‘India Open’ ಬ್ಯಾಡ್ಮಿಂಟನ್ ಇಂದಿನಿಂದ : ಸಾತ್ವಿಕ್-ಚಿರಾಗ್ ಮೇಲೆ ಹೆಚ್ಚಿನ ನಿರೀಕ್ಷೆ
Team Udayavani, Jan 16, 2024, 5:30 AM IST
ಹೊಸದಿಲ್ಲಿ: ಭಾರತದ ಶಟ್ಲರ್ಗಳೀಗ ತವರಿನ ಪಂದ್ಯಾವಳಿಗೆ ಸಜ್ಜಾಗುತ್ತಿದ್ದಾರೆ. ಮಂಗಳ ವಾರದಿಂದ ಇಲ್ಲಿ “ಇಂಡಿಯಾ ಓಪನ್ ಸೂಪರ್ 750′ ಪಂದ್ಯಾವಳಿ ಆರಂಭವಾಗಲಿದ್ದು, ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ನೆಚ್ಚಿನ ಜೋಡಿಯಾಗಿರುವ ಚಿರಾಗ್- ಸಾತ್ವಿಕ್ ಒಂದು ದಿನದ ಹಿಂದಷ್ಟೇ “ಮಲೇಷ್ಯಾ ಓಪನ್ ಸೂಪರ್ 1000′ ಪ್ರಶಸ್ತಿಯ ಫೈನಲ್ನಲ್ಲಿ ಎಡವಿ ವರ್ಷಾರಂಭದ ಪ್ರಶಸ್ತಿಯಿಂದ ವಂಚಿತರಾಗಿ ದ್ದರು. “ಇಂಡಿಯಾ ಓಪನ್’ನಲ್ಲಿ ಚಾಂಪಿಯನ್ ಎನಿಸಿಕೊಳ್ಳುವ ಗುರಿ ಇವರದು. 2023ರಲ್ಲಿ ಇವರು 6 ಪ್ರಶಸ್ತಿ ಜಯಿ ಸಿದ್ದನ್ನು ಮರೆಯುವಂತಿಲ್ಲ.
2022ರಲ್ಲಿ ಸಾತ್ವಿಕ್-ಚಿರಾಗ್, ಲಕ್ಷ್ಯ ಸೇನ್ ಅವರು ತವರಿನ ಕೂಟದ ಡಬಲ್ಸ್ ಹಾಗೂ ಸಿಂಗಲ್ಸ್ ವಿಭಾಗ ದಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಕಳೆದ ವರ್ಷ ಗಾಯಾಳಾದ ಕಾರಣ ದ್ವಿತೀಯ ಸುತ್ತಿ ನಿಂದ ಹೊರಗುಳಿಯ ಬೇಕಾ ಯಿತು. ಈ ಬಾರಿ ತೈಪೆಯ ಫಾಂಗ್ ಜೆನ್ ಲೀ-ಫಾಂಗ್ ಚೀ ಲೀ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್, ಕೆ. ಶ್ರೀಕಾಂತ್ ಪುರುಷರ ಸಿಂಗಲ್ಸ್ನಲ್ಲಿ ಸ್ಪರ್ಧಿಸುವ ತವರಿನ ಪ್ರಮುಖರು. ಆದರೆ ಪಿ.ವಿ. ಸಿಂಧು ಮೊಣ ಕಾಲಿನ ನೋವಿನಿಂದಾಗಿ ಈ ಕೂಟ ದಿಂದ ಹೊರಗುಳಿದಿದ್ದಾರೆ. ವನಿತಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ- ತನಿಷಾ ಕ್ರಾಸ್ಟೊ, ಗಾಯತ್ರಿ ಗೋಪಿ ಚಂದ್-ಟ್ರೀಸಾ ಜಾಲಿ ಅಂಕಣಕ್ಕಿಳಿಯುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ