ಕಡುಬಡತನದ ಕನಸುಗಾರರಿಗೆ ನೋಟಿನ ಕಂತೆ


Team Udayavani, Dec 20, 2019, 9:41 PM IST

kartik-tyagi

ಕೋಲ್ಕತಾ: ಗುರುವಾರ ನಡೆದ ಐಪಿಎಲ್‌ ಹರಾಜು ಹಲವು ವಿಶೇಷಗಳನ್ನು ದಾಖಲಿಸಿದೆ. ಇದು ಹಲವು ಕನಸುಕಂಗಳನ್ನು ಅರಳಿಸಿದೆ. ಸಣ್ಣ ರೈತರೊಬ್ಬರ ಪುತ್ರ ಕಾರ್ತಿಕ್‌ ತ್ಯಾಗಿ, ವಾಹನ ಚಾಲಕನ ಪುತ್ರ ಪ್ರಿಯಂ ಗರ್ಗ್‌, 3 ವರ್ಷ ಟೆಂಟ್‌ನಲ್ಲಿ ಮಲಗಿ, ಪಾನಿಪುರಿ ಮಾರಿ ಕ್ರಿಕೆಟ್‌ ಕಲಿತ ಯಶಸ್ವಿ ಜೈಸ್ವಾಲ್‌ ಇವರೆಲ್ಲ ಕೋಟಿ ರೂ.ಗಳಿಗೆ ಹರಾಜಾಗಿದ್ದಾರೆ. ಒಂದು ಕಾಲದಲ್ಲಿ ಕಷ್ಟಗಳನ್ನಷ್ಟೇ ನೋಡಿದ್ದ ಈ ಹದಿಹರೆಯದ ಹುಡುಗರು, ಭಾರತದ ಅಂಡರ್‌-19 ವಿಶ್ವಕಪ್‌ ತಂಡದ ಸದಸ್ಯರು ಎನ್ನುವುದು ಗಮನಾರ್ಹ.

ಪಾನಿಪುರಿ ಮಾರಿದ ಬಳಿಕ ಕ್ರಿಕೆಟ್‌
ಬರೀ ಕನಸುಗಳನ್ನೇ ಹೊತ್ತ ಯಶಸ್ವಿ ಜೈಸ್ವಾಲ್‌ ಉತ್ತರಪ್ರದೇಶದಿಂದ ಮುಂಬಯಿಗೆ ಬಂದಾಗ ಕೇವಲ 11 ವರ್ಷ. ಆ ವೇಳೆ ಅವರು ಸಂಬಂಧಿಕರೊಬ್ಬರ ಹಾಲಿನ ಡೈರಿಯಲ್ಲಿ ಇರುತ್ತಿದ್ದರು. ಇನ್ನು ಇಲ್ಲಿರಬೇಡ ಎಂದು ಹೇಳಿದ್ದರಿಂದ, ಆಜಾದ್‌ ಮೈದಾನದ ಟೆಂಟ್‌ಗೆ ತೆರಳಿದರು.

ಮುಂದಿನ 3 ವರ್ಷ ಬಡತನ, ಹಸಿವಿನೊಂದಿಗೆ ಏಗುತ್ತ ಕ್ರಿಕೆಟ್‌ ಅಭ್ಯಾಸ ನಡೆಸಿದರು. ಜೀವನ ನಿರ್ವಹಣೆಗೆ ತಂದೆಯೊಂದಿಗೆ ಪಾನಿಪುರಿ ಮಾರಾಟ ಮಾಡತೊಡಗಿದರು. ಅನಂತರವಷ್ಟೇ ಕ್ರಿಕೆಟ್‌ ಅಂಗಳಕ್ಕೆ ಓಡುತ್ತಿದ್ದರು. ಅವರಿಗೆ ಕ್ರಿಕೆಟ್‌ ತರಬೇತಿ ನೀಡಿದ್ದು ಜ್ವಾಲಾ ಸಿಂಗ್‌. ಈಗ ಅವರ ಜತೆಯೇ ಜೈಸ್ವಾಲ್‌ ವಾಸಿಸುತ್ತಾರೆ. ಅವರನ್ನು ರಾಜಸ್ಥಾನ್‌ ರಾಯಲ್ಸ್‌ 2.40 ಕೋಟಿ ರೂ. ನೀಡಿ ಖರೀದಿಸಿದೆ. ಈ ಹಣವನ್ನು ಏನು ಮಾಡುವುದೆಂದು ನನಗೆ ಗೊತ್ತಿಲ್ಲ, ಅದರ ಹೊಣೆ ತರಬೇತುದಾರರದ್ದು ಎಂದು ಜೈಸ್ವಾಲ್‌ ಹೇಳಿದ್ದಾರೆ.

ಎಲ್ಲವೂ ಮಗನ ಕ್ರಿಕೆಟಿಗಾಗಿ
ಭಾರತದ ಅಂಡರ್‌-19 ತಂಡದ ನಾಯಕ ಪ್ರಿಯಂ ಗರ್ಗ್‌. ಮಗನಿಗಾಗಿ ತಂದೆ ಮಾಡದ ಕೆಲಸಗಳೇ ಇಲ್ಲ. ಹಾಲು ಹಾಕುವುದು, ಶಾಲಾ ವಾಹನಗಳನ್ನು ಓಡಿಸುವುದು, ಮೂಟೆ ಹೊರುವುದು… ಎಲ್ಲವೂ ಮಗನ ಕ್ರಿಕೆಟ್‌ ಏಳಿಗೆಗಾಗಿ. ಹಾಗೆ ದುಡಿದು ದಿನಾ ಸಂಜೆ 10 ರೂ.ಗಳನ್ನು ನೀಡುತ್ತಿದ್ದರು. ಅದನ್ನು ಪಡೆದು ಗರ್ಗ್‌ ಮರುದಿನ ಮೀರತ್‌ಗೆ ಹೋಗಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದರು. ಹಣವಿಲ್ಲದ ದಿನಾ ಗರ್ಗ್‌ ಬಸ್ಸಿನ ಮೇಲೆ ಕುಳಿತು ಹೋಗಿದ್ದಾರೆ!

ಈಗ ತಂದೆ ಆರೋಗ್ಯ ಇಲಾಖೆಯಲ್ಲಿ ವಾಹನ ಓಡಿಸುತ್ತಾರೆ. ಗರ್ಗ್‌ ಅವರನ್ನು ಸನ್‌ರೈಸರ್ಸ್‌ ಹೈದರಾಬಾದ್‌ 1.9 ಕೋಟಿ ರೂ. ನೀಡಿ ಖರೀದಿಸಿದೆ.

ತ್ಯಾಗಿಗಾಗಿ ತಂದೆಯ ತ್ಯಾಗ
“ನನ್ನ ತಂದೆ ಸಣ್ಣ ರೈತ, ಉತ್ತರಪ್ರದೇಶದ ಹಪುರ್‌ನವರು. ಈ ಹಪುರ್‌ ಹೆಸರನ್ನು ನನ್ನ ಸಹ ಕ್ರಿಕೆಟಿಗರು ಕೇಳಿಯೇ ಇರಲಿಲ್ಲ. ಹರಾಜು ಮುಗಿದ ಮೇಲೆಯೇ ಹಲವರಿಗೆ ಗೊತ್ತಾದದ್ದು…’ ಎಂದು 19 ವರ್ಷದ ಮಧ್ಯಮ ವೇಗಿ ಕಾರ್ತಿಕ್‌ ತ್ಯಾಗಿ ಹೇಳುತ್ತಾರೆ. ಅವರನ್ನು ರಾಜಸ್ಥಾನ್‌ ರಾಯಲ್ಸ್‌ 1.3 ಕೋಟಿ ರೂ. ನೀಡಿ ಖರೀದಿಸಿದೆ.
ಆದರೆ ಇಷ್ಟು ಹಣವನ್ನು ತನಗೆ ನಿಭಾಯಿಸುವುದು ಹೇಗೆಂದು ಗೊತ್ತಿಲ್ಲ. ಇದರ ಉಸ್ತುವಾರಿಯೆಲ್ಲ ಅಪ್ಪನದ್ದೇ ಎಂದು ಕಾರ್ತಿಕ್‌ ಹೇಳಿಕೊಂಡಿದ್ದಾರೆ. ಕಾರ್ತಿಕ್‌ಗೆ ತನ್ನಪ್ಪ ತನಗಾಗಿ ಮಾಡಿದ ತ್ಯಾಗಗಳೆಲ್ಲ ಚೆನ್ನಾಗಿ ನೆನಪಿದೆ. ಸತತ 2 ವರ್ಷ ಬೆನ್ನುನೋವಿಗೆ ಸಿಲುಕಿದ್ದ ಅವರಿಗೆ, ತಂದೆ ಸಾಲಮಾಡಿ ಚಿಕಿತ್ಸೆ ಕೊಡಿಸಿದ್ದರು.

ಟಾಪ್ ನ್ಯೂಸ್

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.