ಪ್ರೊ ಕಬಡ್ಡಿ ಲೀಗ್‌ : ಪ್ಲೇ ಆಫ್ ಗೆ ಏರೀತೇ ಜೈಪುರ?

3 ಸ್ಥಾನಕ್ಕೆ 4 ತಂಡಗಳ ನಡುವೆ ಪೈಪೋಟಿ

Team Udayavani, Oct 1, 2019, 11:00 PM IST

pink

ಪಂಚಕುಲ: ಏಳನೇ ಆವೃತಿಯ ಪ್ರೊ ಕಬಡ್ಡಿ ಲೀಗ್‌ ಅಂತಿಮ ಹಂತ ತಲುಪಿದೆ. ಪ್ಲೇ ಆಫ್ ಪೈಪೋಟಿ ತೀವ್ರಗೊಂಡಿದೆ. 3 ಸ್ಥಾನಗಳಿಗಾಗಿ 4 ತಂಡಗಳು ರೇಸ್‌ನಲ್ಲಿವೆ.

ದಬಾಂಗ್‌ ಡೆಲ್ಲಿ , ಬೆಂಗಾಲ್‌ ವಾರಿಯರ್ ಮತ್ತು ಹರ್ಯಾಣ ಸ್ಟೀಲರ್ ಈಗಾಗಲೇ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿವೆ. ಯು ಮುಂಬಾ (59), ಬೆಂಗಳೂರು ಬುಲ್ಸ್‌ (58), ಯುಪಿ ಯೋಧಾ (58) ಅನಂತರದ ಸ್ಥಾನದಲ್ಲಿವೆ. 7ನೇ ಸ್ಥಾನಿಯಾಗಿರುವ ಜೈಪುರ್‌ ಪಿಂಕ್‌ ಪ್ಯಾಂಥರ್ (52) ಮೇಲಿನ ಸ್ಥಾನವೇರಿ ಮುನ್ನಡೆದೀತೇ ಎಂಬುದಷ್ಟೇ ಸದ್ಯದ ಕುತೂಹಲ.

ಮುಂದಿನ 2 ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸುವುದು ಜೈಪುರ ಪಾಲಿಗೆ ಅನಿವಾರ್ಯ. ಇದರಲ್ಲೊಂದು ಪಂದ್ಯವನ್ನು ಬೆಂಗಳೂರು ಬುಲ್ಸ್‌ ವಿರುದ್ಧ ಆಡಲಿದೆ. ಹೀಗಾಗಿ ಅದು ಮಾಡು-ಮಡಿ ಸ್ಥಿತಿಯಲ್ಲಿದೆ.

ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಮತ್ತು ಯು ಮುಂಬಾಕ್ಕೆ 3 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಎರಡನ್ನು ಗೆದ್ದರೆ ಪ್ಲೇ ಆಫ್ ಟಿಕೆಟ್‌ ಪಕ್ಕಾ. ಹಾಗೆಯೇ ಯೋಧಾಕ್ಕೆ 4 ಪಂದ್ಯಗಳಿವೆ. ಎರಡನ್ನು ಗೆದ್ದರೆ ಪ್ಲೇ ಆಫ್ ಪ್ರವೇಶಿಸಬಹುದು. ಈ ಪಂದ್ಯಗಳು ಯುಪಿಯ ತವರಾದ ಗ್ರೇಟರ್‌ ನೋಯ್ಡಾದಲ್ಲಿ ನಡೆಯುವುದರಿಂದ ತಂಡಕ್ಕೆ ಲಾಭ ಹೆಚ್ಚು.

ಮಾಡು-ಮಡಿ ಸ್ಥಿತಿಯಲ್ಲಿ ಜೈಪುರ
ಜೈಪುರ ಪಿಂಕ್‌ ಪ್ಯಾಂಥರ್ನ ಆರಂಭದ ಗೆಲುವಿನ ಅಬ್ಬರ ಕಂಡಾಗ ಎಲ್ಲರಿಗಿಂತ ಮೊದಲೇ ಪ್ಲೇ ಆಫ್ ಪ್ರವೇಶಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅನಂತರ ಎದುರಾದ ಸರಣಿ ಸೋಲಿನಿಂದ ಪ್ಲೇ ಆಫ್ ಹಾದಿ ದುರ್ಗಮಗೊಂಡಿದೆ. ತವರಿನ ಪಂದ್ಯಗಳೂ ಜೈಪುರಕ್ಕೆ ಕಂಟಕವಾಗಿ ಪರಿಣಮಿಸಿದ್ದೊಂದು ವಿಪರ್ಯಾಸ.

ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಎಡವಿದರೂ ಜೈಪುರ ಪ್ಲೇ ಆಫ್ ರೇಸ್‌ನಿಂದ ನಿರ್ಗಮಿಸುವುದು ಖಚಿತ. ಒಂದು ವೇಳೆ ಎರಡನ್ನು ಗೆದ್ದರೂ ಜೈಪುರದ ಮುಂದಿನ ಹಾದಿ ಪಕ್ಕಾ ಎಂದು ಹೇಳಲು ಸಾಧ್ಯವಿಲ್ಲಿ. ಕಾರಣ, ಅದು ಮುಂಬಾ, ಯೋಧಾ ಅಥವಾ ಬುಲ್ಸ್‌ ತಂಡಗಳ ಸೋಲನ್ನೂ ಹಾರೈಸಬೇಕು! ಹೀಗಾಗಿ ಜೈಪುರದ ಮುಂದೆ ಅನೇಕ ಲೆಕ್ಕಾಚಾರಗಳಿವೆ.

ಬುಲ್ಸ್‌ಗೆ ಪವನ್‌ ಬಲ
ನಾಯಕ ರೋಹಿತ್‌ ಕುಮಾರ್‌ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮನ್ನಡೆಸುತ್ತಿರುವ ಪವನ್‌ ಸೆಹ್ರಾವತ್‌ ಮೇಲೆ ಬುಲ್ಸ್‌ ಹೆಚ್ಚಿನ ನಂಬಿಕೆ ಇರಿಸಿದೆ. ಕಳೆದ ಪಂದ್ಯದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಿ ಡೆಲ್ಲಿ ವಿರುದ್ಧ ಟೈ ಮತ್ತು ಬಲಿಷ್ಠ ಮುಂಬಾ ವಿರುದ್ಧ ಗೆಲುವು ಸಾಧಿಸಿದ ಆತ್ಮವಿಶ್ವಾಸದಲ್ಲಿರುವ ಬುಲ್ಸ್‌, ಬುಧವಾರ ಹರ್ಯಾಣಕ್ಕೆ ಸೋಲುಣಿಸಿದರೆ ಗಂಭೀರ ಸಮಸ್ಯೆಗೆ ಸಿಲುಕದು.
ಪವನ್‌ ಅವರ ಕ್ವಿಕ್‌ ರೈಡಿಂಗ್‌, ಮಹೇಂದರ್‌ಸಿಂಗ್‌ ಅವರ ಟ್ಯಾಕಲ್‌, ಸುಮಿತ್‌ ಸಿಂಗ್‌ ಅವರ ಆಲ್‌ರೌಂಡ್‌ ಶೋ ಬುಲ್ಸ್‌ ಪಾಲಿಗೆ ಮಹತ್ವದ್ದಾಗಿದೆ. ಅಕಸ್ಮಾತ್‌ ಇವರಲ್ಲೊಬ್ಬರು ವಿಫ‌ಲರಾದರೂ ಅದು ಚಾಂಪಿಯನ್ನರ ಪಾಲಿಗೆ ಹಿನ್ನಡೆಯಾದೀತು. ಹೀಗಾಗಿ ಅದು ಉಳಿದ ಪಂದ್ಯಗಳಲ್ಲಿ ಎಚ್ಚರಿಕೆಯ ನಡೆಗಳನ್ನು ಇಡಬೇಕಿದೆ.

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.