ನಕಲಿ ವಯೋಮಾನ ವಿವಾದದಲ್ಲಿ ಖ್ಯಾತ ಆಟಗಾರ ಲಕ್ಷ್ಯ ಸೇನ್‌!


Team Udayavani, Dec 4, 2022, 4:37 PM IST

lakshya sen

ಬೆಂಗಳೂರು: ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ, ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ಸೇನ್‌, ವಯಸ್ಸಿನ ನಕಲಿ ಪ್ರಮಾಣಪತ್ರ ನೀಡಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ನಗರದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಈ ಕುರಿತು ಎಂ.ಜಿ.ನಾಗರಾಜ್‌ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಲಕ್ಷ್ಯ ಸೇನ್‌ ಜೊತೆಗೆ ಅವರ ಕೋಚ್‌ ವಿಮಲ್‌ ಕುಮಾರ್‌, ತಂದೆ ಧೀರೇಂದ್ರ ಸೇನ್‌, ಅಣ್ಣ ಚಿರಾಗ್‌ ಸೇನ್‌, ತಾಯಿ ನಿರ್ಮಲಾ ಸೇನ್‌ ಹೆಸರೂ ಎಫ್ಐಆರ್‌ನಲ್ಲಿ ಕಾಣಿಸಿಕೊಂಡಿದೆ. ಲಕ್ಷ್ಯ ಮೂಲತಃ ಉತ್ತರಾ ಖಂಡದವರು. ಸದ್ಯ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರ ವಿರುದ್ಧ ಸ್ವತಃ ಬ್ಯಾಡ್ಮಿಂಟನ್‌ ಅಕಾಡೆಮಿಯೊಂದರ ಕೋಚ್‌ ನಾಗರಾಜ್‌ ಧ್ವನಿಯೆತ್ತಿದ್ದಾರೆ.

ಬೇರೆ ಬೇರೆ ವಯೋಮಿತಿಯ ಬ್ಯಾಡ್ಮಿಂಟನ್‌ ಕೂಟಗಳಲ್ಲಿ ಲಕ್ಷ್ಯ ಸೇನ್‌ಪಾಲ್ಗೊಳ್ಳುವಂತೆ ಮಾಡಲು, ವಿಮಲ್‌ ಕುಮಾರ್‌ ಅವರು ಲಕ್ಷ್ಯ ತಂದೆ ತಾಯಿಯೊಂದಿಗೆ ಸೇರಿಕೊಂಡು 2010ರಲ್ಲೇ ನಕಲಿ ಜನ್ಮದಿನ ಪ್ರಮಾಣಪತ್ರ ನೀಡಿದ್ದಾರೆನ್ನುವುದು ನಾಗರಾಜ್‌ ಆರೋಪ.

ನಾಗರಾಜ್‌ ಹೇಳುವುದೇನು?: ಲಕ್ಷ್ಯ ಸೇನ್‌ ನಕಲಿ ವಯೋಮಿತಿಯ ಬಗ್ಗೆ 2015ರಲ್ಲೇ ಒಮ್ಮೆ ದೂರು ದಾಖಲಾಗಿತ್ತು. ಆಗ ದೆಹಲಿ ಕ್ರೀಡಾವಿಭಾಗಕ್ಕೆ ಸಂಬಂಧಿಸಿದ ಸಿಬಿಐ ತಂಡ ತನಿಖೆ ನಡೆಸಿತ್ತು. ಅವರು ನೀಡಿದ ಮಾಹಿತಿಯ ಪ್ರಕಾರ, ಲಕ್ಷ್ಯ ಸೇನ್‌ ಅಣ್ಣ ಚಿರಾಗ್‌ ಸೇನ್‌ 1996ರಲ್ಲಿ, ಲಕ್ಷ್ಯ 1998ರಲ್ಲಿ ಹುಟ್ಟಿರುವ ಸುಳಿವಿದೆ. ಆದರೆ ಲಕ್ಷ್ಯ ಅವರ ಪೋಷಕರು ಇನ್ನೊಮ್ಮೆ ನೀಡಿರುವ ಪ್ರಮಾಣಪತ್ರದಲ್ಲಿ, ಲಕ್ಷ್ಯ 2001ರಲ್ಲಿ ಜನಿಸಿದ್ದಾರೆ ಎಂದು ಹೇಳಲಾಗಿದೆ. 4 ವರ್ಷದ ಹುಡುಗ ಲಕ್ಷ್ಯ 2ನೇ ತರಗತಿ ಎಂದೂ ಒಮ್ಮೆ ತೋರಿಸಲಾಗಿದೆ. ಇವೆಲ್ಲ ಒಟ್ಟಾರೆ ಲಕ್ಷ್ಯ ನಕಲಿ ಪ್ರಮಾಣಪತ್ರ ನೀಡಿದ್ದಕ್ಕೆ ಸಾಕ್ಷಿಯಾಗಿದೆ ಎನ್ನುವುದು ಆರೋಪ.

ವಿಮಲ್‌ ಹೇಳುವುದೇನು?: ಕೋಚ್‌ ವಿಮಲ್‌ ಕುಮಾರ್‌ ಈ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾರೆ. 2010ರಲ್ಲಿ ಲಕ್ಷ್ಯ ತಮ್ಮ ಅಕಾಡೆಮಿಗೆ ಬಂದರು. ಎಲ್ಲರಂತೆ ಅವರಿಗೂ ತರಬೇತಿ ನೀಡಿದ್ದೇನೆ. ದೂರುದಾರರು ಏನು ಹೇಳಿದ್ದಾರೆಂದೂ ತನಗೆ ಗೊತ್ತಿಲ್ಲ ಎಂದು ವಿಮಲ್‌ ಹೇಳಿದ್ದಾರೆ. ಲಕ್ಷ್ಯ ಸೇನ್‌ ಪ್ರಸ್ತುತ ಭಾರತ ಕಂಡ ಪ್ರಖ್ಯಾತ ಬ್ಯಾಡ್ಮಿಂಟನ್‌ ಆಟಗಾರರಾಗಿದ್ದಾರೆ. ಅವರು 2021ರ ಹುವೆಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ, ಬೆಳ್ಳಿಯನ್ನು ಗೆದ್ದಿದ್ದಾರೆ.

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.