ನಿತಿನ್‌ ಸಾಹಸದಿಂದ ಟೈ ಸಾಧಿಸಿದ ಜೈಪುರ


Team Udayavani, Sep 15, 2017, 8:55 AM IST

15-sports-7.jpg

ಸೋನೆಪತ್‌ (ಹರಿಯಾಣ): ತವರಿನ ಚರಣದ ಕೊನೆ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಹೊರತಾಗಿಯೂ ಆತಿಥೇಯ ಹರಿಯಾಣ ಸ್ಟೀಲರ್ 27-27 ಅಂತರ ದಿಂದ ಜೈಪುರ್‌ ಪಿಂಕ್‌ ಪ್ಯಾಂಥರ್ ವಿರುದ್ಧ ಟೈ ಮಾಡಿಕೊಂಡಿದೆ. ಟೈ ಸಾಧಿಸಿದರೂ ಹರಿಯಾಣ ‘ಎ’ ವಲಯದ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತು. 

ಶುಕ್ರವಾರದಿಂದ ರಾಂಚಿಯಲ್ಲಿ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವು ತೆಲುಗು ಟೈಟಾನ್ಸ್‌ ತಂಡವನ್ನು ಎದುರಿಸಲಿದ್ದರೆ ದ್ವಿತೀಯ ಪಂದ್ಯದಲ್ಲಿ ಯು ಮುಂಬಾ ತಂಡವು ಗುಜರಾತ್‌ ತಂಡವನ್ನು ಎದುರಿಸಲಿದೆ. 

ಗುರುವಾರ ಇಲ್ಲಿನ ಮೋತಿಲಾಲ್‌ ನೆಹರೂ ಸ್ಕೂಲ್‌ ಆಫ್ ನ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ರೋಚಕವಾಗಿ ಸಾಗಿತು. ಬಹುತೇಕ ಜೈಪುರ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 2ನೇ ಅವಧಿಯ ಕೊನೆಯ 4 ನಿಮಿಷದ ಆಟದಲ್ಲಿ ರೈಡರ್‌ ನಿತಿನ್‌ ರಾವಲ್‌ 3 ಅಂಕ ತಂದು ಪವಾಡ ಮಾಡಿದರು. ಇದರಿಂದ 19-23 ಹಿನ್ನಡೆಯಲ್ಲಿದ್ದ ಜೈಪುರ ಚೇತರಿಸಿಕೊಂಡಿತು. ಕೊನೆಗೆ ಇದೇ ಅಂಕವನ್ನು ಜೈಪುರ ಕಾಯ್ದುಕೊಂಡು ಹೋಯಿತಲ್ಲದೆ ಸ್ಟೀಲರ್ ಗೆಲುವಿನ ಕನಸನ್ನು ನುಚ್ಚು ನೂರು ಮಾಡಿತು. ಈ ಮೂಲಕ ತವರಿನಲ್ಲಿ ಸ್ಟೀಲರ್ 2ನೇ ಟೈ ಅನುಭವಿಸಿತು.

ಮಂಜಿತ್‌, ಜಸ್ವೀರ್‌ ವೈಫ‌ಲ್ಯ: ನಿತಿನ್‌ ರಾವಲ್‌ (11 ರೈಡಿಂಗ್‌ ಅಂಕ) 2ನೇ ಅವಧಿಯಲ್ಲಿ ಜೈಪುರಕ್ಕೆ ಟೈ ಮಾಡಿಕೊಳ್ಳಲು ನೆರವಾದರು. ಉಳಿದಂತೆ ಮಂಜಿತ್‌ ಚಿಲ್ಲರ್‌ (2 ಅಂಕ), ಪವನ್‌ ಕುಮಾರ್‌ (4 ಅಂಕ), ಜಸ್ವೀರ್‌ ಸಿಂಗ್‌ (2 ಅಂಕ) ವೈಫ‌ಲ್ಯ ಅನುಭವಿಸಿದ್ದರಿಂದ ಜೈಪುರ ಗೆಲುವು ಸಾಧ್ಯವಾಗಲಿಲ್ಲ.

ಹರಿಯಾಣಕ್ಕೆ ನಾಡಾ, ವಜೀರ್‌ ಅನುಪಸ್ಥಿತಿ: ಹರಿಯಾಣ ಸ್ಟೀಲರ್ ತಾರಾ ಆಟಗಾರ ಸುರೇಂದ್ರ ನಾಡಾ ಪೂರ್ಣ ಪಂದ್ಯವನ್ನು ಆಡಲಿಲ್ಲ. ಇನ್ನು ವಜೀರ್‌ ಸಿಂಗ್‌ ಮೊದಲ ಅವಧಿಯಲ್ಲಿ ಗಾಯಗೊಂಡರು. ಮತ್ತೆ ಆಡಿದರಾದರೂ ಮುಂದುವರಿಯಲು ಸಾಧ್ಯವಾಗಲಿಲ್ಲ. ಈ ಹಂತದಲ್ಲಿ ದೀಪಕ್‌ ಕುಮಾರ್‌ ದಹಿಯಾ (7 ರೈಡಿಂಗ್‌ ಅಂಕ), ಸುರ್ಜಿತ್‌ ಸಿಂಗ್‌ (6  ರೈಡಿಂಗ್‌ ಅಂಕ)  ಹಾಗೂ ವಿಕಾಸ್‌ (4 ಟ್ಯಾಕಲ್‌ ಅಂಕ) ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದರು.

ಮೊದಲ ಅವಧಿಯಲ್ಲಿ  ಸ್ಟೀಲರ್ ಮೇಲುಗೈ: ತವರಿನ ಚರಣದ ಕೊನೆ ಪಂದ್ಯದಲ್ಲಿ ಗೆಲುವಿನೊಂದಿಗೆ ಮುಗಿಸುವ ಕನಸು ಸ್ಟೀಲರ್ ಅವರದ್ದಾಗಿತ್ತು. ಮೊದಲ ಅವಧಿಯ ಆಟದಲ್ಲಿ ಜೈಪುರ ತಂಡ ಆರಂಭದಲ್ಲಿ ಪ್ರಬಲ ಆಟಕ್ಕೆ ಇಳಿಯಿತು. ಆದರೆ ಹರ್ಯಾಣ ಇದಕ್ಕೆ ಕೆಲವೇ ನಿಮಿಷಗಳಲ್ಲಿ ಸೂಕ್ತ ಉತ್ತರ ನೀಡಲು ಆರಂಭಿಸಿತು. ಆಟ ಮುಗಿಯಲು 13 ನಿಮಿಷ ಇದ್ದಾಗ ಹರ್ಯಾಣ ತಾರಾ ರೈಡರ್‌ ವಜೀರ್‌ ಸಿಂಗ್‌ ಗಾಯಕ್ಕೆ ತುತ್ತಾದರು. ಇದು ಸ್ಥಳೀಯ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿತು. ಆದರೆ ವಜೀರ್‌ ಮತ್ತೆ ಆಡುವ ಮೂಲಕ ಅಭಿಮಾನಿಗಳ ಆತಂಕ ದೂರ ಮಾಡಿದರು.

ಇಲ್ಲಿಂದ ಬಳಿಕ ಆಟವನ್ನು ತೆಗೆದುಕೊಂಡು ಹೋಗಿದ್ದು ದೀಪಕ್‌ ಕುಮಾರ್‌ ದಹಿಯಾ. ಅವರು ಹರ್ಯಾಣ ಪರ ಮಿಂಚಿನ ದಾಳಿ ನಡೆಸಿದರು. ಅಂಕವನ್ನು ಏರಿಸುತ್ತಾ ಹೋದರು. ಪರಿಣಾಮ ಜೈಪುರ ಮೊದಲ ಅವಧಿಯ ಅಂತ್ಯ
ಗೊಳ್ಳಲು 5 ನಿಮಿಷ ಇದ್ದಾಗ ಮೊದಲ ಸಲ ಆಲೌಟ್‌ಗೆ ಒಳಗಾಯಿತು.

ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.