ಚೆಸ್ ಒಲಿಂಪಿಯಾಡ್ ಜ್ಯೋತಿ ಹಸ್ತಾಂತರ
Team Udayavani, Jun 21, 2022, 11:15 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹ ಅವರು ಮಂಗಳವಾರ ಚೆಸ್ ಒಲಿಂಪಿಯಾಡ್ನ ಜ್ಯೋತಿಯನ್ನು ಗ್ರ್ಯಾನ್ಮಾಸ್ಟರ್ ಪ್ರವೀಣ್ ತಿಪ್ಸೆ ಅವರಿಗೆ ಹಸ್ತಾಂತರಿಸಿದರು.
ಇದೇ ಮೊದಲ ಬಾರಿಯ ಚೆಸ್ ಒಲಿಂಪಿಯಾಡ್ನ ಜ್ಯೋತಿ ರಿಲೇ ಓಟಕ್ಕೆ ಜೂ. 19ರಂದು ದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸುರು ನಿಶಾನೆ ತೋರಿಸಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಅಂತ್ಯಗೊಳ್ಳುವ ಮೊದಲು ಈ ರಿಲೇ 40 ದಿನಗಳ ಅಂತರದಲ್ಲಿ 75 ನಗರಗಳಲ್ಲಿ ಸಂಚರಿ ಸಲಿದೆ ಎಂದು ಚೆಸ್ ಒಲಿಂಪಿಯಾಡ್ನ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಚೆಸ್ ಒಲಿಂಪಿಯಾಡ್ ಜ್ಯೋತಿಯ ಆತಿಥ್ಯ ವಹಿಸಿರುವುದು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆಯ ಕ್ಷಣವಾಗಿದೆ ಎಂದು ಮನೋಜ್ ಸಿನ್ಹ ತಿಳಿಸಿದರು. ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ತನ್ನ ಪ್ರಯಾಣದಲ್ಲಿ ಈ ಜ್ಯೋತಿಯು ಉತ್ತಮ ಕ್ರೀಡಾ ಮನೋಭಾವ, ಸಾಂ ಕ ಕೆಲಸ, ಶಾಂತಿ, ಸೌಹಾ ರ್ದತೆ ಮತ್ತು ಸಹೋದರತ್ವದ ಮೌಲ್ಯ ಗಳನ್ನು ಉತ್ತೇಜಿಸಲು ಜನರನ್ನು ಒಟ್ಟುಗೂಡಿ ಸಲಿದೆ ಎಂದವರು ಹೇಳಿದರು.
ಜುಲೈ 2ರಿಂದ ಶ್ರೀನಗರದಲ್ಲಿ ಆರಂಭವಾಗುವ ಕಾಶ್ಮೀರ ಓಪನ್ ಫಿಡೆ ರೇಟಿಂಗ್ ಚೆಸ್ ಕೂಟವನ್ನು ಯಶಸ್ವಿ ಗೊಳಿಸಲು ಚೆಸ್ ಅಸೋಸಿಯೇಶನ್ ಮತ್ತು ಜಮ್ಮು ಆ್ಯಂಡ್ ಕಾಶ್ಮೀರ ಕ್ರೀಡಾ ಕೌನ್ಸಿಲ್ ಎಲ್ಲ ಪ್ರಯತ್ನ ಮಾಡಲಿದೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ