ಮುಷ್ತಾಕ್ ಅಲಿ ಟ್ರೋಫಿ:ವಿದ್ವತ್ ಕಾವೇರಪ್ಪ 11ಕ್ಕೆ 5 ; ಜೆ & ಕೆ ವಿರುದ್ಧ ಕರ್ನಾಟಕಕ್ಕೆ ಜಯ
Team Udayavani, Oct 16, 2022, 7:27 PM IST
ಮುಲ್ಲನ್ಪುರ: ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗ್ರೂಪ್ ಸಿ ಪಂದ್ಯದಲ್ಲಿ ವೇಗಿ ವಿದ್ವತ್ ಕಾವೇರಪ್ಪ ಅವರ ಜೀವನಶ್ರೇಷ್ಠ 11ಕ್ಕೆ 5 ವಿಕೆಟ್ ಗಳ ನೆರವಿನಿಂದ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ 34 ರನ್ಗಳ ಭರ್ಜರಿ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಗದಿತ 20 ಓವರ್ಗಳಲ್ಲಿ ಏಳು ವಿಕೆಟ್ಗೆ 147 ರನ್ಗಳ ಮೊತ್ತ ಕಲೆ ಹಾಕಿತು, ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರವು 18.2 ಓವರ್ಗಳಲ್ಲಿ 113 ರನ್ಗಳಿಗೆ ಆಲೌಟ್ ಆಯಿತು.
ಜಮ್ಮು ಮತ್ತು ಕಾಶ್ಮೀರ ಪರ ಭಾರತದ ವೇಗಿ ಉಮ್ರಾನ್ ಮಲಿಕ್ ತನ್ನ ನಾಲ್ಕು ಓವರ್ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದರೆ, ಅಬಿದ್ ಮುಷ್ತಾಕ್ ಮತ್ತು ರಿತಿಕ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ಶ್ರೇಯಸ್ ಗೋಪಾಲ್ 38 ಎಸೆತಗಳಲ್ಲಿ 48 ರನ್ ಗಳಿಸಿ ತಂಡಕ್ಕೆ ಆಧಾರವಾಗುವ ವರೆಗೂ ಕರ್ನಾಟಕವೂ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ನಂತರ ಮನೋಜ್ ಭಾಂಡಗೆ ಅವರು 23 ಎಸೆತಗಳಲ್ಲಿ 41 ರನ್ ಗಳಿಸಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿ ಆಸರೆಯಾದರು.
ಜಮ್ಮು ಮತ್ತು ಕಾಶ್ಮೀರ ತಂಡವು ನಿಯಮಿತ ಅಂತರದಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇತ್ತು, ವಿವ್ರಾಂತ್ ಶರ್ಮಾ ಅವರ 46 ಬಾಲ್ ಗಳಲ್ಲಿ 63 ರನ್ ಕೊಡುಗೆಯ ಹೊರತಾಗಿಯೂ ವಿಫಲವಾಯಿತು.
ಏಳನೇ ಓವರ್ನಲ್ಲಿ ಆರು ವಿಕೆಟ್ಗೆ 31 ರನ್ಗಳಿದ್ದಾಗ, ಅಬಿದ್ ಮುಷ್ತಾಕ್ 26 ಎಸೆತಗಳಲ್ಲಿ 32 ರನ್ ಗಳಿಸಿ ಜಮ್ಮು ಮತ್ತು ಕಾಶ್ಮೀರದ ಮೊತ್ತಕ್ಕೆ ಗೌರವಾನ್ವಿತತೆಯ ತೋರಿಕೆಯನ್ನು ನೀಡಿದರು. ಆದಾಗ್ಯೂ, ಪವರ್ಪ್ಲೇಯೊಳಗೆ ವಿಕೆಟ್ ಪತನವಾದ ಕಾರಣ ಮುಷ್ತಾಕ್ ಅವರ ಪ್ರಯತ್ನವು ಗೆಲುವಿನತ್ತ ಸಾಗಲು ಸಾಧ್ಯವಾಗಲಿಲ್ಲ.
ನಾಲ್ಕನೇ ಟಿ20 ಪಂದ್ಯವನ್ನಾಡಿದ ಕಾವೇರಪ್ಪ ಅತ್ಯುತ್ತಮ ಪ್ರದರ್ಶನ ತೋರಿದರು, ವಾಸುಕಿ ಕೌಶಿಕ್ ಮತ್ತು ವಿಜಯ್ಕುಮಾರ್ ವೈಶಾಕ್ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ಗಳು
ಕರ್ನಾಟಕ: 20 ಓವರ್ಗಳಲ್ಲಿ 147/7, (ಶ್ರೇಯಸ್ ಗೋಪಾಲ್ 48, ಮನೋಜ್ ಭಾಂಡಗೆ 41) ಕಾಶ್ಮೀರ 18.2 ಓವರ್ಗಳಲ್ಲಿ 113 ಆಲೌಟ್ (ವಿವ್ರಾಂತ್ ಶರ್ಮಾ 63; ವಿಧ್ವತ್ ಕಾವೇರಪ್ಪ 5/11)
ಮಹಾರಾಷ್ಟ್ರಕ್ಕೆ ಭರ್ಜರಿ ಜಯ
ಮೊಹಾಲಿಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಮೇಘಾಲಯವನ್ನು 74 ರನ್ಗಳಿಂದ ಸೋಲಿಸಿದೆ. ಮಹಾರಾಷ್ಟ್ರ 20 ಓವರ್ಗಳಲ್ಲಿ 144 ಆಲೌಟ್ (ರುತುರಾಜ್ ಗಾಯಕ್ವಾಡ್ 38; ಅಭಿಷೇಕ್ ಕುಮಾರ್ 4/37) ಮೇಘಾಲಯ 18.1 ಓವರ್ಗಳಲ್ಲಿ 70ಕ್ಕೆ ಆಲೌಟ್ (ಯೋಗೇಶ್ ತಿವಾರಿ 26; ಸತ್ಯಜೀತ್ ಬಚಾವ್ 4/26)
ಸರ್ವಿಸಸ್ ಗೆ ಜಯ
ಸರ್ವಿಸಸ್ 20 ಓವರ್ಗಳಲ್ಲಿ 148/8 (ಅನ್ಶುಲ್ ಗುಪ್ತಾ 39; ವೈಶಾಖ್ ಚಂದ್ರನ್ 3/28) ಕೇರಳ 19.4 ಓವರ್ಗಳಲ್ಲಿ 136 ಆಲೌಟ್ (ಸಚಿನ್ ಬೇಬಿ 36, ಸಂಜು ಸ್ಯಾಮ್ಸನ್ 30; ನಿತಿನ್ ಯಾದವ್ 3/12, ಅರ್ಜುನ್ ಶರ್ಮಾ 3/36, ಪುಲ್ಕಿತ್ ನಾರಂಗ್ 2 /17, ಪಾರ್ಥ್ ರೇಖಡೆ 2/19).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ