ಹೊಸ ವರ್ಷದಿಂದಲೇ ಸಾಮಾನ್ಯ ಜನತೆಗೆ ಸೇವೆ ದೊರಕಲಿದೆಯೇ ?


Team Udayavani, Dec 12, 2020, 8:39 PM IST

ಹೊಸ ವರ್ಷದಿಂದಲೇ ಸಾಮಾನ್ಯ ಜನತೆಗೆ ಸೇವೆ ದೊರಕಲಿದೆಯೇ ?

ಮುಂಬಯಿ, ಡಿ. 11: ಅಕ್ಟೋಬರ್‌ನಲ್ಲಿ ಷರತ್ತುಗಳೊಂದಿಗೆ ಸಾಮಾನ್ಯ ಜನರಿಗೆ  ಮುಂಬಯಿ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ನೀಡಲು ರಾಜ್ಯ ಸರಕಾರ ರೈಲ್ವೇಗೆ ಮನವಿ ಸಲ್ಲಿಸಿದ ಬಳಿಕ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲವಾದರೂ ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕವೇ ಅನುಮತಿ ನೀಡುವ ಬಗ್ಗೆ ಶಿಫಾರಸು ಮಾಡಲಾಗುವುದು ಎಂದು ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಇಕ್ಬಾಲ್‌ ಸಿಂಗ್‌ ಚಾಹಲ್‌ ತಿಳಿಸಿದ್ದಾರೆ.

ಇನ್ನೊಂದೆಡೆ ಮುಂಬಯಿಯ ಲೋಕಲ್‌ ರೈಲುಗಳಲ್ಲಿ ಪ್ರತೀದಿನ ಸುಮಾರು 15 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ದಿಲ್ಲಿ ಮತ್ತು ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಸರಕಾರ ಈ ನಿರ್ಧಾರವನ್ನು ಮುಂದೂಡಿ, ನಾಲ್ಕು ರಾಜ್ಯಗಳಿಂದ ಬರುವ ಜನರಿಗೆ ಷರತ್ತುಗಳನ್ನು ವಿಧಿಸಿತು. ಈ ಮಧ್ಯೆ ಸಾಮಾನ್ಯ ಜನರಿಗೆ ಲೋಕಲ್‌ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ಇಲ್ಲದಿದ್ದರೂ ಲೋಕಲ್‌ ರೈಲುಗಳು ಪ್ರಯಾಣಿಕರಿಂದ ತುಂಬಿರುವುದು ಆತಂಕಕ್ಕೆ ಕಾರಣವಾಗಿದೆ.

ಡಿ. 15ಕ್ಕೆ ಗಡುವು ನೀಡಲಾಗಿತ್ತು :

ಡಿ. 15ರ ಹೊತ್ತಿಗೆ ಸರಕಾರವು ಮತ್ತೆ ಸಾಮಾನ್ಯ ಜನರಿಗೆ ಅನುಮತಿ ಕೋಡಬಹುದು ಎಂದು ಮುಂಬಯಿಗರ ನಡುವೆ ಚರ್ಚೆ ಪ್ರಾರಂಭಗೊಂಡಿತ್ತು. ವಾಸ್ತವವಾಗಿ ದೀಪಾವಳಿ ಸಂದರ್ಭ ಜನಸಮೂಹ ಸೇರಿದ್ದರೂ ಹೊಸ ಸೋಂಕಿನ ಪ್ರಕರಣಗಳಲ್ಲಿ ಆತಂಕ ಪಡುವಂತೆ ಹೆಚ್ಚಳಗೊಂಡಿಲ್ಲ. ಮತ್ತೂಂದೆಡೆ ಇತರ ರಾಜ್ಯಗಳಿಂದ ಬರುವ ಪ್ರಯಾಣಿಕರ ಪರೀಕ್ಷೆ ವರದಿಯೂ ಆತಂಕಪಡು

ವಂತಿಲ್ಲ. ಆದುದರಿಂದ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಮುಂಬಯಿಗರು ಬಯಸುತ್ತಿದ್ದರು. ಈ ಮಧ್ಯೆ ಬಿಎಂಸಿ ಆಯುಕ್ತರ ಹೇಳಿಕೆ ಮುಂಬಯಿಗರನ್ನು ನಿರಾಸೆಗೊಳಿಸಿದೆ.

ಅಗತ್ಯವಿದ್ದರೆ ರಾತ್ರಿ ಕರ್ಫ್ಯೂ :

ಕೊರೊನಾ ನಿರ್ಬಂಧಗಳನ್ನು ಧಿಕ್ಕರಿಸಿ ಜನರು ನಿರಂತರವಾಗಿ ಸೇರುತ್ತಿದ್ದರೆ, ನಗರದಲ್ಲಿ ರಾತ್ರಿ ಕರ್ಫ್ಯೂ ವಿಧಿಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಚಾಹಲ್‌ ಎಚ್ಚರಿಕೆ ನೀಡಿದ್ದಾರೆ. ಕ್ಲಬ್‌ಗಳು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿ ರುವುದನ್ನು ಈಗಾಗಲೇ ಗಮನಿಸಲಾಗಿದೆ. ಕಳೆದ ವಾರ ಬಿಎಂಸಿ ತಂಡಗಳು ಎರಡು ನೈಟ್‌ ಕ್ಲಬ್‌ಗಳ ಮೇಲೆ ದಾಳಿ ನಡೆಸಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾಸ್ಕ್ಗಳನ್ನು ಧರಿಸದೆ ಜಮಾಯಿಸಿದ್ದುದರಿಂದ ಕ್ಲಬ್‌ಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಸರಕಾರ ರಾತ್ರಿ ಕರ್ಫ್ಯೂ ವಿಧಿಸಿದರೆ ಜನರಲ್ಲಿ ಭೀತಿಯನ್ನು ಉಂಟುಮಾಡುತ್ತದೆ. ಆದ್ದರಿಂದ ಡಿ. 25ರ ವರೆಗೆ ವೀಕ್ಷಿಸಲು ನಿರ್ಧರಿಸಿರುವುದಾಗಿ ಚಾಹಲ್‌ ಹೇಳಿದ್ದಾರೆ.

ಕಿಕ್ಕಿರಿದು ಸಾಗುತ್ತಿರುವ  ಲೋಕಲ್‌ ರೈಲುಗಳು :

ಮುಂಬಯಿಯ ಪಶ್ಚಿಮ ರೈಲ್ವೇಯಲ್ಲಿ ಪ್ರತಿದಿನ ಸರಾಸರಿ 6.5 ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಕೇಂದ್ರ ರೈಲ್ವೇಯಲ್ಲಿ ಅದೇ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದು, ರೈಲ್ವೇ ಈ ಅಂಕಿಅಂಶಗಳು ಟಿಕೆಟ್‌ ಖರೀದಿಸಿ ಅಧಿಕೃತವಾಗಿ ಪ್ರಯಾಣಿಸುವವರಿಗೆ ಸಂಬಂಧಿಸಿವೆ. ತುರ್ತು ಸೇವೆಗಳಿಗೆ ಸಂಬಂಧಿಸಿದ ಪ್ರಯಾಣಿಕರನ್ನು ಗಮನಿಸಿದರೆ, ಸಂಜೆ ಹೊತ್ತಿನಲ್ಲಿ ರೈಲುಗಳಲ್ಲಿ ಅದೇ ಪರಿಸ್ಥಿತಿಯನ್ನು ಕಾಣಲಾಗುತ್ತಿದೆ. ಅಗತ್ಯ ಸಿಬಂದಿಯೊಂದಿಗೆ ಪ್ರಸ್ತುತ ವಕೀಲರು, ಸೆಕ್ಯೂರಿಟಿ ಗಾರ್ಡ್‌ಗಳು, ಮಹಿಳೆಯರಿಗೂ ಅವಕಾಶ ನೀಡಲಾಗಿದೆ.

ರೈಲುಗಳನ್ನು ಓಡಿಸಲು ರೈಲ್ವೇ ಸಿದ್ಧ :

ರೈಲುಗಳನ್ನು ಓಡಿಸಲು ರೈಲ್ವೇ ಸಿದ್ಧವಾಗಿದೆ. ಅಗತ್ಯವಿದ್ದಾಗ ನಾವು ಪೂರ್ಣ ಸೇವೆಯನ್ನು ಪುನಃಸ್ಥಾಪಿಸುತ್ತೇವೆ. ಸುಮಾರು ಶೇ. 90ರಷ್ಟು ಮಂದಿ ಉಪನಗರ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಎಟಿವಿಎಂಗಳನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುತ್ತಿದೆ. ಎಲ್ಲ ವಿಭಾಗಗಳಲ್ಲಿ ಸೇವೆಗಳು ಮುಂದುವರಿಯುತ್ತಿವೆ ಎಂದು ಮಧ್ಯ ರೈಲ್ವೇ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ್‌ ಹೇಳಿದ್ದಾರೆ.

ಮಾತುಕತೆ ನಡೆದಿಲ್ಲ :

ಷರತ್ತುಗಳನ್ನು ಹೊಂದಿರುವ ಸಾಮಾನ್ಯ ಜನರಿಗೆ ಅನುಮತಿ ಕೋರಿ ಅ. 28ರಂದು ರಾಜ್ಯ ಸರಕಾರವು ರೈಲ್ವೆಗೆ ಪತ್ರ ಬರೆದಿದ್ದು, ಕೇಂದ್ರ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ಶಿವಾಜಿ ಸುತಾರ್‌ ಅವರ ಪ್ರಕಾರ, ಅ. 28ರ ಬಳಿಕ ಬೋರ್ಡ್‌ ಪರೀಕ್ಷೆಗೆ ಹಾಜರಾಗುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಅನುಮತಿ ಕೋರಿದೆ. ಆದರೆ ಇದುವರೆಗೆ ಸಾರ್ವಜನಿಕರಿಗೆ ಲೋಕಲ್‌ ರೈಲಿನ ಸೇವೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎನ್ನಲಾಗಿದೆ. ರೈಲ್ವೇ ನಿಜವಾದ ಪರಿಸ್ಥಿತಿಯನ್ನು ತಿಳಿಸಿದೆ

ರಾಜ್ಯ ಸರಕಾರವು ಪ್ರಯಾಣಿಕರನ್ನು ವರ್ಗೀಕರಿಸಿದ ಬಳಿಕ ರೈಲ್ವೇ ನಿಜವಾದ ಪರಿಸ್ಥಿತಿಯನ್ನು ತಿಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಪ್ರಯಾಣಿ ಕರಿಗೆ ಮರು ವರ್ಗೀಕರಣ ಅನಿವಾರ್ಯ ವಾಗುತ್ತದೆ. ಸ್ಥಳೀಯ ರೈಲಿನಲ್ಲಿ ಮುಂಬಯಿ ವಕೀಲರು ಬಹಳ ಸಮಯದಿಂದ ಪ್ರಯಾಣಿಸಲು ಅನುಮತಿ ಕೋರಿದ್ದರು. ಆದರೆ ಕೋವಿಡ್ ಕಾರಣದಿಂದಾಗಿ ಅನುಮತಿ ನೀಡಲಾಗಿರಲಿಲ್ಲ. ಈಗ ಮಹಾರಾಷ್ಟ್ರ ಸರಕಾರದ ಆದೇಶವನ್ನು ಅನುಸರಿಸಿ ರೈಲ್ವೇ ಎಲ್ಲ ಅಭ್ಯಾಸ ಮಾಡುವ ವಕೀಲರು ಮತ್ತು ಅವರ ಗುಮಾಸ್ತರಿಗೆ ಸ್ಥಳೀಯ ರೈಲುಗಳ ಮೂಲಕ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ.

ನಿಲ್ದಾಣಗಳಲ್ಲಿ  ಕೋವಿಡ್  ಪರೀಕ್ಷೆ ಪ್ರಾರಂಭ ಪ್ರಸ್ತುತ ರೈಲ್ವೇ ನಿಲ್ದಾಣಗಳಲ್ಲೂ ಕೋವಿಡ್   ಪರೀಕ್ಷೆ ಆರಂಭಿಸಲಾಗಿರುವುದರಿಂದ ದ್ದಾರೆ ಪ್ರಸ್ತುತ ಮುಂಬಯಯಲ್ಲಿ ನಿಯಂತ್ರಣದಲ್ಲಿದೆ. ಕೋವಿಡ್  ಎರಡನೇ ಅಲೆಯನ್ನು  ಎದುರಿಸಲು ಬಿಎಂಸಿ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಕೊರೊನಾ ಪ್ರಕರಣ ತಡೆಗೆ ಜನರು ಜಾಗರೂಕರಾಗಿರಬೇಕು ಎಂದು ಬಿಎಂಸಿ ಮನವಿ ಮಾಡಿದೆ.

ಅ. 28ರ ಬಳಿಕ ಸಾಮಾನ್ಯ ಜನರಿಗೆ ರೈಲುಗಳಲ್ಲಿ  ಪ್ರಯಾಣಿಸಲು ಅನುಮತಿ ನೀಡುವ ಬಗ್ಗೆ ರಾಜ್ಯ ಸರಕಾರದಿಂದ ಇನ್ನೂ ಔಪಚಾರಿಕ ಮಾತುಕತೆ ನಡೆದಿಲ್ಲ. ಡಿ. 15ರಿಂದ ಸಾಮಾನ್ಯ ಜನರಿಗೆ ಲೋಕಲ್‌ ಸೇವೆಯ ಅನುಮತಿ ಪಡೆಯುವ ಬಗ್ಗೆ  ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಸೋಂಕಿನ ಪ್ರಕರಣಗಳ ಅಂಕಿ ಅಂಶಗಳನ್ನು ಪಡೆದು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು. -ಶಿವಾಜಿ ಸುತಾರ್‌, ಮುಖ್ಯ ಜನಸಂಪರ್ಕಾಧಿಕಾರಿ, ಮಧ್ಯ ರೈಲ್ವೇ ವಿಭಾಗ

ಟಾಪ್ ನ್ಯೂಸ್

4-mangaluru

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

pavitra lokesh and naresh starer matte maduve releasing on June 9

ಮದುವೆ ಓಡಾಟದಲ್ಲಿ ಪವಿತ್ರ-ನರೇಶ್‌

siddaramaiah

Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadsd

ಮನುಷ್ಯನಾಗಿ ದೇವರ ಚಿಂತನೆ ಮಾಡದಿದ್ದರೇನು ಲಾಭ: ಗೋಕರ್ಣ ಪರ್ತಗಾಳಿ ಶ್ರೀ

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಮುಂಬಯಿ; ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ

ಮುಂಬಯಿ; ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ

ಹೊನ್ನಾವರ ಸಿರಿಧಾನ್ಯ ಗ್ರಾಮ; ಆರೋಗ್ಯ ವೃದ್ಧಿಗೆ ಯೋಜನೆ

ಹೊನ್ನಾವರ ಸಿರಿಧಾನ್ಯ ಗ್ರಾಮ; ಆರೋಗ್ಯ ವೃದ್ಧಿಗೆ ಯೋಜನೆ

ಮುಂಬೈ: ಕಮಿಷನ್‌ ರಹಿತ ಫುಡ್‌ ಡೆಲಿವರಿ App “ವಾಯು” ಬಿಡುಗಡೆ

ಮುಂಬೈ: ಕಮಿಷನ್‌ ರಹಿತ ಫುಡ್‌ ಡೆಲಿವರಿ App “ವಾಯು” ಬಿಡುಗಡೆ

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

ಕಾಡಾನೆ ಸೆರೆ ಸಮಸ್ಯೆಗೆ ಪರಿಹಾರವೇ?

ಕಾಡಾನೆ ಸೆರೆ ಸಮಸ್ಯೆಗೆ ಪರಿಹಾರವೇ?

ಕೋರ್ಟ್‌ ಆದೇಶಕ್ಕೂ ತಲೆಬಾಗದ ಕುಟುಂಬ  

ಕೋರ್ಟ್‌ ಆದೇಶಕ್ಕೂ ತಲೆಬಾಗದ ಕುಟುಂಬ  

ಎಂಡಿ ವಿದ್ಯಾರ್ಥಿನಿ ಕ್ವಾರಿಗೆ ಹಾರಿ ಆತ್ಮಹತ್ಯೆ

ಎಂಡಿ ವಿದ್ಯಾರ್ಥಿನಿ ಕ್ವಾರಿಗೆ ಹಾರಿ ಆತ್ಮಹತ್ಯೆ

tdy-7

ಪತ್ನಿಯ ಶೀಲ ಶಂಕಿಸಿ ಗುಪ್ತಾಂಗಕ್ಕೆ ಇರಿದು ಹತ್ಯೆ

tdy-6

ನಿಮಿಷದಲ್ಲಿ ಸಾವಿರ ಸಸಿ ನೆಡುವ ಅಭಿಯಾನ