ಹೆಟ್‌ಮೈರ್‌ ಉತ್ತಮ ಬ್ಯಾಟಿಂಗ್‌: ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ


Team Udayavani, Apr 17, 2023, 6:55 AM IST

ಹೆಟ್‌ಮೈರ್‌ ಉತ್ತಮ ಬ್ಯಾಟಿಂಗ್‌: ರಾಜಸ್ಥಾನ್‌ಗೆ 3 ವಿಕೆಟ್‌ಗಳ ಜಯ

ಅಹ್ಮದಾಬಾದ್‌: ಸಂಜು ಸ್ಯಾಮ್ಸನ್‌ ಮತ್ತು ಶಿಮ್ರನ್‌ ಹೆಟ್‌ಮೈರ್‌ ಅವರ ಉತ್ತಮ ಬ್ಯಾಟಿಂಗ್‌ನೊಂದಿಗೆ ರಾಜಸ್ಥಾನ್‌ ರಾಯಲ್ಸ್‌ ರವಿವಾರ ರಾತ್ರಿಯ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಗುಜರಾತ್‌ ಟೈಟಾನ್ಸ್‌ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

ಗುಜರಾತ್‌ 7 ವಿಕೆಟಿಗೆ 177 ರನ್‌ ಗಳಿಸಿದರೆ, ರಾಜಸ್ಥಾನ್‌ ತಂಡವು 19.2 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 179 ರನ್‌ ಗಳಿಸುವ ಮೂಲಕ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್‌ಗಳ ಜಯ ದಾಖಲಿಸಿತು.

ಇದು ಗುಜರಾತ್‌ ವಿರುದ್ಧ ರಾಜಸ್ಥಾನ್‌ ಸಾಧಿಸಿದ ಮೊದಲ ಗೆಲುವು. ಕಳೆದ ವರ್ಷದ ಮೂರೂ ಪಂದ್ಯಗಳಲ್ಲಿ ರಾಜಸ್ಥಾನ್‌ ತಂಡವು ಗುಜರಾತ್‌ ವಿರುದ್ಧ ಸೋಲು ಅನುಭವಿಸಿತ್ತು. ಇದರಲ್ಲಿ ಫೈನಲ್‌ ಕೂಡ ಸೇರಿತ್ತು.

ಚೇಸಿಂಗ್‌ ವೇಳೆ ಯಶಸ್ವಿ ಜೈಸ್ವಾಲ್‌ (1) ಮತ್ತು ಜಾಸ್‌ ಬಟ್ಲರ್‌ (0) ಅವರನ್ನು ರಾಜಸ್ಥಾನ್‌ ಅಗ್ಗಕ್ಕೆ ಕಳೆದುಕೊಂಡಿತು. ಅರ್ಧ ಹಾದಿ ಕ್ರಮಿಸುವಾಗ 3 ವಿಕೆಟಿಗೆ ಕೇವಲ 53 ರನ್‌ ಒಟ್ಟುಗೂಡಿತ್ತು. ಆದರೆ ನಾಯಕ ಸಂಜು ಸ್ಯಾಮ್ಸನ್‌ ಸಿಡಿದು ನಿಂತರು. ರಶೀದ್‌ ಖಾನ್‌ಗೆ ಹ್ಯಾಟ್ರಿಕ್‌ ಸಿಕ್ಸರ್‌ ರುಚಿ ತೋರಿಸಿದರು. 32 ಎಸೆತಗಳಿಂದ 60 ರನ್‌ ಬಾರಿಸಿ ಅಬ್ಬರಿಸಿದರು (3 ಬೌಂಡರಿ, 6 ಸಿಕ್ಸರ್‌). ಶಿಮ್ರನ್‌ ಹೆಟ್‌ಮೈರ್‌ ಕೂಡ ಸಿಡಿದು ನಿಂತರು. ಅಜೇಯವಾಗಿದ್ದು, ವಿಜಯೋತ್ಸವ ಆಚರಿಸಿದ ಹೆಟ್‌ಮೈರ್‌ ಅವರು 26 ಎಸೆತಗಳಲ್ಲಿ 56 ರನ್‌ ದೋಚಿದರು. ಅವರ ಇನ್ನಿಂಗ್ಸ್‌ನಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳು ಒಳಗೊಂಡಿದ್ದವು.

ಗುಜರಾತ್‌ನ ಮೊಹಮ್ಮದ್‌ ಶಮಿ 3 ವಿಕೆಟ್‌ ಉರುಳಿಸಿದರೆ, ರಶೀದ್‌ ಖಾನ್‌ 2 ವಿಕೆಟ್‌ ಪಡೆದರು.

ಗುಜರಾತ್‌ ನಿಧಾನ ಆರಂಭ
ಆರಂಭಕಾರ ವೃದ್ಧಿಮಾನ್‌ ಸಾಹಾ (4) ಅವರನ್ನು ಗುಜರಾತ್‌ ಬೇಗನೇ ಕಳೆದುಕೊಂಡಿತು. ಶುಭಮನ್‌ ಗಿಲ್‌ 16ನೇ ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿದರೂ ಅವರ ಬ್ಯಾಟಿಂಗ್‌ ಬಿರುಸಿನಿಂದ ಕೂಡಿರಲಿಲ್ಲ. 45 ರನ್ನಿಗೆ 34 ಎಸೆತ ತೆಗೆದುಕೊಂಡರು (4 ಬೌಂಡರಿ, 1 ಸಿಕ್ಸರ್‌). ಕಳೆದ ಕೆಲವು ಪಂದ್ಯಗಳಲ್ಲಿ ಮುನ್ನುಗ್ಗಿ ಬಾರಿಸಿದ್ದ ಸಾಯಿ ಸುದರ್ಶನ್‌ ಅವರಿಗೂ ಬಿರುಸಿನ ಆಟ ಸಾಧ್ಯವಾಗಲಿಲ್ಲ. 20 ರನ್‌ 19 ಎಸೆತಗಳಲ್ಲಿ ಬಂತು.

ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್‌ನಲ್ಲಿ ಒಂದಿಷ್ಟು ಸುಧಾರಣೆ ಕಂಡುಬಂತು. 19 ಎಸೆತಗಳಿಂದ 28 ರನ್‌ ಮಾಡಿದರು (3 ಬೌಂಡರಿ, 1 ಸಿಕ್ಸರ್‌). 16ನೇ ಓವರ್‌ ವೇಳೆ ಗುಜರಾತ್‌ 4ಕ್ಕೆ 121 ರನ್‌ ಗಳಿಸಿ ಕುಂಟುತ್ತಿತ್ತು. ಆದರೆ ಡೇವಿಡ್‌ ಮಿಲ್ಲರ್‌ ಮತ್ತು ಅಭಿನವ್‌ ಮನೋಹರ್‌ ಡೆತ್‌ ಓವರ್‌ನಲ್ಲಿ ಮುನ್ನುಗ್ಗಿ ಬೀಸತೊಡಗಿದ್ದರಿಂದ ಗುಜರಾತ್‌ ಸವಾಲಿನ ಮೊತ್ತ ಪೇರಿಸುವಂತಾಯಿತು. ಇವರಿಬ್ಬರು ಕೇವಲ 22 ಎಸೆತಗಳಿಂದ 45 ರನ್‌ ಸೂರೆಗೈದರು.

ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟರ್‌ ಡೇವಿಡ್‌ ಮಿಲ್ಲರ್‌ 30 ಎಸೆತಗಳಿಂದ 46 ರನ್‌ ಬಾರಿಸಿದರು. ಇದು ಗುಜರಾತ್‌ ಸರದಿಯ ಸರ್ವಾಧಿಕ ಗಳಿಕೆ ಆಗಿತ್ತು.

ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಮತ್ತು ಬಿ ಬೌಲ್ಟ್ 4
ಶುಭಮನ್‌ ಗಿಲ್‌ ಸಿ ಬಟ್ಲರ್‌ ಬಿ ಸಂದೀಪ್‌ 45
ಸಾಯಿ ಸುದರ್ಶನ್‌ ರನೌಟ್‌ 20
ಹಾರ್ದಿಕ್‌ ಪಾಂಡ್ಯ ಸಿ ಜೈಸ್ವಾಲ್‌ ಬಿ ಚಹಲ್‌ 28
ಡೇವಿಡ್‌ ಮಿಲ್ಲರ್‌ ಸಿ ಹೆಟ್‌ಮೈರ್‌ ಬಿ ಸಂದೀಪ್‌ 46
ಅಭಿನವ್‌ ಮನೋಹರ್‌ ಸಿ ಪಡಿಕ್ಕಲ್‌ ಬಿ ಝಂಪ 27
ರಾಹುಲ್‌ ತೆವಾಟಿಯಾ ಔಟಾಗದೆ 1
ರಶೀದ್‌ ಖಾನ್‌ ರನೌಟ್‌ 1
ಅಲ್ಜಾರಿ ಜೋಸೆಫ್ ಔಟಾಗದೆ 0
ಇತರ 5
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 177
ವಿಕೆಟ್‌ ಪತನ: 1-5, 2-32, 3-91, 4-121, 5-166, 6-175, 7-178.
ಬೌಲಿಂಗ್‌: ಟ್ರೆಂಟ್‌ ಬೌಲ್ಟ್ 4-0-46-1
ಸಂದೀಪ್‌ ಶರ್ಮ 4-0-25-2
ಆ್ಯಡಂ ಝಂಪ 4-0-32-1
ಆರ್‌. ಅಶ್ವಿ‌ನ್‌ 4-0-37-0
ಯಜುವೇಂದ್ರ ಚಹಲ್‌ 4-0-36-1

ರಾಜಸ್ಥಾನ್‌ ರಾಯಲ್ಸ್‌
ಯಶಸ್ವಿ ಜೈಸ್ವಾಲ್‌ ಸಿ ಗಿಲ್‌ ಬಿ ಪಾಂಡ್ಯ 1
ಜಾಸ್‌ ಬಟ್ಲರ್‌ ಬಿ ಶಮಿ 0
ದೇವದತ್ತ ಪಡಿಕ್ಕಲ್‌ ಸಿ ಮೋಹಿತ್‌ ಬಿ ರಶೀದ್‌ 26
ಸಂಜು ಸ್ಯಾಮ್ಸನ್‌ ಸಿ ಮಿಲ್ಲರ್‌ ಬಿ ಅಹ್ಮದ್‌ 60
ರಿಯಾನ್‌ ಪರಾಗ್‌ ಸಿ ಮಿಲ್ಲರ್‌ ಬಿ ರಶೀದ್‌ 5
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 56
ಧ್ರುವ ಜುರೆಲ್‌ ಸಿ ಶರ್ಮಾ ಬಿ ಶಮಿ 18
ರವಿಚಂದ್ರನ್‌ ಅಶ್ವಿ‌ನ್‌ ಸಿ ತೆವಾಟಿಯಾ ಬಿ ಶಮಿ 10
ಟ್ರೆಂಟ್‌ ಬೌಲ್ಟ್ ಔಟಾಗದೆ 0
ಇತರ 03
ಒಟ್ಟು (19.2 ಓವರ್‌ಗಳಲ್ಲಿ 7 ವಿಕೆಟ್‌ಗೆ) 179
ವಿಕೆಟ್‌ ಪತನ: 1-2, 2-4, 3-47, 4-55, 5-114, 6-161, 7-171
ಬೌಲಿಂಗ್‌: ಮೊಹಮ್ಮದ್‌ ಶಮಿ 4-1-25-3
ಹಾರ್ದಿಕ್‌ ಪಾಂಡ್ಯ 4-0-24-1
ಅಲ್ಜಾರಿ ಜೋಸೆಫ್ 3-0-47-0
ರಶೀದ್‌ ಖಾನ್‌ 4-0-46-2
ಮೋಹಿತ್‌ ಶರ್ಮಾ 2-0-7-0
ನೂರ್‌ ಅಹ್ಮದ್‌ 2.2-0-29-1

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.