ಟೀಮ್ ಇಂಡಿಯಾಕ್ಕೆ ಆಸೀಸ್ ನಲ್ಲಿ ಸರಿಯಾದ ಊಟ ಸಿಗಲಿಲ್ಲವೇ?
ಸಮಸ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದ ಐಸಿಸಿ
Team Udayavani, Oct 26, 2022, 3:21 PM IST
ಸಿಡ್ನಿ : ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರದ ಬಹುತೇಕ ಭಾರತೀಯ ಕ್ರಿಕೆಟಿಗರು ಊಟ ಮಾಡದೆ ತಮ್ಮ ಹೋಟೆಲ್ಗೆ ಮರಳಿದ ಘಟನೆ ನಡೆದಿದೆ. ಈ ಸಮಸ್ಯೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಐಸಿಸಿ ಹೇಳಿದ್ದು ಶೀಘ್ರದಲ್ಲೇ ವಿಷಯವನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ.
ಟಿ 20 ವಿಶ್ವ ಕಪ್ ಪಂದ್ಯಾವಳಿಗಳಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ರೋಹಿತ್ ಶರ್ಮಾ ಮತ್ತು ತಂಡ ಸಿಡ್ನಿ ಮೈದಾನದಲ್ಲಿ ತಮ್ಮ ಅಭ್ಯಾಸದ ನಂತರ ಪೂರ್ಣ ಊಟವನ್ನು ನಿರೀಕ್ಷಿಸಿದ್ದರು ಆದರೆ ಹಣ್ಣುಗಳು, ಕೋಲ್ಡ್ ಸ್ಯಾಂಡ್ವಿಚ್ಗಳು ಮತ್ತು ಫಲಾಫೆಲ್ ಮಾತ್ರ ದೊರಕಿದೆ. ಈ ಮೆನು ಭಾರತೀಯ ಕ್ರಿಕೆಟಿಗರಿಗೆ ಇಷ್ಟವಾಗಲಿಲ್ಲ, ಅವರು ಸುಮಾರು ಮೂರು ಗಂಟೆಗಳ ಕಾಲ ನೆಟ್ಸ್ನಲ್ಲಿ ಬೆವರು ಸುರಿಸಿದ ನಂತರ ಸಂಪೂರ್ಣ ರುಚಿಕರವಾದ ಊಟವನ್ನು ಸೇವಿಸುವ ಅಭ್ಯಾಸವನ್ನು ಹೊಂದಿದ್ದು, ಕೆಲವು ಭಾರತೀಯ ಕ್ರಿಕೆಟಿಗರು ಫಲಾಫೆಲ್ ಮತ್ತು ಹಣ್ಣುಗಳನ್ನು ತೆಗೆದುಕೊಂಡರು ಆದರೆ ಅವರಲ್ಲಿ ಹೆಚ್ಚಿನವರು ಪೂರ್ಣ ಊಟಕ್ಕಾಗಿ ಹೋಟೆಲ್ಗೆ ಹಿಂತಿರುಗಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ.
ಅವರು ತಂಗಿರುವ ಹೋಟೆಲ್ನಿಂದ 42 ಕಿಮೀ ದೂರದ ಬ್ಲ್ಯಾಕ್ಟೌನ್ನಲ್ಲಿ (ಸಿಡ್ನಿಯ ಉಪನಗರ) ಅಭ್ಯಾಸದ ಸ್ಥಳವನ್ನು ನೀಡಿದ್ದರಿಂದ ಕಾರಣ ಊಟ ನಿರಾಕರಿಸಿದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟೀಮ್ ಇಂಡಿಯಾಗೆ ನೀಡಿದ ಆಹಾರವು ಉತ್ತಮವಾಗಿಲ್ಲ. ಅವರಿಗೆ ಸ್ಯಾಂಡ್ವಿಚ್ಗಳನ್ನು ನೀಡಲಾಗಿದೆ ಮತ್ತು ಸಿಡ್ನಿಯಲ್ಲಿನ ಅಭ್ಯಾಸದ ನಂತರ ನೀಡಲಾದ ಆಹಾರವು ತಂಪಾಗಿತ್ತು ಮತ್ತು ಉತ್ತಮವಾಗಿಲ್ಲ ಎಂದು ಅವರು ಐಸಿಸಿಗೆ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ