“ಕ್ರಿಕೆಟಿಗರ ನಿರ್ಧಾರಕ್ಕೆ ಭಾರತ ಕಾರಣವಲ್ಲ’
Team Udayavani, Sep 12, 2019, 5:45 AM IST
ಕೊಲಂಬೊ: ಶ್ರೀಲಂಕಾ ಕ್ರಿಕೆಟಿಗರು ಪಾಕಿಸ್ಥಾನ ಪ್ರವಾಸದಿಂದ ಹಿಂದೆ ಸರಿದದ್ದು ಸ್ವಂತ ನಿರ್ಧಾರದಿಂದಲೇ ಹೊರತು ಭಾರತದ ಬೆದರಿಕೆ ಅಥವಾ ಒತ್ತಡದಿಂದಲ್ಲ ಎಂದು ಅಲ್ಲಿನ ಕ್ರೀಡಾ ಸಚಿವ ಹರೀನ್ ಫೆರ್ನಾಂಡೊ ಸ್ಪಷ್ಟಪಡಿಸಿದ್ದಾರೆ.
“ಶ್ರೀಲಂಕಾ ಆಟಗಾರರು ಪಾಕಿಸ್ಥಾನ ಪ್ರವಾಸ ನಿರಾಕರಿಸಿದ್ದಕ್ಕೆ ಭಾರತದ ಒತ್ತಡವೇ ಕಾರಣ. ಪಾಕಿಸ್ಥಾನಕ್ಕೆ ಹೋದರೆ ಐಪಿಎಲ್ನಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಭಾರತ ಅವರಿಗೆ ಬೆದರಿಕೆ ಒಡ್ಡಿದೆ’ ಎಂದು ಪಾಕಿಸ್ಥಾನದ ಸಚಿವ ಫವಾದ್ ಚೌಧರಿ ಒಂದು ದಿನದ ಹಿಂದೆ ಹೇಳಿಕೆ ನೀಡಿದ್ದರು.
ಇದೀಗ ಚೌಧರಿ ಹೇಳಿಕೆಗೆ ತಿರುಗೇಟು ನೀಡಿರುವ ಫೆರ್ನಾಂಡೊ, “ನಮ್ಮ ಕ್ರಿಕೆಟಿಗರು 2009ಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನಕ್ಕೆ ತೆರಳಲು ಹಿಂದೇಟು ಹಾಕಿದ್ದಾರೆ. ಇದು ಆಟಗಾರರ ಸ್ವಂತ ನಿರ್ಧಾರವಾಗಿದೆ. ಭಾರತ ಅಥವಾ ಇನ್ನಿತರ ರಾಷ್ಟ್ರಗಳನ್ನು ಈ ವಿಚಾರದಲ್ಲಿ ಗುರಿಯಾಗಿಸಿ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ’ ಎಂದಿದ್ದಾರೆ.