ಕೋಟ್ಲಾ ಪಿಚ್ ಸ್ಪಿನ್ನರ್ಗಳಿಗೆ ನೆರವು ನೀಡಿಲ್ಲ: ಪೂಜಾರ
Team Udayavani, Dec 7, 2017, 6:45 AM IST
ಹೊಸದಿಲ್ಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದ ಪಿಚ್ ಪಂದ್ಯದ ಐದನೇ ದಿನ ಸ್ಪಿನ್ನರ್ಗಳಿಗೆ ಸ್ವಲ್ಪ ಕೂಡ ನೆರವು ನೀಡಲಿಲ್ಲ. ಹೀಗಾಗಿ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಾಗಿಲ್ಲ ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟರು.
ಅಂತಿಮ ದಿನದಾಟದಲ್ಲಿ ಸ್ಪಿನ್ನರ್ಗಳು ಕೇವಲ ಎರಡು ವಿಕೆಟ್ ಪಡೆಯಲಷ್ಟೇ ಶಕ್ತರಾದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಶ್ರೀಲಂಕಾ 103 ಓವರ್ ಆಡಿದ್ದು ಅಶ್ವಿನ್ ಮತ್ತು ಜಡೇಜ 73 ಓವರ್ ಎಸೆದಿದ್ದು 207 ರನ್ ಬಿಟ್ಟುಕೊಟ್ಟಿದ್ದರು.
ಅವರಿಬ್ಬರು ಪಡೆದ ವಿಕೆಟ್ ಸಂಖ್ಯೆಯನ್ನು ಗಮನಿಸಿದರೆ ಅವರ ದಾಳಿ ಎಷ್ಟೊಂದು ಬಿಗುವಿನಿಂದ ಕೂಡಿದೆ ಎಂಬುದನ್ನು ತಿಳಿಯಬಹುದು. ಯಾವುದೇ ಎದುರಾಳಿಗೆ ಅವರಿಬ್ಬರ ದಾಳಿಯನ್ನು ಎದುರಿಸುವುದು ಅತ್ಯಂತ ಕಷ್ಟ. ಆದರೆ ಈ ಪಂದ್ಯದಲ್ಲಿ ಅವರಿಬ್ಬರಿಗೆ ಪಿಚ್ ಸ್ವಲ್ಪ ಕೂಡ ನೆರವು ನೀಡಲಿಲ್ಲ. ಏಶ್ಯ ಖಂಡದ ಪಿಚ್ಗಳಲ್ಲಿ ಐದನೇ ದಿನ ಬಹುತೇಕ ಎಲ್ಲ ಕಡೆ ಸ್ಪಿನ್ನರ್ಗಳಿಗೆ ನೆರವು ಸಿಗುತ್ತದೆ. ಆದರೆ ಇಲ್ಲಿ ಯಾವುದೇ ನೆರವು ಸಿಕ್ಕಿಲ್ಲ ಎಂದು ಪೂಜಾರ ತಿಳಿಸಿದರು.
ಸರಣಿಯುದ್ದಕ್ಕೂ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ನಮ್ಮ ಬೌಲರ್ಗಳು ಉತ್ತಮ ನಿರ್ವಹಣೆ ನೀಡಿದ್ದಾರೆ. ಬ್ಯಾಟ್ಸ್ಮನ್ ರನ್ ಗಳಿಸಿದ್ದಾರೆ. ಹಾಗಾಗಿ ಇಲ್ಲಿ ಸಾಕಷ್ಟು ಸಕರಾತ್ಮಕ ಅಂಶಗಳಿವೆ. ದಿಲ್ಲಿ ಟೆಸ್ಟ್ ಪಂದ್ಯವನ್ನು ನಾವು ಗೆಲ್ಲಲು ಬಯಸಿದ್ದೆವು. ಆದರೆ ಇದು ಡ್ರಾದಲ್ಲಿ ಅಂತ್ಯಗೊಂಡಿತು ಎಂದು ಪೂಜಾರ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು