ಮತ್ತೆ ನಾಯಕನಾದ ಧೋನಿ
Team Udayavani, Sep 25, 2018, 5:13 PM IST
ದುಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಏಷ್ಯಾ ಕಪ್ ನ ಸೂಪರ್ ಫೋರ್ ವಿಭಾಗದ ಕೊನೆಯ ಅಫಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಧೋನಿ ಭಾರತದ ನಾಯಕತ್ವ ವಹಿಸಿದ್ದಾರೆ. ಭಾರತ ತಂಡ ಈಗಾಗಲೇ ಫೈನಲ್ ತಲುಪಿರುವುದರಿಂದ ತಂಡದಲ್ಲಿ ಹಲವಾರು ಬದಲಾವಣೆ ಮಾಡಲಾಗಿದ್ದು, ಸರಣಿಯಲ್ಲಿ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮ ಗೆ ವಿಶ್ರಾಂತಿ ನೀಡಲಾಗಿದೆ.
ಈ ಪಂದ್ಯದಲ್ಲಿ ಅಫಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯಕ್ಕೆ ದೀಪಕ್ ಚಾಹರ್ ಪಾದಾರ್ಪಣೆ ಮಾಡಿದರೆ, ಕನ್ನಡಿಗರಾದ ಲೋಕೇಶ್ ರಾಹುಲ್, ಮನೀಶ್ ಪಾಂಡೆ, ಬೌಲರ್ ಗಳಾದ ಸಿದ್ದಾರ್ಥ್ ಕೌಲ್, ಖಲೀಲ್ ಅಹ್ಮದ್, ಪುನರಾಯ್ಕೆಯಾಗಿದ್ದಾರೆ.
ಈ ಪಂದ್ಯಕ್ಕೆ ಭಾರತ ಹಲವರಿಗೆ ವಿಶ್ರಾಂತಿ ನೀಡಿದ್ದು, ನಾಯಕ ರೋಹಿತ್ ಶರ್ಮ, ಶಿಖರ್ ಧವನ್, ಭುವನೇಶ್ವರ್ ಕುಮಾರ್, ಬುಮ್ರಾ, ಚಾಹಲ್ ಪಂದ್ಯದಲ್ಲಿ ಈ ಕಣಕ್ಕಿಳಿಯುತ್ತಿಲ್ಲ. ಅಫ್ಘಾನ್ ತಂಡ ಎರಡು ಬದಲಾವಣೆ ಮಾಡಿದೆ. ಜಾವೇದ್ ಅಹಮದಿ ಮತ್ತು ನಿಜಾಬುಲ್ಲಾ ಜದ್ರಾನ್ ಈ ಪಂದ್ಯ ಆಡುತ್ತಿದ್ದಾರೆ.
ತಂಡಗಳು
ಭಾರತ: ಮಹೇಂದ್ರ ಧೋನಿ ( ನಾಯಕ/ ವಿ.ಕೀ ), ರಾಹುಲ್, ಅಂಬಟಿ ರಾಯುಡು, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಕೇದಾರ್ ಜಾದವ್, ರವೀಂದ್ರ ಜಡೇಜ, ದೀಪಕ್ ಚಾಹರ್, ಸಿದ್ದಾರ್ಥ ಕೌಲ್, ಕುಲದೀಪ್ ಯಾದವ್, ಖಲೀಲ್ ಅಹಮದ್.
ಅಫಘಾನಿಸ್ತಾನ: ಅಸ್ಗರ್ ಅಫ್ಘಾನ್ ( ನಾಯಕ), ಮೊಹಮ್ಮದ್ ಶೆಹಜಾದ್( ವಿ.ಕೀ), ಜಾವೆದ್ ಅಹಮದಿ, ರೆಹಮತ್ ಶಾ, ಹಶ್ತಾಮುಲ್ಲಾಹ್ ಶಹಿದಿ, ನಿಜಾಬುಲ್ಲಾಹ್ ಜದ್ರಾನ್, ಮೊಹಮ್ಮದ್ ನಬಿ, ರಶೀದ್ ಖಾನ್, ಗುಲ್ಬದಿನ್ ನೈಬ್, ಅಫ್ತಾಬ್ ಅಲಾಮ್, ಮುಜೀಬ್ ರೆಹಮಾನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್