ಇಂದು, ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಹರಾಜು
Team Udayavani, Jan 27, 2018, 11:56 AM IST
ಬೆಂಗಳೂರು: ಉದ್ಯಾನನಗರಿಯಲ್ಲಿ ಶನಿವಾರ 11ನೇ ಆವೃತ್ತಿ ಐಪಿಎಲ್ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟು 2 ದಿನ ಕ್ರಿಕೆಟಿಗರ ಹರಾಜು ನಡೆಯಲಿದೆ. ಹರಾಜಿನಲ್ಲಿ ಒಟ್ಟು 578 ಆಟಗಾರರು ಇರಲಿದ್ದಾರೆ. ಸ್ಟಾರ್ ನ್ಪೋರ್ಟ್ಸ್-1ರಲ್ಲಿ ಇದು ನೇರ ಪ್ರಸಾರವಾಗಲಿದೆ.
ಈ ಸಲದ ಹರಾಜಿನಲ್ಲಿ ಫ್ರಾಂಚೈಸಿ ಗಳು ಆಲ್ರೌಂಡರ್ಗಳತ್ತ ಹೆಚ್ಚು ಗಮನ ಕೊಡುವ ಸಾಧ್ಯತೆಯೇ ಹೆಚ್ಚು. ಟಿ20ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕವೂ ತಂಡಕ್ಕೆ ನೆರವಾಗುವಂಥವರ ಅಗತ್ಯವಿದೆ. ಉಳಿದಂತೆ ಗೌತಮ್ ಗಂಭೀರ್, ಯುವರಾಜ್ ಸಿಂಗ್, ರಿಷಭ್ ಪಂತ್ ಮೇಲೆ ಕೂಡ ನಿರೀಕ್ಷೆ ಇದೆ. ಆದರೆ ಯುವಿ ಇತ್ತೀಚೆಗೆ ಫಾರ್ಮ್ ಕಳೆದುಕೊಂಡಂತಿದ್ದಾರೆ. ಹೀಗಾಗಿ ಇವರು ದೊಡ್ಡ ಮೊತ್ತಕ್ಕೆ ಹರಾಜುಗೊಳ್ಳುವ ಸಾಧ್ಯತೆ ಕಡಿಮೆ.
16 ಆಟಗಾರರಿಗೆ ಬಂಪರ್ ಬೆಲೆ?
ಒಟ್ಟು 16 ಆಟಗಾರರ ಮೇಲೆ ಎಲ್ಲರ ಕಣ್ಣಿದೆ. ಇವರು ತಾರಾ ಆಟಗಾರರಾಗಿದ್ದು ಮೂಲಬೆಲೆ 2 ಕೋಟಿ ರೂ. ಹೊಂದಿದ್ದಾರೆ. ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಸ್ಪಿನ್ನರ್ ಆರ್.ಅಶ್ವಿನ್, ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್, ಮಿಚೆಲ್ ಸ್ಟಾರ್ಕ್, ಕ್ರಿಸ್ ಗೇಲ್ ಹಾಗೂ ಡ್ವೇನ್ ಬ್ರಾವೊ ಮತ್ತಿತರ ತಾರಾ ಆಟಗಾರರು ಕೂಡ ಇದ್ದಾರೆ. ಸ್ಟೋಕ್ಸ್ ಕಳೆದ ಆವೃತ್ತಿಯಲ್ಲಿ 14.5 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟಗೊಂಡಿದ್ದರು. ಸ್ಪಿನ್ನರ್ ಅಶ್ವಿನ್ ಮತ್ತೆ ಚೆನ್ನೈ ತಂಡಕ್ಕೆ ಮರಳುತ್ತಾರೆಯೇ ಎನ್ನುವ ಪ್ರಶ್ನೆ ಇದೆ. ಅವರನ್ನು ಹರಾಜಿನಲ್ಲಿ ಉಳಿಸಿಕೊಳ್ಳಲಿದ್ದೇವೆ ಎನ್ನುವ ಸೂಚನೆಯನ್ನು ಧೋನಿ ನೀಡಿದ್ದಾರೆ.
ಕುಲದೀಪ್, ಚಾಹಲ್ ಫೇವರಿಟ್
ಟಿ20 ಬ್ಯಾಟ್ಸ್ಮನ್ಗಳ ಆಟ. ಬೌಲರ್ಗಳಿಗೆ ಇಲ್ಲಿ ಮೆರೆಯುವುದು ಕಷ್ಟ ಎನ್ನುವ ಮಾತಿದೆ. ಆದರೆ ಸಿಕ್ಸರ್ಗಳ ಮೂಲಕ ಅಬ್ಬರಿಸುತ್ತಿದ್ದ ಬ್ಯಾಟ್ಸ್ಮನ್ಗಳ ರನ್ ವೇಗಕ್ಕೆ ಕಡಿವಾಣ ಹಾಕಿದ ಸ್ಪಿನ್ ಬೌಲರ್ಗಳಿದ್ದರೆ ಅದು ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್. ಇವರು ಟಿ20ಯಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಈ ಬಾರಿ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಳ್ಳುವ ನಿರೀಕ್ಷೆ ಇದೆ. ಜತೆಗೆ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಕೂಡ ಫ್ರಾಂಚೈಸಿಗಳ ಫೇವರಿಟ್ ಆಗಿದ್ದಾರೆ.
ಕುತೂಹಲ ಹುಟ್ಟಿಸಿದ ಧೋನಿ ನಡೆ
ಎಂ.ಎಸ್.ಧೋನಿ ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಹಿಂದೆ ಯಶಸ್ವಿ ನಾಯಕರಾಗಿ ಚೆನ್ನೈ ಮುನ್ನಡೆಸಿದ್ದ ಕೀರ್ತಿ ಧೋನಿಗಿದೆ. ಮಾಲಿಕರ ಬೆಟ್ಟಿಂಗ್ ಪ್ರಕರಣದಿಂದ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ವಾಪಸ್ ಆಗಿದೆ. ಚೆನ್ನೈಮೇಲೆ ನಿರೀಕ್ಷೆಗಳ ಮಹಾಪೂರವೇ ಇದೆ. ಸ್ಪಿನ್ನರ್ ಅಶ್ವಿನ್ ಜತೆಗೆ ಆಲ್ರೌಂಡರ್ ಡ್ವೇನ್ ಬ್ರಾವೋ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆರ್ಟಿಎಂ ಉಪಯೋಗಿಸಿ ಬ್ರಾವೊ ಖರೀದಿಸುವ ಸಾಧ್ಯತೆ ಹೆಚ್ಚಿದೆ.
ದಿಲ್ಲಿ ಪಾಲಾಗುತ್ತಾರೆಯೇ ಗಂಭೀರ್?
ಗೌತಮ್ ಗಂಭೀರ್ ಹಿಂದಿನ ಆವೃತ್ತಿಗಳಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ನೇತೃತ್ವದ ಕೋಲ್ಕತಾ ನೈಟ್ರೈಡರ್ ತಂಡದಲ್ಲಿ ಆಡಿದ್ದರು. ಈ ಸಲ ಅವರನ್ನು ಕೆಕೆಆರ್ ತಂಡ ಉಳಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿದೆ. ಡೆಲ್ಲಿ ಡೇರ್ಡೆವಿಲ್ಸ್ ತಂಡ ಗಂಭೀರ್ ಅವರನ್ನು ಖರೀದಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.
ಫ್ರಾಂಚೈಸಿಗಳ ಬಳಿ ಉಳಿದ ಹಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆಟೋ ಚಾಲಕಿಯರ ಬ್ಯಾಂಕ್ ಸಾಲ ತೀರಿಸಿ ರಿಯಲ್ ಲೈಫ್ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್
Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ