ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌


Team Udayavani, Apr 23, 2021, 10:30 PM IST

ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

ಮುಂಬಯಿ : ಐಪಿಎಲ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ದೇವದತ್ತ ಪಡಿಕ್ಕಲ್‌ ಆರ್‌ಸಿಬಿ ಅಭಿಮಾನಿಗಳ ಪಾಲಿನ “ಬಿಗ್‌ ಹೀರೋ’ ಆಗಿದ್ದಾರೆ. ಸದ್ಯದಲ್ಲೇ ಇವರು ಯಾವುದಾದರೊಂದು ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಸುನೀಲ್‌ ಗಾವಸ್ಕರ್‌ ಅವರ ಪ್ರಶಂಸೆಗೂ ಪಾತ್ರರಾಗಿದ್ದಾರೆ.

20ರ ಹರೆಯದ ಪಡಿಕ್ಕಲ್‌ ಗುರುವಾರದ ರಾಜಸ್ಥಾನ್‌ ರಾಯಲ್ಸ್‌ ಎದುರಿನ ಪಂದ್ಯದಲ್ಲಿ ಅಜೇಯ 101 ರನ್‌ ಬಾರಿಸುವ ಜತೆಗೆ ಕೊಹ್ಲಿಯೊಂದಿಗೆ ಮೊದಲ ವಿಕೆಟಿಗೆ 16.3 ಓವರ್‌ಗಳಲ್ಲಿ 181 ರನ್‌ ಪೇರಿಸುವಲ್ಲಿ ನೆರವಾದರು. ಆರ್‌ಸಿಬಿಗೆ 10 ವಿಕೆಟ್‌ಗಳ ಭರ್ಜರಿ ಜಯ ತಂದಿತ್ತರು. ರಾಜಸ್ಥಾನ್‌ ತಂಡದ 177ಕ್ಕೆ ಉತ್ತರವಾಗಿ ಆರ್‌ಸಿಬಿ ಕೇವಲ 16.3 ಓವರ್‌ಗಳಲ್ಲಿ ನೋಲಾಸ್‌ 181 ರನ್‌ ಬಾರಿಸಿತು.

ಈ ಸಂದರ್ಭದಲ್ಲಿ ಮಾತಾಡಿದ ಪಡಿಕ್ಕಲ್‌, “ಕೊಹ್ಲಿ ಕಂಪೆನಿ ಇದ್ದುದರಿಂದ ಮಿಡ್ಲ್ ಓವರ್‌ಗಳಲ್ಲಿ ಬೌಂಡರಿ ಗಳನ್ನು ಸಲೀಸಾಗಿ ಬಾರಿಸಲು ಸಾಧ್ಯವಾಯಿತು’ ಎಂದರು.

“ಸಾಮಾನ್ಯವಾಗಿ ನಾನು ಪಂದ್ಯದ ಸ್ಥಿತಿಯನ್ನು ಅರಿತು ಬ್ಯಾಟಿಂಗ್‌ ಮಾಡುತ್ತೇನೆ. ನಿರ್ದಿಷ್ಟ ಪಾತ್ರವನ್ನು ಮನಗಂಡು ಆ ಪ್ರಕಾರವೇ ಆಡುತ್ತ ಹೋಗುತ್ತೇನೆ. ಕೆಲವೊಮ್ಮೆ ಪಂದ್ಯದ ಮಿಡ್ಲ್ ಓವರ್‌ಗಳಲ್ಲಿ ಬೌಂಡರಿಗಳನ್ನು ಹೊಡೆಯುವುದು ಕಷ್ಟವಾಗುತ್ತದೆ. ಆದರೆ ಇಲ್ಲಿ ಇದು ಸಾಧ್ಯವಾಯಿತು. ಇದಕ್ಕೆ ಕಾರಣ ಕೊಹ್ಲಿ ಅವರೊಂದಿಗಿನ ಜತೆಯಾಟ’ ಎಂಬುದಾಗಿ ಪಡಿಕ್ಕಲ್‌ ಹೇಳಿದರು.

ಇದನ್ನೂ ಓದಿ :‘ಬಂದಿಷ್‌ ಬ್ಯಾಂಡಿಟ್ಸ್’ ವೆಬ್‌ ಸೀರಿಸ್ ನ ನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ನಿಧನ

“ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಸತತವಾಗಿ ಸ್ಟ್ರೈಕ್‌ ರೊಟೇಟ್‌ ಮಾಡುತ್ತ ಹೋದೆವು. ಇದೊಂದು ಉತ್ತಮ ಟ್ರ್ಯಾಕ್‌ ಆಗಿತ್ತು. ಹೀಗಾಗಿ ಯಾವ ಹಂತದಲ್ಲೂ ಬ್ಯಾಟಿಂಗ್‌ ಕಠಿನ ಎನಿಸಲಿಲ್ಲ’ ಎಂದರು.

“ಹಾಗೆಯೇ ಕೋವಿಡ್‌ನಿಂದ ಚೇತರಿಸಿಕೊಂಡು ಆಡಲಿಳಿದ ನನ್ನ ಮುಂದೆ ದೊಡ್ಡ ಸವಾಲಿತ್ತು. ಈಗ ನಿರಾಳನಾಗಿದ್ದೇನೆ. ತಂಡದ ಗೆಲುವಿನಲ್ಲಿ ನನ್ನ ಪಾಲನ್ನು ಸಲ್ಲಿಸುತ್ತಿರುವ ತೃಪ್ತಿ ಇದೆ’ ಎಂದೂ ಪಡಿಕ್ಕಲ್‌ ಹೇಳಿದರು.

ಮೊದಲ ಶತಕದ ಅನುಭವ
“ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಶತಕದ ಕುರಿತು ಚಿಂತಿಸಲೇ ಇಲ್ಲ. ಪಂದ್ಯವನ್ನು ಸಾಧ್ಯವಾದಷ್ಟು ಬೇಗ ಮುಗಿಸುವುದೇ ನಮ್ಮ ಯೋಜನೆಯಾಗಿತ್ತು. ಹಾಗೆಯೇ ನನ್ನ ಆಟದಲ್ಲಾಗಲೀ, ಟೆಕ್ನಿಕ್‌ನಲ್ಲಾಗಲೀ ಯಾವುದೇ ವಿಶೇಷ ಬದಲಾವಣೆ ಮಾಡಿಕೊಳ್ಳಲಿಲ್ಲ. ಕಳೆದೆರಡು ವರ್ಷಗಳ ಆಟವನ್ನೇ ಆಡಿದ್ದೇನೆ. ಸ್ಥಿರ ಪ್ರದರ್ಶನ ಮುಂದುವರಿಸುವುದು ನನ್ನ ಗುರಿ’ ಎಂದು ಪಡಿಕ್ಕಲ್‌ ಹೇಳಿದರು. ಅವರು ಕೇವಲ 52 ಎಸೆತ ಎದುರಿಸಿ 11 ಬೌಂಡರಿ, 6 ಸಿಕ್ಸರ್‌ ಸಿಡಿಸಿ ಅಬ್ಬರಿಸಿದರು.
ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ರವಿವಾರ ಚೆನ್ನೈ ವಿರುದ್ಧ ಆಡಲಿದೆ.

ಟಾಪ್ ನ್ಯೂಸ್

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.