ಪ್ರಶಸ್ತಿ ಉಳಿಸಿಕೊಳ್ಳುವರೇ ಶ್ರೀಕಾಂತ್?
Team Udayavani, Jul 3, 2018, 6:00 AM IST
ಜಕಾರ್ತಾ: ಪ್ರತಿಷ್ಠಿತ ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಮಂಗಳವಾರದಿಂದ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್ ಕೆ. ಶ್ರೀಕಾಂತ್ ಮತ್ತೂಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಪ್ರಶಸ್ತಿ ಉಳಿಸಿಕೊಳ್ಳು ಮಹತ್ವದ ಜವಾಬ್ದಾರಿ ಈ ಭಾರತೀಯ ಆಟಗಾರನ ಮೇಲಿದೆ. ಇವರೊಂದಿಗೆ, ಭಾರತದ ಅಗ್ರ ಆಟಗಾರರಾದ ಪಿ.ವಿ. ಸಿಂಧು, ಸೈನಾ ನೆಹ್ವಾಲ್, ಎಚ್. ಎಸ್. ಪ್ರಣಯ್ ಮೊದಲಾದವರು ಕೂಟದಲ್ಲಿ ಭಾಗವಹಿಸಲಿದ್ದಾರೆ.
12,50,000 ಡಾಲರ್ ಬಹುಮಾನದ ಈ ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ಶ್ರೀಕಾಂತ್, ಜಪಾನಿನ ಕೆಂಟೊ ಮೊಮೊಟ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಮೂರು ದಿನಗಳ ಹಿಂದಷ್ಟೇ ನಡೆದ್ದಿದ್ದ ಮಲೇಶ್ಯ ಓಪನ್ ಟೂರ್ನಿಯ ಪುರುಷರ ಸೆಮಿಫೈನಲ್ ಪಂದ್ಯ ದಲ್ಲಿ ಶ್ರೀಕಾಂತ್, ಮೊಮೊಟ ವಿರುದ್ಧವೇ ಸೆಣಸಿ ಸೋಲನುಭವಿಸಿದ್ದರು. ಹೀಗಾಗಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ಭಾರೀ ಹೋರಾಟ ನಡೆಸಿ ಸೇಡು ತೀರಿಸಿಕೊಳ್ಳಲು ಮುಂದಾಗಬೇಕಿದೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್. ಎಸ್. ಪ್ರಣಯ್ ಅವರು ತಮ್ಮ ಮೊದಲ ಪಂದ್ಯದಲ್ಲಿ ಚೀನದ ಬಲಿಷ್ಠ ಆಟಗಾರ ಲಿನ್ ಡಾನ್ ವಿರುದ್ಧ ಕಣಕ್ಕಿಳಿಯುವರು. ಇದು ಪ್ರಣಯ್ ಪಾಲಿಗೆ ಕಠಿನ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಬಿ. ಸಾಯಿ ಪ್ರಣೀತ್ ಚೈನೀಸ್ ತೈಪೆಯ ವಾಂಗ್ ತ್ಸು ವಿರುದ್ಧ, ಸಮೀರ್ ವರ್ಮ ಅವರು ಜರ್ಮ ನಿಯ ರಾಸ್ಮಸ್ ಗೆಮೆ ವಿರುದ್ಧ ಆಡಲಿದ್ದಾರೆ.
ವನಿತಾ ಸಿಂಗಲ್ಸ್ ಮುಖಾಮುಖಿ
ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತುಗಳಲ್ಲಿ, ಪಿ.ವಿ. ಸಿಂಧು ಅವರು ಥಾಯ್ಲೆಂಡ್ನ ಪೊರ್ನ ಪವಿ ಚೊಚು ವೊಂಗ್ ವಿರುದ್ಧ, ಸೈನಾ ನೆಹ್ವಾಲ್ ಇಂಡೋನೇಶ್ಯದ ದಿನಾರ್ ಅಯುಸ್ಟಿನ್ ವಿರುದ್ಧ ಸೆಣ ಸಲಿದ್ದಾರೆ. 16ರ ಹರೆಯದ ವೈಷ್ಣವಿ ರೆಡ್ಡಿ ಕೂಡ ಈ ಕೂಟದಲ್ಲಿ ಸ್ಪರ್ಧಿಸಲಿದ್ದು, ಡೆನ್ಮಾರ್ಕ್ನ ಲಿಜೆ ಜಾರ್ಸ್ಫೆಲ್ಟ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ