ತ್ರಿಕೋನ ಏಕದಿನ ಸರಣಿ: ಬಾಂಗ್ಲಾದೇಶ ಶುಭಾರಂಭ


Team Udayavani, Jan 17, 2018, 12:40 PM IST

17-31.jpg

ಢಾಕಾ: ಶ್ರೀಲಂಕಾ ಕೂಡ ಭಾಗವಹಿಸಲಿರುವ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಬಾಂಗ್ಲಾದೇಶವು ಶುಭಾರಂಭಗೈದಿದೆ. ಈ ಮೂಲಕ 2018ರ ವರ್ಷವನ್ನು ಗೆಲುವಿನ ಮೂಲಕ ಸ್ವಾಗತಿಸಿದೆ. 

ಶಕಿಬ್‌ ಅಲ್‌ ಹಸನ್‌ ಮತ್ತು ಮುಸ್ತಾಫಿಜುರ್‌ ರೆಹ ಮಾನ್‌ ದಾಳಿಗೆ ಕುಸಿದ ಜಿಂಬಾಬ್ವೆ ತಂಡವು 49 ಓವರ್‌ಗಳಲ್ಲಿ 170 ರನ್ನಿಗೆ ಆಲೌಟಾಯಿತು. ಸಿಕಂದರ್‌ ರಾಜ 99 ಎಸೆತ ಎದುರಿಸಿ 52 ರನ್‌ ಹೊಡೆದು ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ಪಂದ್ಯದ ಮೊದಲ ಓವರಿನಲ್ಲಿ ಎರಡು ವಿಕೆಟ್‌ ಕಿತ್ತ ಶಕಿಬ್‌ ಒಟ್ಟಾರೆ 42 ರನ್ನಿಗೆ 3 ವಿಕೆಟ್‌ ಪಡೆದರು. ಸೀಮರ್‌ಗಳಾದ ಮುಸ್ತಾಫಿಜುರ್‌, ರುಬೆಲ್‌ ಹೊಸೈನ್‌, ಮೊರ್ತಜ 5 ವಿಕೆಟ್‌ ಹಾರಿಸಿದರು.

ಆರಂಭಿಕ ತಮಿಮ್‌ ಇಕ್ಬಾಲ್‌ ಅವರ ಅಜೇಯ ಆಟದಿಂದಾಗಿ ಬಾಂಗ್ಲಾದೇಶ ಸುಲಭವಾಗಿ ಗುರಿ ತಲುಪುವಂತಾಯಿತು. ಜಿಂಬಾಬ್ವೆಯ ಬೌಲರ್‌ಗಳು ನಿಖರ ದಾಳಿ ಸಂಘಟಿಸಲು ವಿಫ‌ಲರಾದ ಕಾರಣ ಬಾಂಗ್ಲಾ ಆಟಗಾರರು ಯಾವುದೇ ಆತಂಕವಿಲ್ಲದೇ ಆಡಿದರು. ಶಕಿಬ್‌ ಮತ್ತು ತಮಿಮ್‌ ದ್ವಿತೀಯ ವಿಕೆಟಿಗೆ 78 ರನ್‌ ಪೇರಿಸಿದರು. ಅಂತಿಮವಾಗಿ ಬಾಂಗ್ಲಾ 28.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಜಯಭೇರಿ ಬಾರಿಸಿತು. ತಮಿಮ್‌ ಇಕ್ಬಾಲ್‌ 84 ರನ್‌ ಗಳಿಸಿ ಅಜೇಯರಾಗಿ ಉಳಿದರು.

37 ರನ್‌ ಮತ್ತು 43 ರನ್ನಿಗೆ 3 ವಿಕೆಟ್‌ ಕಿತ್ತ ಶಕಿಬ್‌ ಅಲ್‌ ಹಸನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ 49 ಓವರ್‌ಗಳಲ್ಲಿ 170 ಆಲೌಟ್‌ (ಸಿಕಂದರ್‌ ರಾಜ 52, ಮೂರ್‌ 33, ಶಕಿಬ್‌ 43ಕ್ಕೆ 3, ಮುಸ್ತಾಫಿಜುರ್‌ 29ಕ್ಕೆ 2, ರುಬೆಲ್‌ ಹೊಸೈನ್‌ 24ಕ್ಕೆ 2); ಬಾಂಗ್ಲಾದೇಶ 28.3 ಓವರ್‌ಗಳಲ್ಲಿ 2 ವಿಕೆಟಿಗೆ 171 (ತಮಿಮ್‌ ಇಕ್ಬಾಲ್‌ 84 ಔಟಾಗದೆ, ಶಕಿಬ್‌ 37, ಸಿಕಂದರ್‌ ರಾಜ 53ಕ್ಕೆ 2).

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.