ಬಲ್ಗೇರಿಯಾ ಕುಸ್ತಿ: ಬಂಗಾರ ಗೆದ್ದ ಭಜರಂಗ್
Team Udayavani, Mar 4, 2019, 4:01 AM IST
ಹೊಸದಿಲ್ಲಿ: ಬಲ್ಗೇರಿಯಾದ ರುಸೆಯಲ್ಲಿ ನಡೆಯುತ್ತಿರುವ “ಡ್ಯಾನ್ ಕೊಲೋವ್-ನಿಕೋಲಾ ಪೆಟ್ರೋವ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯ, ಪೂಜಾ ದಂಡಾ ಚಿನ್ನದ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಸಂದೀಪ್ ತೋಮರ್, ಸಾಕ್ಷಿ ಮಲಿಕ್ ಹಾಗೂ ಸರಿತಾ ಮೋರ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಭಜರಂಗ್ 65 ಕೆಜಿ ಫ್ರೀಸ್ಟೈಲ್ ವಿಭಾಗದ ಫೈನಲ್ನಲ್ಲಿ ಅಮೆರಿಕದ ಜೋರ್ಡಾನ್ ಒಲಿವರ್ ಅವರನ್ನು 12-3 ಭಾರೀ ಅಂತರದಿಂದ ಸೋಲಿಸಿ ಚಿನ್ನಕ್ಕೆ ಕೊರಳೊಡ್ಡಿದರು. ಈ ಪದಕವನ್ನು ಪಾಕಿಸ್ಥಾನದ ಕೈಯಿಂದ ಸುರಕ್ಷಿತವಾಗಿ ತವರಿಗೆ ಮರಳಿದ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಅರ್ಪಿಸಿ ಕ್ರೀಡಾಸ್ಫೂರ್ತಿ ಮೆರೆದರು. ಈ ಚಿನ್ನದೊಂದಿಗೆ ಭಜರಂಗ್ ಗರಿಷ್ಠ ರ್ಯಾಂಕಿಂಗ್ ಅಂಕ ಗಳಿಸಿದ್ದಾರೆ.
“ಈ ಚಿನ್ನವನ್ನು ನಾನು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಅರ್ಪಿಸುತ್ತೇನೆ. ಅವರೇ ನನಗೆ ಸ್ಫೂರ್ತಿ. ಮುಂದೊಂದು ದಿನ ಅವರನ್ನು ಭೇಟಿಯಾಗಿ ಹಸ್ತಲಾಘವ ಮಾಡಬೇಕೆಂಬ ಆಸೆಯಿದೆ’ ಎಂದು ಭಜರಂಗ್ ಹೇಳಿದ್ದಾರೆ. ಇದು ಭಜರಂಗ್ ಗೆದ್ದ 10ನೇ ಅಂತಾರಾಷ್ಟ್ರೀಯ ಪದಕವಾಗಿದೆ. ಕಳೆದ ವರ್ಷ ಭಜರಂಗ್ ಕಾಮನ್ವೆಲ್ತ್ ಮತ್ತು ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಕಳೆದ 5 ಟೂರ್ನಿಗಳಲ್ಲಿ ಅವರು ಒಟ್ಟು 4 ಚಿನ್ನ, ಒಂದು ಬೆಳ್ಳಿ ಪದಕ ಗೆದ್ದಂತಾಯಿತು. ಪುರುಷರ 61 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಂದೀಪ್ ತೋಮರ್ ಬೆಳ್ಳಿ ಪದಕ ಜಯಿಸಿದರು.
ಪೂಜಾ ಬಂಗಾರ ಬೇಟೆ
ಇದಕ್ಕೂ ಮುನ್ನ ನಡೆದ ವನಿತೆಯರ 59 ಕೆಜಿ ವಿಭಾಗ ಸ್ಪರ್ಧೆಯಲ್ಲಿ ಪೂಜಾ ದಂಡಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಮತ್ತು 59 ಕೆಜಿ ವಿಭಾಗದಲ್ಲಿ ಸರಿತಾ ಮೋರ್ ಬೆಳ್ಳಿ ಪದಕ ಗೆದ್ದರು.
ವಿನೇಶ್ ಪೋಗಟ್ ಚಿನ್ನದ ಭರವಸೆ
ಭಾರತಕ್ಕೆ ವಿನೇಶ್ ಪೋಗಟ್ ಅವರಿಂದ ಮತ್ತೂಂದು ಚಿನ್ನದ ಪದಕ ಸಿಗುವ ಸಾಧ್ಯತೆ ಇದೆ. ವಿನೇಶ್ 53 ಕೆಜಿ ವಿಭಾಗದ ಫೈನಲ್ನಲ್ಲಿ ಚೀನದ ಖೀನ್ಯು ಪಾಂಗ್ ಅವರನ್ನು ಎದುರಿಸಲು ಸಿದ್ಧರಾಗಿದ್ದಾರೆ. ಸೆಮಿಫೈನಲ್ನಲ್ಲಿ ವಿನೇಶ್ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ಪದಕ ವಿಜೇತ ಸಾರಾ ಹಿಲೆ ಬ್ರಾಂಡ್ ವಿರುದ್ಧ ಜಯಿಸಿದ್ದರು.
50 ಕೆಜಿ ವಿಭಾಗದಿಂದ 53 ಕೆಜಿಗೆ ಬದಲಾಯಿಸಿಕೊಂಡ ಬಳಿಕ ವಿನೇಶ್ಗೆ ಸ್ಪರ್ಧಿಸಿದ ಮೊದಲ ಕೂಟ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…