ಮತ್ತೂಂದು ದೊಡ್ಡ ಗೆಲುವಿಗೆ ಭಾರತ ಹೊಂಚು
Team Udayavani, Oct 13, 2017, 5:35 PM IST
ಢಾಕಾ: ಏಶ್ಯ ಕಪ್ ಹಾಕಿ ಪಂದ್ಯಾವಳಿಯಲ್ಲಿ ಜಪಾನನ್ನು 5-1 ಗೋಲುಗಳಿಂದ ಮಣಿಸಿ ಭರ್ಜರಿ ಆರಂಭ ಮಾಡಿರುವ ಭಾರತ, ಶುಕ್ರವಾರದ ಹಣಾಹಣಿಯಲ್ಲಿ ಮತ್ತೂಂದು ದೊಡ್ಡ ಗೆಲುವಿಗೆ ಹೊಂಚು ಹಾಕಿದೆ. ಎದುರಾಳಿ ತಂಡ ಬೇರೆ ಯಾವುದೂ ಅಲ್ಲ, ಕೂಟದ ದುರ್ಬಲ ತಂಡವಾಗಿರುವ ಬಾಂಗ್ಲಾದೇಶ.
ಗುರುವಾರದ ಆರಂಭಿಕ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ 0-7 ಅಂತರದಿಂದ ಪಾಕಿಸ್ಥಾನಕ್ಕೆ ಶರಣಾಗಿತ್ತು. ಭಾರತ ಕೂಡ ಭಾರೀ ಅಂತರದಲ್ಲಿ ಬಾಂಗ್ಲಾವನ್ನು ಮಣಿಸುವ ಬಗ್ಗೆ ಅನುಮಾನವಿಲ್ಲ. ಆಗ ಅಂತಿಮ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಕ ಸ್ಪರ್ಧಿಯಾಗಿರುವ ಪಾಕಿಸ್ಥಾನವನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಬಹುದು.
ಜಪಾನ್ ಎದುರಿನ ಮೊದಲ ಪಂದ್ಯ ಭಾರತದ ನೂತನ ಕೋಚ್ ಮರಿನ್ ಶೋರ್ಡ್ ಪಾಲಿಗೆ ಬಹಳ ಮುಖ್ಯವಾಗಿತ್ತು. ಮನದೀಪ್ ಸಿಂಗ್ ಪಡೆ ನಿರಾಸೆಗೊಳಿಸಲಿಲ್ಲ. ಜಪಾನ್ ನಾಲ್ಕನೇ ನಿಮಿಷದಲ್ಲೇ ಸಮಬಲ ಸಾಧಿಸಿದ್ದು ತಂಡಕ್ಕೆ ಎದುರಾದ ಸಣ್ಣ ಮಟ್ಟದ ಹಿನ್ನಡೆಯಾದರೂ ಬಳಿಕ ಭಾರತ ಅಮೋಘ ಪ್ರಭುತ್ವ ಸಾಧಿಸಿತು. ಕೌಶಲಭರಿತ ಪ್ರದರ್ಶನವೊಂದನ್ನು ನೀಡಿ ಗಮನ ಸೆಳೆಯಿತು. ಬಾಂಗ್ಲಾ ವಿರುದ್ಧ ಈ ಕೌಶಲಕ್ಕೆ ಇನ್ನಷ್ಟು ಹೊಳಪು ನೀಡಬೇಕಿದೆ.
ಎಸ್.ವಿ. ಸುನೀಲ್, ಲಲಿತ್ ಉಪಾಧ್ಯಾಯ, ರಮಣ್ದೀಪ್ ಸಿಂಗ್, ಆಕಾಶ್ದೀಪ್ ಸಿಂಗ್ ಅವರ ಆಕ್ರಮಣ ಅತ್ಯಂತ ಅಪಾಯಕಾರಿ ಮಟ್ಟದಲ್ಲಿತ್ತು. ಭಾರತದ ಈ ಸಾಧನೆಗೆ ಕೋಚ್ ಮರಿನ್ ಸಂತಸ ವ್ಯಕ್ತಪಡಿಸಿದರೂ ಎಲ್ಲ ತರಬೇತುದಾರರಂತೆ ಇನ್ನೂ ಉತ್ತಮ ಪ್ರದರ್ಶನ ನೀಡಬೇಕೆಂಬ ಅಪೇಕ್ಷೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್