81 ವರ್ಷದ ಶ್ರೀಲಂಕಾ ಅಜ್ಜನಕೆನ್ನೆಗೆ ಮುತ್ತಿಟ್ಟ ವಿರಾಟ್‌ ಕೊಹ್ಲಿ!


Team Udayavani, Jul 31, 2017, 7:30 AM IST

31-sports-2.jpg

ಗಾಲೆ: ಪರ್ಸಿ ಅಭಯಶೇಖರ ಯಾನೆ “ಪರ್ಸಿ ಅಂಕಲ್‌’! ಶ್ರೀಲಂಕಾ ಕ್ರಿಕೆಟಿನ ಬಹು ದೊಡ್ಡ ಅಭಿಮಾನಿ. ಭಾರತದಲ್ಲಿ ಸುಧೀರ್‌ ಕುಮಾರ್‌ ಚೌಧರಿ ಇದ್ದಂತೆ, ಪಾಕಿಸ್ತಾನದಲ್ಲಿ ಚೌಧರಿ ಅಬ್ದುಲ್‌ ಜಲೀಲ್‌ (ಕಾಕಾ) ಇದ್ದಂತೆ ಲಂಕಾದಲ್ಲಿ ಪರ್ಸಿ ಅಭಯಶೇಖರ. ಆದರೆ ಇವರೆಲ್ಲರಿಗಿಂತ ಅಭಯಶೇಖರ ಹಿರಿಯರು. 

ಲಂಕಾ ತಂಡ ಎಲ್ಲೇ ಕ್ರಿಕೆಟ್‌ ಆಡುತ್ತಿರಲಿ ದೇಶದ ಧ್ವಜ ಹಿಡಿದು ಆಭಯ ಶೇಖರ ಹಾಜರ್‌. ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ ಪಂದ್ಯದಲ್ಲೂ ಅವರು ತವರಿನ ತಂಡವನ್ನು ಹುರಿದುಂಬಿಸುತ್ತಿದ್ದರು. ಆದರೆ ಇಲ್ಲಿ ಲಂಕಾ ತಂಡ ಭಾರೀ ಅಂತರದಿಂದ ಸೋಲುವುದನ್ನು ಅವರು ಕಾಣಬೇಕಾಯಿತು.
ಈ ನೋವಿನ ನಡುವೆಯೂ ಅವರಿಗೆ ಭಾರತದ ಕಡೆಯಿಂದ ಜನ್ಮದಿನದ ವಿಶಿಷ್ಟ ಉಡು ಗೊರೆಯೊಂದು ಒಂದು ದಿನ ಮುಂಚಿತವಾಗಿ ಸಿಕ್ಕಿದೆ. ಗಾಲೆ ಟೆಸ್ಟ್‌ ಪಂದ್ಯದ ಪ್ರಶಸ್ತಿ ವಿತರಣಾ ಸಮಾರಂಭಕ್ಕೂ ಮೊದಲು ನಾಯಕ ವಿರಾಟ್‌ ಕೊಹ್ಲಿ ಮತ್ತು ಶಿಖರ್‌ ಧವನ್‌ ಸ್ಟೇಡಿಯಂನಲ್ಲಿ ಹಾಜರಿದ್ದ ಅಭಯಶೇಖರ ಬಳಿ ತೆರಳಿದ್ದಾರೆ. “ಹ್ಯಾಪಿ ಬರ್ತ್‌ಡೇ ಪರ್ಸಿ ಅಂಕಲ್‌’ ಎನ್ನುತ್ತ ಅವರ ಕೆನ್ನೆಗೆ ಕೊಹ್ಲಿ ಮುತ್ತೂಂದನ್ನು ನೀಡಿದ್ದಾರೆ. ಅಚ್ಚರಿ ಹಾಗೂ ಆನಂದದಲ್ಲಿ ತೇಲಾಡಿದ ಅಭಯಶೇಖರ, ಪ್ರತಿಯಾಗಿ ಕೊಹ್ಲಿಯ ಎರಡೂ ಕೆನ್ನೆಗಳಿಗೆ ಮುತ್ತನ್ನಿತ್ತಿದ್ದಾರೆ. ಅಂದ ಹಾಗೆ, ಭಾನುವಾರ ಪರ್ಸಿ ಅಭಯಶೇಖರ 81ರ ಹರೆಯಕ್ಕೆ ಕಾಲಿರಿಸಿದರು! “ಕೊಹ್ಲಿ ನನಗೆ ಮುತ್ತು ನೀಡುವಾಗ ಸುತ್ತಲೂ ಇದ್ದ ವೀಕ್ಷಕರು ನಗತೊಡಗಿದರು. ನನಗೆ 81 ವರ್ಷ ಆಯಿತು ಎಂಬುದನ್ನು ಕೊಹ್ಲಿಗೆ ನಂಬಲಾಗಲಿಲ್ಲ ಎಂದು ತಿಳಿಸಿದರು. 

2015ರ ನೆನಪುಗಳ ಬಿಚ್ಚಿಟ್ಟ ಪರ್ಸಿ
ಕಳೆದ ಸಲ ಭಾರತ ತಂಡದೊಂದಿಗೆ ಬೆರೆತ ಕ್ಷಣವನ್ನೂ ಅಭಯಶೇಖರ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. “2015ರಲ್ಲಿ ಭಾರತ ತಂಡ ಇಲ್ಲಿಗೆ ಬಂದಾಗ ಭಾರೀ ಮಳೆ ಇತ್ತು. ಇಂಥ ಒಂದು ಮಳೆ ಬಿಡುವಿನ ವೇಳೆ ಕೊಹ್ಲಿ ಮತ್ತು ರೋಹಿತ್‌ ಶರ್ಮ ನನ್ನನ್ನು ಅವರ ಡ್ರೆಸ್ಸಿಂಗ್‌ ರೂಮ್‌ಗೆ
ಆಹ್ವಾನಿಸಿದ್ದರು. ಅಲ್ಲಿ ಸಾಕಷ್ಟು ತಮಾಷೆ ಮಾಡಿದೆವು. ಆದರೆ ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳದ ಸದಸ್ಯರು ನನಗೆ ಡ್ರೆಸ್ಸಿಂಗ್‌ ರೂಮ್‌ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ. ಎರಡೂ ಕ್ರಿಕೆಟ್‌ ಮಂಡಳಿಗಳ ಕಾರ್ಯದರ್ಶಿಗಳು ನಡುವೆ ಪ್ರವೇಶಿಸಿದ ಬಳಿಕ ಅನುಮತಿ ಲಭಿಸಿತ್ತು.

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.