Women’s ODI: ಆಸ್ಟ್ರೇಲಿಯ ವಿರುದ್ಧ ದಾಖಲೆ ಮೊತ್ತ ಪೇರಿಸಿಯೂ ಸೋತ ಭಾರತ


Team Udayavani, Dec 29, 2023, 12:04 AM IST

1-qwewqewq

ಮುಂಬಯಿ: ಆಸ್ಟ್ರೇಲಿಯ ವಿರುದ್ಧ ಸರ್ವಾಧಿಕ ಮೊತ್ತ ಪೇರಿಸಿಯೂ ಇದನ್ನು ಉಳಿಸಿಕೊಳ್ಳು ವಲ್ಲಿ ವಿಫ‌ಲವಾದ ಭಾರತದ ವನಿತೆ ಯರು ಮೊದಲ ಏಕದಿನದಲ್ಲಿ 6 ವಿಕೆಟ್‌ಗಳ ಸೋಲಿಗೆ ತುತ್ತಾದರು.

ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಜೆಮಿಮಾ ರೋಡ್ರಿಗಸ್‌ ಮತ್ತು ಪೂಜಾ ವಸ್ತ್ರಾಕರ್‌ ಅವರ ಜಬರ್ದಸ್ತ್ ಆಟದ ನೆರವಿನಿಂದ 8 ವಿಕೆಟಿಗೆ 282 ರನ್‌ ಪೇರಿಸಿತು. ಇದು ಆಸ್ಟ್ರೇಲಿಯ ವಿರುದ್ಧ ಭಾರತ ದಾಖಲಿಸಿದ ಅತ್ಯಧಿಕ ಗಳಿಕೆ. 2017ರ ಡರ್ಬಿ ಪಂದ್ಯದಲ್ಲಿ 4ಕ್ಕೆ 281 ರನ್‌ ಗಳಿಸಿದ್ದು ಈವರೆಗಿನ ಸರ್ವಾಧಿಕ ಮೊತ್ತವಾಗಿತ್ತು. ಜವಾಬಿತ್ತ ಆಸ್ಟ್ರೇಲಿಯ 46.3 ಓವರ್‌ಗಳಲ್ಲಿ 4 ವಿಕೆಟಿಗೆ 285 ರನ್‌ ಬಾರಿಸಿತು.

ಚೇಸಿಂಗ್‌ ವೇಳೆ ಅಲಿಸ್ಸಾ ಹೀಲಿ (0) ವಿಕೆಟನ್ನು ಬೇಗ ಉಳಿಸಿದರೂ ಭಾರತಕ್ಕೆ ಈ ಮೇಲುಗೈಯನ್ನು ಉಳಿಸಿಕೊಳ್ಳಲಾಗಲಿಲ್ಲ. ಫೋಬ್‌ ಲಿಚ್‌ಫೀಲ್ಡ್‌ (78), ಎಲ್ಲಿಸ್‌ ಪೆರ್ರಿ (75), ಟಹ್ಲಿಯಾ ಮೆಕ್‌ಗ್ರಾತ್‌ (68) ಅರ್ಧ ಶತಕ ಬಾರಿಸಿ ತಂಡವನ್ನು ಸುಲಭದಲ್ಲಿ ದಡ ಮುಟ್ಟಿಸಿದರು.

ಜೆಮಿಮಾ, ಪೂಜಾ ಅರ್ಧ ಶತಕ
ಸ್ಮತಿ ಮಂಧನಾ ಅನಾರೋಗ್ಯದಿಂದಾಗಿ ಈ ಪಂದ್ಯದಿಂದ ಹೊರಗುಳಿದರು. ಈ ಸ್ಥಾನಕ್ಕೆ ಬಂದ ಯಾಸ್ತಿಕಾ ಭಾಟಿಯಾ 49 ರನ್‌ ಕೊಡುಗೆ ಸಲ್ಲಿಸಿದರು. ಆದರೆ ಶಫಾಲಿ ವರ್ಮ (1), ನಾಯಕಿ ಕೌರ್‌ (9) ಯಶಸ್ಸು ಕಾಣಲಿಲ್ಲ. ವನ್‌ಡೌನ್‌ನಲ್ಲಿ ಬಂದ ರಿಚಾ ಘೋಷ್‌ 21ಕ್ಕೆ ಆಟ ಮುಗಿಸಿದರು. 20 ಓವರ್‌ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡ ಭಾರತ 95 ರನ್‌ ಮಾಡಿತ್ತು. ಸ್ಕೋರ್‌ 134ಕ್ಕೆ ಏರಿದಾಗ ದೀಪ್ತಿ ಶರ್ಮ (21) ವಿಕೆಟ್‌ ಬಿತ್ತು. ಅಮನ್‌ಜೋತ್‌ ಕೌರ್‌ (20) ಮತ್ತು ಸ್ನೇಹ್‌ ರಾಣಾ (1) ಕೂಡ ಕ್ರೀಸ್‌ನಲ್ಲಿ ಹೆಚ್ಚು ವೇಳೆ ಉಳಿಯಲಿಲ್ಲ.
ಈ ಹಂತದಲ್ಲಿ ಜೆಮಿಮಾ ಮತ್ತು ಪೂಜಾ ಭಾರತದ ಸರದಿಯನ್ನು ಆಧರಿಸಿ ನಿಂತರಲ್ಲದೆ, 8ನೇ ವಿಕೆಟಿಗೆ 68 ರನ್‌ ಪೇರಿಸುವಲ್ಲಿ ಯಶಸ್ವಿ ಯಾದರು. ಜೆಮಿಮಾ 77 ಎಸೆತಗಳಿಂದ 82 ರನ್‌ ಬಾರಿಸಿದರು.

ಪೂಜಾ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಅವರ ಅಜೇಯ 62 ರನ್‌ ಕೇವಲ 46 ಎಸೆತಗಳಿಂದ ಬಂತು. 7 ಬೌಂಡರಿ ಹಾಗೂ ಭಾರತದ ಸರದಿಯ ಎರಡೂ ಸಿಕ್ಸರ್‌ಗಳಿಗೆ ಪೂಜಾ ಸಾಕ್ಷಿಯಾದರು. ಇದು ಅವರ 4ನೇ ಅರ್ಧ ಶತಕ. ಪೂಜಾ ಸಾಹಸದಿಂದ ಭಾರತ ಕೊನೆಯ 6 ಓವರ್‌ಗಳಲ್ಲಿ 56 ರನ್‌ ಪೇರಿಸಿತು.

ಸಂಕ್ಷಿಪ್ತ ಸ್ಕೋರ್‌: ಭಾರತ-8 ವಿಕೆಟಿಗೆ 282 (ಜೆಮಿಮಾ 82, ಪೂಜಾ ಔಟಾಗದೆ 62, ಯಾಸ್ತಿಕಾ 49, ರಿಚಾ 21, ದೀಪ್ತಿ 21, ವೇರ್‌ಹ್ಯಾಮ್‌ 55ಕ್ಕೆ 2, ಗಾರ್ಡನರ್‌ 63ಕ್ಕೆ 2). ಆಸ್ಟ್ರೇಲಿಯ- 46.3 ಓವರ್‌ಗಳಲ್ಲಿ 4 ವಿಕೆಟಿಗೆ 285 (ಲಿಚ್‌ಫೀಲ್ಡ್‌ 78, ಪೆರ್ರಿ 75, ಮೆಕ್‌ಗ್ರಾತ್‌ 68, ಮೂನಿ 42, ರೇಣುಕಾ 30ಕ್ಕೆ 1, ಪೂಜಾ 41ಕ್ಕೆ 1, ರಾಣಾ 54ಕ್ಕೆ 1, ದೀಪ್ತಿ 55ಕ್ಕೆ 1).
ಪಂದ್ಯಶ್ರೇಷ್ಠ: ಫೋಬ್‌ ಲಿಚ್‌ಫೀಲ್ಡ್‌.

ಟಾಪ್ ನ್ಯೂಸ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

14-bidar

Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ

ಸಲ್ಮಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್‌ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

T20 World Cup: ಐಪಿಎಲ್‌ ಪ್ಲೇಆಫ್’ಗಿಲ್ಲ ಬಟ್ಲರ್‌, ಸಾಲ್ಟ್, ಬೇರ್‌ಸ್ಟೋ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

IPL 2024; ಮುಂಬೈ ವಿರುದ್ಧ ಭರ್ಜರಿ ಗೆಲುವು; ಮೂರಕ್ಕೇರಿದ ರಾಹುಲ್‌ ಪಡೆ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

Manipal ಆಸ್ಪತ್ರೆಯ ಡಾ.ರಾಮದಾಸ್‌ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್‌ ಸೇವೆ ಆರಂಭ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.