ಅಭ್ಯಾಸದಲ್ಲೂ  ಡೆತ್‌ ಓವರ್‌ ಎಸೆಯುತ್ತಿದ್ದೆ:  ಜಸ್‌ಪ್ರೀತ್‌ ಬುಮ್ರಾ


Team Udayavani, May 1, 2017, 11:34 AM IST

bumra2.jpg

ರಾಜ್‌ಕೋಟ್‌: ಅಮೋಘ ಎನಿಸಿದ “ಸೂಪರ್‌ ಓವರ್‌’ ಒಂದನ್ನು ಎಸೆದು ರೋಚಕ ಟೈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದಿತ್ತ ಜಸ್‌ಪ್ರೀತ್‌ ಬುಮ್ರಾ ಶನಿವಾರ ರಾತ್ರಿಯ ಐಪಿಎಲ್‌ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅಭ್ಯಾಸದಲ್ಲೂ ಡೆತ್‌ ಓವರ್‌ ಎಸೆಯುತ್ತ ಬಂದದ್ದು ಹಾಗೂ ಮಾಲಿಂಗ ಜತೆ ಯಾರ್ಕರ್‌ಗಳನ್ನು ಅಭ್ಯಸಿಸಿದ್ದು ಪ್ರಯೋಜನಕ್ಕೆ ಬಂತು ಎಂಬುದಾಗಿ ಅವರು ಹೇಳಿದರು.

ಆತಿಥೇಯ ಗುಜರಾತ್‌ ಮತ್ತು ಮುಂಬೈ ನಡುವಿನ ಶನಿವಾರದ ಪಂದ್ಯ ತಲಾ 153 ರನ್ನುಗಳೊಂದಿಗೆ ಟೈಯಲ್ಲಿ ಅಂತ್ಯ ಕಂಡಿತು. ಅನಂತರದ ಸೂಪರ್‌ ಓವರ್‌ನಲ್ಲಿ ಮುಂಬೈ ಜಯ ಸಾಧಿಸಿ ಎರಡಂಕವನ್ನು ಕಿಸೆಗೆ ಹಾಕಿಕೊಂಡಿತು.

“ನಾನು ಎಸೆದ ಮೊತ್ತಮೊದಲ ಸೂಪರ್‌ ಓವರ್‌ ಇದಾಗಿತ್ತು. ಹೀಗಾಗಿ ಬಹಳ ಒತ್ತಡಕ್ಕೆ ಸಿಲುಕಿದ್ದೆ. ನಮ್ಮ ತಂಡ ಕೇವಲ 11 ರನ್ನನ್ನು ಉಳಿಸಿಕೊಳ್ಳಬೇಕಿತ್ತು. ಈ ಸಂದರ್ಭದಲ್ಲಿ ಪ್ರಶಾಂತ ಮನಸ್ಥಿತಿಯ ಅಗತ್ಯವಿರುತ್ತದೆ. ಸಕಾರಾತ್ಮಕ ಸಂಗತಿಗಳತ್ತ, ನಮ್ಮ ಯೋಜನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ನಾನು ಯಶಸ್ವಿಯಾದೆ…’ ಎಂದು ಟೈ ಓವರಿನಲ್ಲಿ ಗುಜರಾತನ್ನು ಕಟ್ಟಿಹಾಕಿದ ಬುಮ್ರಾ ಹೇಳಿದರು.

ನಿಜಕ್ಕಾದರೆ ಮುಂಬೈ ನಿರಾಯಾಸಾವಾಗಿ ಗೆಲ್ಲುವಂಥ ಪಂದ್ಯ ಇದಾಗಿತ್ತು. ಆರಂಭಕಾರ ಪಾರ್ಥಿವ್‌ ಪಟೇಲ್‌ ಭಾರೀ ಜೋಶ್‌ನಲ್ಲಿದ್ದರು. ಮೊದಲ 3 ಓವರ್‌ಗಳಲ್ಲೇ 7 ಬೌಂಡರಿ, ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತ್ತು. ಆದರೆ 44 ಎಸೆತಗಳಿಂದ 70 ರನ್‌ ಬಾರಿಸಿದ ಪಾರ್ಥಿವ್‌ 14ನೇ ಓವರಿ ನಲ್ಲಿ ಔಟಾಗುವುದರೊಂದಿಗೆ ಮುಂಬೈ ಪರಿಸ್ಥಿತಿ ಬಿಗಡಾ ಯಿಸುತ್ತ ಹೋಯಿತು. ಅಂತಿಮ ಓವರಿನಲ್ಲಿ 2 ವಿಕೆಟ್‌ಗಳಿಂದ 11 ರನ್‌ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.

ಇರ್ಫಾನ್‌ ಪಠಾಣ್‌ ಎಸೆದ ಕೊನೆಯ ಓವರಿನ ಮೊದಲ ಎಸೆತವನ್ನೇ ಕೃಣಾಲ್‌ ಪಾಂಡ್ಯ ಸಿಕ್ಸರಿಗೆ ಬೀಸಿದರು. ಬಳಿಕ ಒಂದು ರನ್‌ ತೆಗೆದರು. 3ನೇ ಎಸೆತದಲ್ಲಿ ಬುಮ್ರಾ ರನೌಟಾದರು. ಮುಂದಿನೆರಡು ಎಸೆತಗಳಲ್ಲಿ ಪಾಂಡ್ಯ 2 ಹಾಗೂ ಒಂದು ರನ್‌ ಮಾಡಿದರು. ಅಂತಿಮ ಎಸೆತದಲ್ಲಿ ಒಂದು ರನ್‌ ಕದಿಯುವ ಧಾವಂತದಲ್ಲಿ ಪಾಂಡ್ಯ ರನೌಟಾದರು. ಸ್ಕೋರ್‌ ಸಮನಾಯಿತು.

ಸೂಪರ್‌ ಓವರ್‌ ಮ್ಯಾಜಿಕ್‌
ಗುಜರಾತ್‌ ಪರ ಸೂಪರ್‌ ಓವರ್‌ ಎಸೆದವರು ಜೇಮ್ಸ್‌ ಫಾಕ್ನರ್‌. ಮುಂಬೈ 5 ಎಸೆತಗಳಲ್ಲಿ 2 ವಿಕೆಟ್‌ ಕಳೆದುಕೊಂಡು 11 ರನ್ನಿಗೆ “ಆಲೌಟ್‌’ ಆಯಿತು. ಪೊಲಾರ್ಡ್‌ 10, ಬಟ್ಲರ್‌ ಒಂದು ರನ್‌ ಮಾಡಿದರು.  ಗುಜರಾತ್‌ ಗೆಲುವಿಗೆ 12 ರನ್‌ ಮಾಡಿದರೆ ಸಾಕಿತ್ತು. ಫಿಂಚ್‌-ಮೆಕಲಮ್‌ ಅವರಂಥ ಬಿಗ್‌ ಹಿಟ್ಟರ್ ಕ್ರೀಸಿಗೆ ಇಳಿದಿದ್ದರು. ಇತ್ತ ಬುಮ್ರಾ ಆರಂಭದಲ್ಲೇ ಲಯ ತಪ್ಪಿದ್ದರು. ನೋಬಾಲ್‌, ವೈಡ್‌ ಕೂಡ ಎಸೆದರು. ಆದರೆ ಇಬ್ಬರ ಬ್ಯಾಟಿನಿಂದ ಬಂದದ್ದು ಒಂದೊಂದು ಸಿಂಗಲ್ಸ್‌ ಮಾತ್ರ. ಅದೂ ಕೊನೆಯ 2 ಎಸೆತಗಳಲ್ಲಿ. ಗುಜರಾತ್‌ ಗಳಿಸಿದ ಒಟ್ಟು ರನ್‌ ಕೇವಲ 6. ಮುಂಬೈ ಲಕ್ಕಿ ತಂಡ ಎಂಬುದು ಇದರಿಂದ ಸಾಬೀತಾಗಿದೆ!
 

ಟಾಪ್ ನ್ಯೂಸ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್‌ ಶಾ ಮನವಿ

ವೇಷ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ

ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

IPL ಮುಂಬೈ ಇಂಡಿಯನ್ಸ್‌ ತಂಡಕ್ಕೆ ದಂಡ: ಹಾರ್ದಿಕ್‌ಗೆ ನಿಷೇಧ ಭೀತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.