ಆಸ್ಟ್ರೇಲಿಯಕ್ಕೆ ಭರ್ಜರಿ ಗೆಲುವು


Team Udayavani, Jul 13, 2017, 3:50 AM IST

geluvu.jpg

ಬ್ರಿಸ್ಟಲ್‌: ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ಆಸ್ಟ್ರೇಲಿಯ ವನಿತೆಯರು ಐಸಿಸಿ ವನಿತಾ ವಿಶ್ವಕಪ್‌ ಕ್ರಿಕೆಟ್‌ ಕೂಟದ ಬುಧವಾರದ ಪಂದ್ಯದಲ್ಲಿ ಭಾರತೀಯ ವನಿತೆಯರನ್ನು 8 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿದ್ದಾರೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ನಡೆಸಿದ ಆಸ್ಟ್ರೇಲಿಯ ತಂಡವು ಭಾರತ ತಂಡವನ್ನು 7 ವಿಕೆಟಿಗೆ 226 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾಯಿತು. ಇದಕ್ಕುತ್ತರವಾಗಿ ನಾಯಕಿ ವೆ‌ುಗ್‌ ಲ್ಯಾನಿಂಗ್‌ ಮತ್ತು ಎಲಿಸ್‌ ಪೆರ್ರಿ ಅವರ ಭರ್ಜರಿ ಆಟದಿಂದಾಗಿ ಆಸ್ಟ್ರೇಲಿಯ ತಂಡವು 45.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟದಲ್ಲಿ ಜಯಭೇರಿ ಸಾಧಿಸಿತು. ಈ ಗೆಲುವಿನೊಂದಿಗೆ ಒಟ್ಟು 10 ಅಂಕ ಗಳಿಸಿರುವ ಆಸ್ಟ್ರೇಲಿಯ ಸೆಮಿಫೈನಲಿಗೇರಿತು. ಆಸ್ಟ್ರೇಲಿಯ ಅಂತಿಮ ಲೀಗ್‌ ಪಂದ್ಯದಲ್ಲಿ ಶನಿವಾರ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ದಿನದ ಇನ್ನೊಂದು ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಒಟ್ಟು 9 ಅಂಕ ಪಡೆದಿದೆ. ನ್ಯೂಜಿಲ್ಯಾಂಡ್‌ ತಂಡವನ್ನು ಸೋಲಿಸಿದ ಇಂಗ್ಲೆಂಡ್‌ ಕೂಡ 10 ಅಂಕ ಹೊಂದಿದೆ. ಹಾಗಾಗಿ ಇಂಗ್ಲೆಂಡ್‌, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಮೊದಲ ಮೂರು ತಂಡಗಳಾಗಿ ಸೆಮಿಫೈನಲಿಗೇರುವುದು ಖಚಿತವಾಗಿದೆ. 

ಗೆಲ್ಲಲು 227 ರನ್‌ ಗಳಿಸುವ ಗುರಿ ಪಡೆದ ಆಸ್ಟ್ರೇಲಿಯಕ್ಕೆ ಆರಂಭಿಕರಾದ ನಿಕೋಲ್‌ ಬೋಲ್ಟನ್‌ ಮತ್ತು ಬೆತ್‌ ಮೂನಿ ಉತ್ತಮ ಆರಂಭ ಒದಗಿಸಿದರು. ಉತ್ತಮವಾಗಿ ಆಡಿದ ಅವರಿಬ್ಬರು ಮೊದಲ ವಿಕೆಟಿಗೆ 62 ರನ್‌ ಪೇರಿಸಿದರು. ಅವರಿಬ್ಬರು ಅನುಕ್ರಮವಾಗಿ 36 ಮತ್ತು 45 ರನ್‌ ಹೊಡೆದರು. ಇವರಿಬ್ಬರ ಬಳಿಕ ಲ್ಯಾನಿಂಗ್‌ ಮತ್ತು ಪೆರ್ರಿ ಭರ್ಜರಿ ಆಟವಾಡಿದರು. ಭಾರತೀಯ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ಮುರಿಯದ ಮೂರನೇ ವಿಕೆಟಿಗೆ 124 ರನ್‌ ಪೇರಿಸಿ ತಂಡದ ಗೆಲುವು ಸಾರಿದರು. ಲ್ಯಾನಿಂಗ್‌ 88 ಎಸೆತಗಳಿಂದ 7 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 76 ರನ್‌ ಗಳಿಸಿದರೆ ಪೆರ್ರಿ 67 ಎಸೆತಗಳಿಂದ 60 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಈ ಸೋಲಿನಿಂದ ಭಾರತಕ್ಕೆ ಸೆಮಿಫೈನಲಿಗೇರುವ ದಾರಿ ದುರ್ಗಮವಾಗಿದೆ. ಭಾರತ ಅಂತಿಮ ಲೀಗ್‌ ಪಂದ್ಯದಲ್ಲಿ ಶನಿವಾರ ನ್ಯೂಜಿಲ್ಯಾಂಡ್‌ ತಂಡವನ್ನು ಎದುರಿಸಲಿದೆ. ನ್ಯೂಜಿಲ್ಯಾಂಡ್‌ ಬುಧವಾರದ ಪಂದ್ಯದಲ್ಲಿ ಇಂಗ್ಲೆಂಡಿಗೆ ಶರಣಾಗಿದೆ. ಸದ್ಯ ಭಾರತ ಮತ್ತು ನ್ಯೂಜಿಲ್ಯಾಂಡ್‌ ಅನುಕ್ರಮವಾಗಿ 8 ಮತ್ತು 7 ಅಂಕ ಹೊಂದಿದೆ. ಅಂತಿಮ ಲೀಗ್‌ ಪಂದ್ಯ ಎರಡೂ ತಂಡಗಳಿಗೆ ಕ್ವಾರ್ಟರ್‌ಫೈನಲ್‌ ಪಂದ್ಯವಿದ್ದಂತೆ. ಗೆದ್ದ ತಂಡ ನಾಲ್ಕನೇ ತಂಡವಾಗಿ ಸೆಮಿಫೈನಲಿಗೇರಲಿದೆ. 

ಪೂನಂ ರಾವತ್‌ ಶತಕ: ಆರಂಭಿಕ ಆಟಗಾರ್ತಿ ಪೂನಂ ರಾವತ್‌ ಮತ್ತು ವಿಶ್ವದಾಖಲೆಗೈದ ಮಿಥಾಲಿ ರಾಜ್‌ ಅವರ ಸಾಧನೆಯಿಂದಾಗಿ ಭಾರತ ಚೇತರಿಸುವಂತಾಯಿತು.

ರಾವತ್‌ ಮತ್ತು ಮಿಥಾಲಿ ಅವರನ್ನು ಬಿಟ್ಟರೆ ಉಳಿದವರ್ಯಾರೂ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿಲ್ಲ. ಆದರೆ ರಾವತ್‌ ಮತ್ತು ಮಿಥಾಲಿ ಅವರ ಆಟ ಅತ್ಯಂತ ನಿಧಾನಗತಿಯಲ್ಲಿ ಸಾಗಿತ್ತು. ಇದರಿಂದಾಗಿ ಭಾರತ ಉತ್ತಮ ಮೊತ್ತ ಪೇರಿಸಲು ವಿಫ‌ಲವಾಯಿತು.

ಸ್ಮತಿ ಮಂಧನಾ ಅವರನ್ನು ಕಳೆದುಕೊಂಡ ಬಳಿಕ ರಾವತ್‌ ಅವರನ್ನು ಸೇರಿಕೊಂಡ ಮಿಥಾಲಿ ಅವರು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಅವರಿಬ್ಬರು ದ್ವಿತೀಯ ವಿಕೆಟಿಗೆ ಅಮೂಲ್ಯ 157 ರನ್‌ ಪೇರಿಸಿದರೂ ಅದಕ್ಕಾಗಿ 37 ಓವರ್‌ ತೆಗೆದುಕೊಂಡಿದ್ದರು. 
 

ಸಂಕ್ಷಿಪ್ತ ಸ್ಕೋರು: ಭಾರತ 7 ವಿಕೆಟಿಗೆ 226 (ಪೂನಂ ರಾವತ್‌ 106, ಮಿಥಾಲಿ ರಾಜ್‌ 69, ಹರ್ಮನ್‌ಪ್ರೀತ್‌ ಕೌರ್‌ 23, ಮೆಗಾನ್‌ ಶಟ್‌ 52ಕ್ಕೆ 2, ಎಲಿಸ್‌ ಪೆರ್ರಿ 37ಕ್ಕೆ 2); ಆಸ್ಟ್ರೇಲಿಯ 2 ವಿಕೆಟಿಗೆ 227 (ನಿಕೋಲ್‌ ಬೋಲ್ಟನ್‌ 36, ಬೆತ್‌ ಮೂನಿ 45, ಮೆಗ್‌ ಲ್ಯಾನಿಂಗ್‌ 76 ಔಟಾಗದೆ, ಎಲಿಸ್‌ ಪೆರ್ರಿ 60 ಔಟಾಗದೆ). 

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.