ಬೆಂಗಳೂರಿಗೆ ಭರ್ಜರಿ ಜಯ


Team Udayavani, Oct 23, 2018, 6:00 AM IST

28.jpg

ಪುಣೆ: ಇಲ್ಲಿ ನಡೆದ ಇಂಡಿಯನ್‌ ಸೂಪರ್‌ ಲೀಗ್‌ ಫ‌ುಟ್‌ಬಾಲ್‌ ಪಂದ್ಯದಲ್ಲಿ ಲೀಲಾಜಾಲವಾಗಿ ಆಡಿದ ಬೆಂಗಳೂರು ಎಫ್ಸಿ ತಂಡ ಆತಿಥೇಯ ಎಫ್ಸಿ ಪುಣೆ ಸಿಟಿಯನ್ನು ಸುಲಭವಾಗಿ ಮಣಿಸಿತು. ನಿಗದಿತ 90 ನಿಮಿಷಗಳ ಆಟ ಮುಗಿಸಿ, ಹೆಚ್ಚುವರಿ 3 ನಿಮಿಷ ಕಳೆದರೂ ಎದುರಾಳಿಗೆ ಒಂದೂ ಗೋಲು ಬಾರಿಸಲು ಬೆಂಗಳೂರು ಅವಕಾಶ ಕೊಡಲಿಲ್ಲ. ಬೆಂಗಳೂರಿನ ಗೆಲುವಿನ ಅಂತರ 3-0. ಇಡೀ ಪಂದ್ಯದ ಮೇಲೆ ಬೆಂಗಳೂರು ಎಫ್ಸಿ ಸಂಪೂರ್ಣ ಹಿಡಿತ ಸಾಧಿಸಿತ್ತು. ಎದುರಾಳಿ ಪಾಳೆಯದ ಮೇಲೆ ಸತತವಾಗಿ ಎರಗುತ್ತಲೇ ಸಾಗಿತು. ಮತ್ತೂಂದು ಕಡೆ ಎದುರಾಳಿಯ ಗೋಲು ಬಾರಿಸುವ ಎಲ್ಲ ಯತ್ನಗಳನ್ನು ವಿಫ‌ಲಗೊಳಿಸಿತು.

ಬೆಂಗಳೂರಿನ ಅಬ್ಬರದಲ್ಲಿ ಮುಖ್ಯ ಪಾತ್ರವಹಿಸಿದ್ದು ಸುನೀಲ್‌ ಚೆಟ್ರಿ. ಅವರು 2 ಗೋಲು ಬಾರಿಸಿದರು. ಇನ್ನೊಂದು ಗೋಲನ್ನು ಮಿಕು ಬಾರಿಸಿದರು. ಸುನೀಲ್‌ ಚೆಟ್ರಿಯವರ ಅಬ್ಬರ ಹೇಗಿತ್ತೆಂದರೆ ಅವರ ಸತತ ದಾಳಿಯನ್ನು ತಡೆಯಲು ಪುಣೆ ತಂಡಕ್ಕೆ ಸಾಧ್ಯವಾಗಲೇ ಇಲ್ಲ. ಚೆಟ್ರಿ 41ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ಬಾರಿಸಿದರು. ಅಲ್ಲಿಗೆ ಸುಮ್ಮನಿರದ ಅವರು 43ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿದರು. ಎದುರಾಳಿ ಆಟಗಾರರು ಮತ್ತು ಗೋಲ್‌ಕೀಪರ್‌ ವಿಶಾಲ್‌ ಕೈಥ್‌ ಅವರ ರಕ್ಷಣೆಯನ್ನು ಭೇದಿಸಿ ಅವರು ಮುನ್ನುಗ್ಗಿದ ಪರಿ ಅಚ್ಚರಿ ಮೂಡಿಸಿತು.

ಪಂದ್ಯದ 64ನೇ ನಿಮಿಷದಲ್ಲಿ ಬೆಂಗಳೂರು ಪರ ದಾಖಲಾದ ಮತ್ತೂಂದು ಗೋಲನ್ನು ಬಾರಿಸಿದ್ದು ಮಿಕು. ತಮಗೆ ಸಿಕ್ಕ ಪಾಸನ್ನು ಅದ್ಭುತ ರೀತಿಯಲ್ಲಿ ಉಪಯೋಗಿಸಿದ ಮಿಕು ಚೆಂಡನ್ನು ತಳ್ಳಿಕೊಂಡು ಹೋಗಿ ಗೋಲುಪೆಟ್ಟಿಗೆಯೊಳಗೆ ದಬ್ಬಿದರು. ಅಷ್ಟರಲ್ಲಿ ಬಹುತೇಕ ಪಂದ್ಯ ಪುಣೆ ಕೈತಪ್ಪಿಯಾಗಿತ್ತು. ಆ ಹಂತದಲ್ಲಿ ಬೆಂಗಳೂರಿನ ಸ್ಥಿತಿ ಬಲಿಷ್ಠವಾಗಿದ್ದರಿಂದ ಅದು ಮುಂದೆ ಎದುರಾಳಿ ಗೋಲು ಬಾರಿಸದಂತೆ ನೋಡಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಿತು. 

ಪುಣೆ ಕಳಪೆಯಾಟ: ಇಡೀ ಪಂದ್ಯದಲ್ಲಿ ಪುಣೆ ಎಲ್ಲ ವಿಭಾಗದಲ್ಲಿ ವಿಫ‌ಲವಾಯಿತು. ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು, ಗೋಲು ಹೊಡೆಯುವ ಯತ್ನ, ಪಾಸ್‌ಗಳನ್ನು ಸ್ವೀಕರಿಸುವ ರೀತಿ ಎಲ್ಲದರಲ್ಲೂ ಅದು ಕಳಪೆಯಾಟವಾಡಿತು. ಮತ್ತೂಂದು ಕಡೆ ಈ
ಎಲ್ಲ ವಿಭಾಗದಲ್ಲಿ ಬೆಂಗಳೂರು ಎಫ್ಸಿ ಮಿಂಚಿತು. ಆದ್ದರಿಂದ ತಂಡದ ಜಯಭೇರಿ ಸುಲಭವಾಯಿತು. ಒಟ್ಟು 411 ಪಾಸ್‌ಗಳನ್ನು ನೀಡಿದ ಪುಣೆ 266 ಪಾಸ್‌ಗಳನ್ನು ಯಶಸ್ವಿಯಾಗಿ ಸ್ವೀಕರಿಸಿತು. ಉಳಿದ ಪಾಸ್‌ಗಳು ವ್ಯರ್ಥವಾದವು. ಇದರ ವಿರುದ್ಧವೆಂಬಂತೆ ಬೆಂಗಳೂರು 398 ಪಾಸ್‌ ನೀಡಿ ಅದರಲ್ಲಿ 254ನ್ನು ಯಶಸ್ವಿಯಾಗಿ ಸ್ವೀಕರಿಸಿತು.

ಅಜೇಯ ಬೆಂಗಳೂರು: ಬೆಂಗಳೂರು ಎಫ್ಸಿ ಇದುವರೆಗೆ 3 ಪಂದ್ಯವಾಡಿದೆ. ಅದರಲ್ಲಿ ಎರಡು ಪಂದ್ಯ ಗೆದ್ದಿದ್ದರೆ, 1 ಪಂದ್ಯ
ಡ್ರಾಗೊಂಡಿದೆ. ಈ ಮೂಲಕ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಮತ್ತೂಂದು ಕಡೆ ಸರಿಯಾಗಿ ಮೂರೇ ಪಂದ್ಯ ಆಡಿರುವ ಎಫ್ಸಿ ಪುಣೆ ಸಿಟಿ 2 ಪಂದ್ಯ ಸೋತು, 1 ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ ಕೊನೆಯಿಂದ 2ನೇ ಸ್ಥಾನದಲ್ಲಿದೆ!

ಟಾಪ್ ನ್ಯೂಸ್

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Kollywood: ಕಮಲ್‌ ಹಾಸನ್‌ ʼಥಗ್‌ ಲೈಫ್‌ʼ ಅಖಾಡಕ್ಕೆ ಬಾಲಿವುಡ್‌ನ ಖ್ಯಾತ ನಟರು ಎಂಟ್ರಿ?

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.