಯದಲ್ಲೂ ಸಿದ್ಧಗೊಳಿಸಿತು ಎಂದರು. ಶೀಘ್ರದಲ್ಲೇ ಸಂಸ್ಥೆಯ ಎರಡನೇ ತುಳುಚಿತ್ರ ಸೆಟ್ಟೇರಲಿದ್ದು, ಸಿದ್ಧತೆಗಳು ನಡೆಯುತ್ತಿವೆ ಎಂದರು.

ಇದೇ ಸಂದರ್ಭದಲ್ಲಿ ಪತ್ತನಾಜೆಯ ನಟ-ನಟಿಯರಾದ ಕಾಜಲ್‌ ಕುಂದರ್‌, ಜೂಲಿಯೆಟ್‌, ದೃಶ್ಯಾ ಶೆಟ್ಟಿ, ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಪೃಥ್ವಿರಾಜ್‌ ಮುಂಡ್ಕೂರ್‌, ನಿರ್ಮಾಪಕ, ನಿರ್ದೇಶಕ ವಿಜಯಕುಮಾರ್‌ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಉದ್ಯಮಿಗಳಾದ ರವೀಂದ್ರ ಶೆಟ್ಟಿ, ಅಮರ್‌ನಾಥ್‌ ಶೆಟ್ಟಿ ಉಪಸ್ಥಿತರಿದ್ದರು. ಕಲಾಜಗತ್ತಿನ ಕಾರ್ಯದರ್ಶಿ ಕಳ್ಳಿಗೆ ದಯಾಸಾಗರ್‌ ಚೌಟ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಲಾಜಗತ್ತು ಸರಿಗಮ ಬಳಗದ ಸಂಗೀತ ಕಾರ್ಯಕ್ರಮದೊಂದಿಗೆ ಸಮಾರಂಭ ಮುಕ್ತಾಯಗೊಂಡಿತು.

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.