ನಾನು 2 ತಿಂಗಳು ತಂಡದಿಂದ ಹೊರಗಿದ್ದೆ ಆದರೆ… : ಕೆ.ಎಲ್.ರಾಹುಲ್
2 ವರ್ಷಗಳಿಂದ ನಾನು ಮಾಡಿದ್ದನ್ನು ಮರೆತಿಲ್ಲ
Team Udayavani, Aug 17, 2022, 9:20 PM IST
ಹರಾರೆ: ನಾನು ಎರಡು ತಿಂಗಳ ಕಾಲ ಹೊರಗಿರಬಹುದು ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದನ್ನು ತಂಡ ಮರೆತಿಲ್ಲ ಎಂದು ಭಾರತ ತಂಡದ ನಾಯಕ ಕೆ.ಎಲ್. ರಾಹುಲ್ ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದ ಮುನ್ನಾ ದಿನದಂದು ಹೇಳಿಕೆ ನೀಡಿದ್ದಾರೆ.
ಈ ರೀತಿಯ ವಾತಾವರಣವು ಆಟಗಾರನು ಉತ್ತಮ ಆಟಗಾರನಿಂದ ಶ್ರೇಷ್ಠ ಆಟಗಾರನಾಗಿ ರೂಪಾಂತರಗೊಳ್ಳಲು ಸಹಾಯ ಮಾಡುತ್ತದೆ, ತನ್ನ ತಂಡಕ್ಕಾಗಿ ಹೆಚ್ಚು ಗೆಲುವಿನ ಇನ್ನಿಂಗ್ಸ್ಗಳನ್ನು ಆಡಲು ಸಾಧ್ಯವಾಗುತ್ತದೆ” ಎಂದರು.
“ಆಟಗಾರನಿಗೆ ಆಯ್ಕೆಗಾರರು, ಕೋಚ್ ಮತ್ತು ನಾಯಕನ ಬೆಂಬಲವನ್ನು ಪಡೆಯುವುದು ಬಹಳ ಮುಖ್ಯ. ನಮ್ಮ ಮನಸ್ಥಿತಿಯು ಸ್ಪಷ್ಟವಾಗಿದ್ದರೆ ಅಗತ್ಯವಿರುವ ವಿಷಯಗಳ ಮೇಲೆ ನಾವು ಗಮನಹರಿಸಬಹುದು, ತುಂಬಾ ವಿಶ್ವಾಸವನ್ನು ನೀಡುತ್ತದೆ. ನಿಮ್ಮ ಬೆಂಬಲ , ತಂಡ ನಿಮ್ಮನ್ನು ಬೆಂಬಲಿಸಿದರೆ ಆಟಗಾರನಿಗೆ ಸುಲಭವಾಗುತ್ತದೆ ಎಂದರು.
”ಎಂಎಸ್ ಧೋನಿ ಅವರ ಹೆಜ್ಜೆಗಳನ್ನು ಅನುಸರಿಸಲು ನೀವು ಪ್ರಯತ್ನಿಸಿದ್ದೀರಾ ಎಂದು ಕೇಳಿದಾಗ, ನಾನು ಬೇರೆಯವರಂತಾಗಲು ಸಾಧ್ಯವಿಲ್ಲ. ಆಗ ನನಗೆ, ತಂಡಕ್ಕೆ ಅಥವಾ ಆಟಕ್ಕೆ ನಾನು ನ್ಯಾಯಯುತವಾಗಿರುವುದಿಲ್ಲ. ನಾನು ಪ್ರಯತ್ನಿಸುತ್ತೇನೆ ಮತ್ತು ನಾನಾಗಿಯೇ ಇರುತ್ತೇನೆ. ಇತರ ಆಟಗಾರರು ಅವರಿಗೆ ಬೇಕಾದಂತೆ ಇರಲು ಅವಕಾಶ ಮಾಡಿಕೊಡುತ್ತೇನೆ ಎಂದು ರಾಹುಲ್ ಹೇಳಿದರು.