ಹಾಲಿ ಚಾಂಪಿಯನ್‌ ಸೈನಾಗೆ ಮೊದಲ ಸುತ್ತಿನ ಆಘಾತ, ಗೆದ್ದದ್ದು ಪಿ. ವಿ.ಸಿಂಧು ಮಾತ್ರ


Team Udayavani, Jan 16, 2020, 12:42 AM IST

pv-singhu

ಜಕಾರ್ತಾ: “ಇಂಡೋನೇಶ್ಯ ಮಾಸ್ಟರ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಬುಧವಾರ ಭಾರತದ ಪಾಲಿಗೆ ಸೋಲಿನ ದಿನವಾಗಿ ಪರಿಣಮಿಸಿದೆ. ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್‌, ಭರವಸೆಯ ಶಟ್ಲರ್‌ಗಳಾದ ಕೆ. ಶ್ರೀಕಾಂತ್‌, ಬಿ. ಸಾಯಿ ಪ್ರಣೀತ್‌, ಪ್ರಣವ್‌ ಜೆರ್ರಿ ಚೋಪ್ರ-ಸಿಕ್ಕಿ ರೆಡ್ಡಿ… ಎಲ್ಲರೂ ಸೋಲುಂಡು ನಿರ್ಗಮಿಸಿದ್ದಾರೆ. ದ್ವಿತೀಯ ಸುತ್ತು ಪ್ರವೇಶಿಸಿದ್ದು ಪಿ.ವಿ. ಸಿಂಧು ಮಾತ್ರ.

5ನೇ ಶ್ರೇಯಾಂಕದ ಸಿಂಧು ಜಪಾನಿನ ಅಯಾ ಒಹೊರಿ ವಿರುದ್ಧ ಮೊದಲ ಗೇಮ್‌ ಕಳೆದುಕೊಂಡರೂ ದಿಟ್ಟ ಹೋರಾಟ ನೀಡಿ 14-21, 21-15, 21-11 ಅಂತರದಿಂದ ಗೆದ್ದು ಬಂದರು.

ಕಳೆದ ವರ್ಷ ಇಲ್ಲಿ ವನಿತಾ ಸಿಂಗಲ್ಸ್‌ ಪ್ರಶಸ್ತಿಯನ್ನೆತ್ತಿ ಮೆರೆದಿದ್ದ ಸೈನಾ ನೆಹ್ವಾಲ್‌ ಈ ಬಾರಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಅವರನ್ನು ಜಪಾನಿನ ಸಯಾಕಾ ಟಕಹಾಶಿ 21 -19, 13-21, 5-21 ಅಂತರದಿಂದ ಮಣಿಸಿದರು. 50 ನಿಮಿಷಗಳ ತನಕ ಇವರ ಹೋರಾಟ ಸಾಗಿತು. ಮೊದಲ ಗೇಮನ್ನು ರೋಚಕವಾಗಿ ಗೆದ್ದ ಸೈನಾ, ಬಳಿಕ ಹಿಡಿತ ಕಳೆದುಕೊಳ್ಳುತ್ತ ಹೋದರು.

ವರ್ಷಾರಂಭದ ಮಲೇಶ್ಯ ಮಾಸ್ಟರ್ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಸೈನಾ ಕ್ವಾರ್ಟರ್‌ ಫೈನಲ್‌ ತನಕ ಸಾಗಿದ್ದರು.

ಪುರುಷರಿಗೆ 3 ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಶಟ್ಲರ್‌ ಕೆ. ಶ್ರೀಕಾಂತ್‌ ಆತಿಥೇಯ ನಾಡಿನ ಶೆಸರ್‌ ಹಿರೆನ್‌ ರುಸ್ತಾವಿಟೊ ವಿರುದ್ಧ 21-18, 12-21, 14-21 ಅಂತರದ ಸೋಲುಂಡರು.

ವಿಶ್ವದ 12ನೇ ರ್‍ಯಾಂಕಿಂಗ್‌ ಆಟಗಾರನಾಗಿರುವ ಶ್ರೀಕಾಂತ್‌ ಪ್ರಸಕ್ತ ಋತುವಿನಲ್ಲಿ ಮೊದಲ ಸುತ್ತಿನಲ್ಲೇ ಎಡವಿದ 2ನೇ ನಿದರ್ಶನ ಇದಾಗಿದೆ. ಕಳೆದ ವಾರವಷ್ಟೇ “ಮಲೇಶ್ಯ ಮಾಸ್ಟರ್’ ಪಂದ್ಯಾವಳಿಯಲ್ಲೂ ಇದೇ ಸಂಕಟಕ್ಕೆ ಸಿಲುಕಿದ್ದರು. ಮೊದಲ ಗೇಮನ್ನು 21-18 ಅಂತರದಿಂದ ಗೆದ್ದ ಶ್ರೀಕಾಂತ್‌, ಇದೇ ಲಯದಲ್ಲಿ ಸಾಗುವ ಸೂಚನೆ ನೀಡಿದರು. ಆದರೆ ಅನಂತರ ಆತಿಥೇಯ ಆಟಗಾರನ ಆಕ್ರಮಣಕಾರಿ ಹೊಡೆತಕ್ಕೆ ಸಾಟಿಯಾಗಲು ಅವರಿಗೆ ಸಾಧ್ಯವಾಗಲಿಲ್ಲ.

ಶ್ರೀಕಾಂತ್‌ ಅವರಂತೆ ಮಲೇಶ್ಯ ಮಾಸ್ಟರ್ ನಲ್ಲಿ ಮೊದಲ ಸುತ್ತಿನಲ್ಲೇ ಎಡವಿದ್ದ ಬಿ. ಸಾಯಿ ಪ್ರಣೀತ್‌ ಇಲ್ಲೂ ಇದೇ ಸಂಕಟಕ್ಕೆ ಸಿಲುಕಿದರು. ಅವರನ್ನು 8ನೇ ಶ್ರೇಯಾಂಕದ ಚೀನೀ ಆಟಗಾರ ಶಿ ಯು ಕ್ವಿ 21-16, 18-21, 10-21ರಿಂದ ಮಣಿಸಿದರು. ಸೌರಭ್‌ ವರ್ಮ ಅವರನ್ನು ಚೀನದ ಮತ್ತೂಬ್ಬ ಆಟಗಾರ ಲು ಗುವಾಂಗ್‌ ಜು 21-17, 15-21, 10-21 ಅಂತರದಿಂದ ಹಿಮ್ಮೆಟ್ಟಿಸಿದರು.

ಮಿಕ್ಸೆಡ್‌ ಡಬಲ್ಸ್‌ನಲ್ಲೂ ಭಾರತಕ್ಕೆ ಸೋಲಿನ ಬಿಸಿ ತಟ್ಟಿದೆ. ಪ್ರಣವ್‌ ಜೆರ್ರಿ ಚೋಪ್ರ-ಸಿಕ್ಕಿ ರೆಡ್ಡಿ ದಕ್ಷಿಣ ಕೊರಿಯಾದ ಕೊ ಸುಂಗ್‌ ಹ್ಯೂನ್‌- ಇಯೋಮ್‌ ಹೆ ವೋನ್‌ ವಿರುದ್ಧ 8-21, 14-21 ನೇರ ಗೇಮ್‌ಗಳ ಸೋಲನುಭವಿಸಿ ಹೊರಬಿದ್ದರು.

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.