‘Bangaluru’: ಅನ್ಬಾಕ್ಸ್ ಸಮಾರಂಭದಲ್ಲಿ ಆರ್ಸಿಬಿ ವನಿತೆಯರು
Team Udayavani, Mar 19, 2024, 6:20 AM IST
ಬೆಂಗಳೂರು: ಮಂಗಳ ವಾರ ಬೆಂಗಳೂರಿನಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ “ಅನ್ಬಾಕ್ಸ್ ಇವೆಂಟ್’ನಲ್ಲಿ ವನಿತಾ ಪ್ರೀಮಿಯರ್ ಲೀಗ್ ಚಾಂಪಿ ಯನ್ ಆಗಿರುವ ಆರ್ಸಿಬಿ ವನಿತಾ ತಂಡ ಪಾಲ್ಗೊಳ್ಳಲಿದೆ.
ಇದನ್ನು ಆರ್ಸಿಬಿ ನಾಯಕಿ ಸ್ಮತಿ ಮಂಧನಾ ಖಚಿತಪಡಿಸಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.
ಕಳೆದ ವರ್ಷವೂ ಆರ್ಸಿಬಿ ವನಿತಾ ತಂಡ “ಅನ್ಬಾಕ್ಸ್ ಇವೆಂಟ್’ನಲ್ಲಿ ಪಾಲ್ಗೊಂಡಿತ್ತು. ಅಲ್ಲಿ ಆರ್ಸಿಬಿಯ ಮಾಜಿ ಹೀರೋಗಳಾದ ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ ಅವರನ್ನು ಗೌರವಿಸಲಾಗಿತ್ತು. ಈ ಬಾರಿ ಡಬ್ಲ್ಯುಪಿಎಲ್ ಚಾಂಪಿಯನ್ ತಂಡವನ್ನೇ ಗೌರವಿಸುವ ಕಾರ್ಯ ಕ್ರಮವನ್ನು ನಿರೀಕ್ಷಿಸಲಾಗಿದೆ. ಆರ್ಸಿಬಿ ಅಭಿಮಾನಿಗಳು ಈ ಗಳಿಗೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.
ಫ್ರಾಂಚೈಸಿಯ ಹೆಸರು ಕೂಡ ಇದೇ ವೇಳೆ ಬದಲಾಗಲಿದೆ. ರಾಯಲ್ ಚಾಲೆಂಜರ್ನಲ್ಲಿದ್ದ “ಬ್ಯಾಂಗ ಳೂರ್’ ಎಂಬುದು “ಬೆಂಗಳೂರು’ ಎಂದಾಗಲಿದೆ.ಕಲಾವಿದರಾದ ರಿಷಭ್ ಶೆಟ್ಟಿ, ಅಲನ್ ವಾಕರ್ ಮೊದಲಾದವರು ಈ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?