Chess ಆಟವನ್ನು ಅನೇಕರು ಗುರುತಿಸುತ್ತಿರುವುದು ಸಂತೋಷ ತಂದಿದೆ: ಪ್ರಜ್ಞಾನಂದ
ತಮಿಳುನಾಡು ಸರಕಾರದಿಂದ ಅಭಿನಂದನೆ, ಪ್ರೋತ್ಸಾಹ ಧನ
Team Udayavani, Aug 30, 2023, 4:00 PM IST
ಚೆನ್ನೈ : ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್ ಅಪ್ ಆರ್. ಪ್ರಜ್ಞಾನಂದ ಅವರು ಬುಧವಾರ ತವರಿಗೆ ಮರಳಿದ್ದಾರೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆಗೈದ ಪ್ರಜ್ಞಾನಂದ ಅವರಿಗೆ ಭರ್ಜರಿ ಸ್ವಾಗತ ದೊರಕಿತು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮತ್ತು ರಾಜ್ಯದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಚೆನ್ನೈನಲ್ಲಿ ಭೇಟಿಯಾದರು. ಸರಕಾರದ ವತಿಯಿಂದ ಪ್ರಜ್ಞಾನಂದ ಅವರಿಗೆ ಅಭಿನಂದಿಸಲಾಯಿತು.
‘ಸರಕಾರದ ವತಿಯಿಂದ ಸಿಎಂ ಮತ್ತು ಕ್ರೀಡಾ ಸಚಿವರು ನನ್ನನ್ನು ಅಭಿನಂದಿಸಿದರು, ನಾನು ಪಂದ್ಯಾವಳಿಗಳ ಬಗ್ಗೆ ವಿವರಿಸಿದ್ದೆ. ಅವರು ನನಗೆ 30 ಲಕ್ಷ ರೂಪಾಯಿಗಳನ್ನು ನೀಡಿದರು, ಇದು ನನಗೆ ಉತ್ತಮ ಪ್ರೇರಣೆ ಎಂದು ನಾನು ಭಾವಿಸುತ್ತೇನೆ. ನಾನು ಸಿಎಂ ಮತ್ತು ಕ್ರೀಡಾ ಸಚಿವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು.
“ಅನೇಕ ಜನರು ಚೆಸ್ ಆಟವನ್ನು ಗುರುತಿಸುತ್ತಿರುವುದನ್ನು ನೋಡಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ತುಂಬಾ ಒಳ್ಳೆಯ ಬೆಳವಣಿಗೆ. ಪ್ರತಿಯೊಬ್ಬ ಕ್ರೀಡಾಪಟುವೂ ಇದೇ ಕನಸು ಕಾಣುತ್ತಾರೆ ಮತ್ತು ಅದನ್ನು ಪಡೆಯಲು ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.
#WATCH | Chennai, Tamil Nadu | Indian Chess grandmaster and 2023 FIDE World Cup runner-up R Praggnanandhaa says, “I feel really happy to see many people recognising (Chess). This is a very good feeling. I think this is what every sportsman dreams of and I am very happy to get… https://t.co/4aIxFGuFfx pic.twitter.com/4xvoTiK3TI
— ANI (@ANI) August 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ