“ನಾನು ಯಾವತ್ತೂ ತಂದೆಯ ಪರ’
Team Udayavani, Apr 16, 2018, 6:45 AM IST
ಗೋಲ್ಡ್ಕೋಸ್ಟ್: “ಗೋಲ್ಡ್ ಕೋಸ್ಟ್ ಕ್ರೀಡಾ ಗ್ರಾಮ ಪ್ರವೇಶಿಸಲು ತಂದೆಗೆ ಅವಕಾಶ ನೀಡಬೇಕೆಂಬ ವಿವಾದಕ್ಕೆ ಸಂಬಂಧಿಸಿದಂತೆ ನನಗೆ ಯಾವುದೇ ರೀತಿಯ ವಿಷಾದವಿಲ್ಲ. ನಾನು ಯಾವತ್ತಿಗೂ ತಂದೆಯ ಪರವಾಗಿ ನಿಲ್ಲುತ್ತೇನೆ’ ಎಂದು ಸೈನಾ ನೆಹ್ವಾಲ್ ಹೇಳಿದ್ದಾರೆ.
“ತಂದೆಯ ಪರ ನಿಂತ ವಿವಾದಕ್ಕೆ ನಾನು ಯಾವತ್ತಿಗೂ ತಲೆ ಕೆಡಿಸಿ ಕೊಳ್ಳುವುದಿಲ್ಲ. ನಾನೊಂದು ವೇಳೆ ದೇಶಕ್ಕಾಗಿ ಪದಕ ಗೆಲ್ಲದಿದ್ದರೆ ದೇಶಕ್ಕಿಂತಲೂ ಈಕೆಗೆ ತಂದೆಯೇ ಮುಖ್ಯವಾಗಿತ್ತು ಎಂದು ಜನ ದೂರುತ್ತಿದ್ದರು’ ಎಂದು ಗೇಮ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಪಿ.ವಿ. ಸಿಂಧು ವಿರುದ್ಧ ಜಯ ದಾಖಲಿಸಿ ಚಿನ್ನ ಗೆದ್ದ ಬಳಿಕ ಸೈನಾ ಭಾವುಕರಾಗಿ ನುಡಿದರು.
ತಂದೆ ಹರ್ವೀರ್ ಸಿಂಗ್ಗೆ ಗೋಲ್ಡ್ಕೋಸ್ಟ್ ಕ್ರೀಡಾ ಗ್ರಾಮಕ್ಕೆ ಪ್ರವೇಶ ನಿರಾಕರಿಸಿದ ಸಂದರ್ಭವನ್ನು ಸ್ಮರಿಸಿಕೊಂಡ ಸೈನಾ, “ಒಂದು ವಿಚಾರ ನಡೆಸಿಕೊಡಲಾಗದಿದ್ದರೂ ಎಲ್ಲವನ್ನೂ ನಡೆಸಿಕೊಟ್ಟಿದ್ದೇವೆ ಎಂದು ಯಾಕೆ ಹೇಳುತ್ತೀರಿ? ತಂದೆಗೆ ಹೊಟೇಲ್ ಬುಕ್ ಮಾಡುವಾಗ ನನಗೆಷ್ಟು ನೋವಾಯಿತು, ಸಮಸ್ಯೆಯಾಯಿತು ಎನ್ನುವುದು ನನಗಷ್ಟೇ ಗೊತ್ತು. ಅವರಿಗೆ ವೈಯಕ್ತಿಕ ಕೋಚ್ ಮಾನ್ಯತೆ ಲಭಿಸಲೂ ದೀರ್ಘ ಕಾಲಾವಕಾಶ ತೆಗೆದುಕೊಳ್ಳಲಾಯಿತು. ನಾನೆಲ್ಲವನ್ನೂ ನಿಭಾಯಿಸಿದೆ’ ಎಂದು ಹೇಳಿದರು.
“ಈ ವಿವಾದಕ್ಕೆ ಸಂಬಂಧಿಸಿ ನಾನು ಎರಡು ದಿನ ಚಿಂತೆಗೊಳಗಾಗಿದ್ದೆ. ಸರಿಯಾಗಿ ನಿದ್ದೆ ಮಾಡಲೂ ನನ್ನಿಂದ ಸಾಧ್ಯವಾಗಲಿಲ್ಲ. ಕ್ರೀಡಾಗ್ರಾಮದಲ್ಲಿ ಒಂದೆಡೆ ಮೂರು-ನಾಲ್ಕು ಗಂಟೆ ತಾಳ್ಮೆಯಿಂದ ಕುಳಿತುಕೊಳ್ಳುವುದಕ್ಕೂ ನನ್ನಿಂದಾಗಲಿಲ್ಲ. ಯಾಕೆಂದರೆ ನಾನು ಸರಕಾರಿ ಸಿಬಂದಿಯಲ್ಲ, ನಾನೊಬ್ಬಳು ಆಟಗಾರ್ತಿ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು’ ಎಂದು ವಿವಾದದ ಸಂದರ್ಭ ತಾನು ಅನು ಭವಿಸಿದ ಮಾನಸಿಕ ತೊಳಲಾಟ ಗಳನ್ನು ಸೈನಾ ತೆರೆದಿಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್