ಕರ್ನಾಟಕ ಥ್ರೋ ಬಾಲ್ ತಂಡದ ಮೇಲೆ ಹಲ್ಲೆ:ದಿಲ್ಲಿ ಹುಡುಗಿಯರ ಗುಂಡಾಗಿರಿ
Team Udayavani, Jan 7, 2017, 5:40 PM IST
ಹೊಸದಿಲ್ಲಿ: ಪಂದ್ಯಾವಳಿಯ ವೇಳೆ ರೆಫ್ರಿಗಳಿಂದ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿದ ಕಾರಣಕ್ಕೆ ದೆಹಲಿಯ ಬಾಲಕಿಯರ ಥ್ರೋ ಬಾಲ್ ತಂಡದ ಆಟಗಾರ್ತಿಯರು ತಮಿಳುನಾಡು ಮತ್ತು ಕರ್ನಾಟಕ ತಂಡದ ಬಾಲಕಿಯರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪಂದ್ಯ ನಡೆಯುತ್ತಿರುವಾಗಲೇ ಅಂಗಣದಲ್ಲೇ ತಮಿಳುನಾಡು ಮತ್ತು ಕರ್ನಾಟಕದ ಆಟಗಾರ್ತಿಯರ ಮೇಲೆ ಎರಗಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
ನಾವು ರೆಫ್ರಿಗಳಿಂದಾದ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ದೆಹಲಿ ಆಟಗಾರ್ತಿಯರನ್ನು ಹಲ್ಲೆ ನಡೆಸಲು ಥ್ರೋ ಬಾಲ್ ಅಸೋಸಿಯೇಷನ್ನವರೇ ಪ್ರಚೋದಿಸಿದ್ದಾರೆ ಎಂದು ಕರ್ನಾಟಕದ ಆಟಗಾರ್ತಿಯರು ಆರೋಪಿಸಿದ್ದಾರೆ.
ಘಟನೆ ಬಳಿಕ ಸ್ಥಾನಿಕ ಆಯುಕ್ತ ಅತುಲ್ ಕುಮಾರ್ ತಿವಾರಿ ದೆಹಲಿ ಕರ್ನಾಟಕ ಭವನಕ್ಕೆ ಆಟಗಾರ್ತಿಯರನ್ನು ಕರೆಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ರಾಜ್ಯ ಶಿಕ್ಷಣ ಆಯುಕ್ತ, ಸಚಿವೆ ಉಮಾಶ್ರೀ ಅವರಿಗೆ ವಿವರ ನೀಡುವುದಾಗಿ ತಿಳಿಸಿದ್ದಾರೆ.