ಹರ್ಮನ್ಪ್ರೀತ್ ಪಡೆಗೆ ದೊಡ್ಡ ಸವಾಲು: ಮಲೇಷ್ಯಾ ವಿರುದ್ಧ ಮಹತ್ವದ ಪಂದ್ಯ
Team Udayavani, Aug 6, 2023, 6:45 AM IST
ಚೆನ್ನೈ: ಏಷ್ಯನ್ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ರವಿವಾರ ಟೇಬಲ್ ಟಾಪರ್ ಮಲೇಷ್ಯಾ ವಿರುದ್ಧ ಸೆಣಸಲಿದೆ. ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸುವುದು ಹರ್ಮನ್ಪ್ರೀತ್ ಪಡೆಯ ಎದುರಿಗಿರುವ ದೊಡ್ಡ ಸವಾಲು.
ಚೀನ ವಿರುದ್ಧ 7-2 ಗೋಲುಗಳ ಗೆಲುವಿನ ಆರಂಭ ಪಡೆದಿದ್ದ ಭಾರತ, ಶುಕ್ರವಾರ ಸಾಮಾನ್ಯ ತಂಡವಾದ ಜಪಾನ್ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಲು ವಿಫಲವಾಗಿತ್ತು. ಕಾರಣ, ಪೆನಾಲ್ಟಿ ಕಾರ್ನರ್ಗಳನ್ನು ವ್ಯರ್ಥಗೊಳಿಸಿದ್ದು. ಚೀನ ವಿರುದ್ಧ 6 ಗೋಲುಗಳನ್ನು ಪೆನಾಲ್ಟಿ ಕಾರ್ನರ್ ಮೂಲಕವೇ ಬಾರಿಸಿದ ಭಾರತಕ್ಕೆ ಜಪಾನ್ ವಿರುದ್ಧ ಇದನ್ನು ಪುನರಾವರ್ತಿಸಲಾಗಲಿಲ್ಲ. ಕನಿಷ್ಠ 15 ಪೆನಾಲ್ಟಿ ಕಾರ್ನರ್ಗಳಲ್ಲಿ ಭಾರತ ಗೋಲಾಗಿಸಿದ್ದು ಒಂದನ್ನು ಮಾತ್ರ. ಹರ್ಮನ್ಪ್ರೀತ್ ಸಿಂಗ್, ವರುಣ್ ಕುಮಾರ್, ಅಮಿತ್ ರೋಹಿದಾಸ್, ಜುಗ್ರಾಜ್ ಸಿಂಗ್ ಅವರಂಥ ಘಟಾನುಘಟಿ ಆಟಗಾರರನ್ನು ಹೊಂದಿರುವ ತಂಡಕ್ಕೆ ಇದೊಂದು ಭಾರೀ ಹಿನ್ನಡೆ. ತಂಡದ ಕೋಚ್ ಕ್ರೆಗ್ ಫುಲ್ಟನ್ ಕೂಡ ಈ ವೈಫಲ್ಯದತ್ತ ಬೆಟ್ಟು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ