ಹಠಾತ್ ಹೃದಯ ಸ್ತಂಭನ: ಪಾಕಿಸ್ಥಾನದ ಮಾಜಿ ಅಂಪೈರ್ ಅಸದ್ ರವುಫ್ ನಿಧನ
Team Udayavani, Sep 15, 2022, 9:15 AM IST
ಲಾಹೋರ್: ಹಠಾತ್ ಹೃದಯ ಸ್ತಂಭನದ ಕಾರಣದಿಂದ ಪಾಕಿಸ್ಥಾನದ ಮಾಜಿ ಅಂಪೈರ್ ಅಸದ್ ರವುಫ್ ನಿಧನ ಹೊಂದಿದ್ದಾರೆ. ಗುರುವಾರ ಬೆಳಗ್ಗೆ 66 ವರ್ಷದ ರವುಫ್ ಅವರು ಲಾಹೋರ್ ನಲ್ಲಿ ಕೊನೆಯುಸಿರೆಳೆದರು.
ಕ್ರಿಕೆಟ್ ನಿಂದ ದೂರವಾದ ಬಳಿಕ ರವುಫ್ ಅವರು ಲಾಹೋರ್ ನ ಲಾಂಡಾ ಬಜಾರ್ ನಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಅಂಗಡಿಯನ್ನು ಮುಚ್ಚಿ ಮನೆಗೆ ಹಿಂದಿರುಗುತ್ತಿದ್ದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಎಂದು ರವುಫ್ ಸಹೋದರ ತಾಹಿರ್ ಹೇಳಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಉಳಿಸಲು ಸಾಧ್ಯವಾಗಲಿಲ್ಲ.
ಐಸಿಸಿ ಎಲೈಟ್ ಅಂಪೈರ್ ಗಳ ಪಟ್ಟಿಯಲ್ಲಿ ಅಲೀಮ್ ದಾರ್ ಅವರೊಂದಿಗೆ ಮಿಂಚಿದ್ದ ಅಸದ್ ರವುಫ್ ಒಂದು ಕಾಲದಲ್ಲಿ ಪಾಕಿಸ್ಥಾನದ ಪ್ರಮುಖ ಅಂಪೈರ್ ಆಗಿದ್ದರು.
ರವುಫ್ ಅವರು 1998 ರಲ್ಲಿ ತಮ್ಮ ಅಂಪೈರಿಂಗ್ ಪಯಣವನ್ನು ಪ್ರಾರಂಭಿಸಿದರು. 2000 ರಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಅಂಪೈರಿಂಗ್ ಮಾಡಿದರು. ನಾಲ್ಕು ವರ್ಷಗಳ ನಂತರ, 2004 ರಲ್ಲಿ ರವುಫ್ ಅವರನ್ನು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಅಂಪೈರ್ಗಳ ಸಮಿತಿಗೆ ಸೇರಿಸಲಾಯಿತು.
2006 ರಲ್ಲಿ, ರೌಫ್ ಅವರನ್ನು ಐಸಿಸಿ ಯ ಎಲೈಟ್ ಪ್ಯಾನೆಲ್ ಆಫ್ ಅಂಪೈರ್ ಗಳಿಗೆ ಸೇರಿಸಲಾಯಿತು. ಅಸದ್ ರವುಫ್ ಅವರು 47 ಟೆಸ್ಟ್, 98 ಏಕದಿನ ಮತ್ತು 23 ಟಿ20 ಅಂತಾರಾಷ್ಟ್ರೀಯ ಗಳಲ್ಲಿ ಅಂಪೈರ್ ಗಳಾಗಿ ಕಾರ್ಯನಿರ್ವಹಿಸಿದರು. ಐಪಿಎಲ್ ನಲ್ಲೂ ಅವರು ಕಾರ್ಯನಿರ್ವಹಿಸಿದ್ದರು. ಆದರೆ 2013ರಲ್ಲಿ ಅಸದ್ ರವುಫ್ ವಿರುದ್ದ ಫಿಕ್ಸಿಂಗ್ ಆರೋಪ ಕೇಳಿಬಂದ ಬಳಿಕ ಅವರು ಕ್ರಿಕೆಟ್ ನಿಂದ ದೂರಾವಾಗಿದ್ದರು.
ಉತ್ತಮ ಅಂಪೈರ್ ಆಗಿದ್ದಲ್ಲದೆ, ರವುಫ್ ಪಾಕಿಸ್ತಾನದಲ್ಲಿ ಹೆಸರಾಂತ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದರು. 71 ಪ್ರಥಮ ದರ್ಜೆ ಮತ್ತು 40 ಲಿಸ್ಟ್ ಎ ಪಂದ್ಯಗಳಲ್ಲಿ, ಮೂರು ಶತಕ ಮತ್ತು 26 ಅರ್ಧ ಶತಕಗಳ ಸಹಾಯದಿಂದ ಕ್ರಮವಾಗಿ 3423 ಮತ್ತು 611 ರನ್ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ