ತವರಿನಲ್ಲಿ ಕೆಕೆಆರ್‌ ಜಯಭೇರಿ


Team Udayavani, May 24, 2018, 6:00 AM IST

x-23.jpg

ಕೋಲ್ಕತಾ: ಬುಧವಾರ ರಾತ್ರಿ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಎಲಿಮಿನೇಟರ್‌ ಸುತ್ತಿನ ಪಂದ್ಯದಲ್ಲಿ  25 ರನ್ನುಗಳ ಜಯ ಸಾಧಿಸಿದ ಆತಿಥೇಯ ಕೋಲ್ಕತಾ ನೈಟ್‌ರೈಡರ್ ಪಡೆ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಪಂದ್ಯಾವಳಿಯಿಂದ ಹೊರದಬ್ಬಿದೆ. ಶುಕ್ರವಾರ ನಡೆಯುವ 2ನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಕೆಕೆಆರ್‌-ಸನ್‌ರೈಸರ್ ಹೈದರಾಬಾದ್‌ ಮುಖಾಮುಖೀಯಾಗಲಿದ್ದು, ಇಲ್ಲಿ ಗೆದ್ದ ತಂಡ 
ಫೈನಲ್‌ಗೆ ಲಗ್ಗೆ ಇಡಲಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 7 ವಿಕೆಟಿಗೆ 169 ರನ್‌ ಗಳಿಸಿ ಸವಾಲೊಡ್ಡಿದರೆ, ರಾಜಸ್ಥಾನ್‌ ರಾಯಲ್ಸ್‌ ಉತ್ತಮ ಆರಂಭದ ಹೊರ ತಾಗಿಯೂ ಕೊನೆಯ ಹಂತದಲ್ಲಿ ಒತ್ತಡಕ್ಕೆ ಸಿಲುಕಿ 4 ವಿಕೆಟಿಗೆ 144 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಅಜಿಂಕ್ಯ ರಹಾನೆ (46)-ರಾಹುಲ್‌ ತ್ರಿಪಾಠಿ (20) ಮೊದಲ ವಿಕೆಟಿಗೆ 47 ರನ್‌ ಒಟ್ಟುಗೂಡಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಬಳಿಕ ಸಂಜು ಸ್ಯಾಮ್ಸನ್‌ 50 ರನ್‌ ಬಾರಿಸಿ ಗೆಲುವಿನಾಸೆ ಚಿಗುರಿಸಿದರು (38 ಎಸೆತ, 4 ಬೌಂಡರಿ, 2 ಸಿಕ್ಸರ್‌). ಆದರೆ ಸ್ಯಾಮ್ಸನ್‌ ಔಟಾದೊಡನೆ ಕೆಕೆಆರ್‌ ಕೈ ಮೇಲಾಯಿತು. ವಿಕೆಟ್‌ ಕೈಲಿದ್ದರೂ ರನ್‌ ಪೇರಿಸಲು ವಿಫ‌ಲವಾದ ರಾಜಸ್ಥಾನ್‌ ಸೋಲನ್ನು ಮೈಮೇಲೆ ಎಳೆದುಕೊಂಡಿತು. 

ಕೆಕೆಆರ್‌ ಆಘಾತಾಕರಿ ಆರಂಭ
ಕೆಕೆಆರ್‌ ಆರಂಭ ಆಘಾತಕಾರಿಯಾಗಿತ್ತು. ಕೆ. ಗೌತಮ್‌ ಅವರ ಪಂದ್ಯದ ಮೊದಲ ಎಸೆತವನ್ನೇ ಬೌಂಡರಿಗೆ ಅಟ್ಟಿದ ಸುನೀಲ್‌ ನಾರಾಯಣ್‌ ಮುಂದಿನ ಎಸೆತದಲ್ಲೇ ಸ್ಟಂಪ್ಡ್ ಆಗಿ ನಿರ್ಗಮಿಸಿದರು. ತಮ್ಮ ಮುಂದಿನ ಓವರಿನ ಮೊದಲ ಎಸೆತದಲ್ಲೇ ರಾಬಿನ್‌ ಉತ್ತಪ್ಪ ವಿಕೆಟ್‌ ಹಾರಿಸಿದ ಗೌತಮ್‌ ಅಪಾಯಕಾರಿಯಾಗಿ ಗೋಚರಿಸಿದರು. ಸ್ಕೋರ್‌ 24ಕ್ಕೆ ತಲಪುವಷ್ಟರಲ್ಲಿ ನಿತೀಶ್‌ ರಾಣ ವೇಗಿ ಆರ್ಚರ್‌ ಮೋಡಿಗೆ ಸಿಲುಕಿದರು. ಒಂದೆಡೆ ನಿಲ್ಲುವ ಸೂಚನೆ ನೀಡಿದ್ದ ಆರಂಭಕಾರ ಕ್ರಿಸ್‌ ಲಿನ್‌ ಅವರಿಗೆ ಶ್ರೇಯಸ್‌ ಗೋಪಾಲ್‌ ಬಲೆ ಬೀಸಿದರು. ಹೀಗೆ ಕೆಕೆಆರ್‌ನ ಮೊದಲ 4 ವಿಕೆಟ್‌ಗಳಲ್ಲಿ 3 ಕನ್ನಡಿಗರ ಪಾಲಾಯಿತು.

8 ಓವರ್‌ ಮುಕ್ತಾಯಕ್ಕೆ ಆತಿಥೇಯ ಪಡೆ 4ಕ್ಕೆ 51 ರನ್‌ ಮಾಡಿ ಚಡಪಡಿಸುತ್ತಿತ್ತು. ಅನಂತರವೇ ರನ್‌ಗತಿಯಲ್ಲಿ ಪ್ರಗತಿ ಕಂಡುಬಂತು. ನಾಯಕ ದಿನೇಶ್‌ ಕಾರ್ತಿಕ್‌, ಶುಭಮನ್‌ ಗಿಲ್‌ ಮತ್ತು ಆ್ಯಂಡ್ರೆ ರಸೆಲ್‌ ಸೇರಿಕೊಂಡು ರಾಜಸ್ಥಾನ್‌ ಬೌಲರ್‌ಗಳ ಮೇಲೆರಗಿದರು. 

ಕಪ್ತಾನನ ಆಟವಾಡಿದ ಕಾರ್ತಿಕ್‌ ಕೆಕೆಆರ್‌ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. ಕಾರ್ತಿಕ್‌ ಗಳಿಕೆ 38 ಎಸೆತಗಳಿಂದ 52 ರನ್‌. ಸಿಡಿಸಿದ್ದು 4 ಬೌಂಡರಿ, 2 ಸಿಕ್ಸರ್‌. ಕಾರ್ತಿಕ್‌-ಗಿಲ್‌ ಜೋಡಿಯಿಂದ 5ನೇ ವಿಕೆಟಿಗೆ 55 ರನ್‌ ಒಟ್ಟುಗೂಡಿತು. ಗಿಲ್‌ 17 ಎಸೆತಗಳಿಂದ 28 ರನ್‌ ಹೊಡೆದರು (3 ಬೌಂಡರಿ, 1 ಸಿಕ್ಸರ್‌). ಡೆತ್‌ ಓವರ್‌ಗಳಲ್ಲಿ ಸಿಡಿದು ನಿಂತ ಆ್ಯಂಡ್ರೆ ರಸೆಲ್‌ 25 ಎಸೆತಗಳಿಂದ 49 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಈ ಕೆರಿಬಿಯನ್‌ ಕ್ರಿಕೆಟಿಗನ ಅಬ್ಬರದ ವೇಳೆ 5 ಸಿಕ್ಸರ್‌, 3 ಫೋರ್‌ ಸಿಡಿಯಲ್ಪಟ್ಟಿತು.ರಾಜಸ್ಥಾನ್‌ ಪರ ಕೆ. ಗೌತಮ್‌, ಜೋಫ‌ ಆರ್ಚರ್‌, ಬೆನ್‌ ಲವಿನ್‌ ತಲಾ 2 ವಿಕೆಟ್‌ ಕಿತ್ತರು.

ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್

ಸುನೀಲ್‌ ನಾರಾಯಣ್‌    ಸ್ಟಂಪ್ಡ್ ಕ್ಲಾಸೆನ್‌ ಬಿ ಗೌತಮ್‌    4
ಕ್ರಿಸ್‌ ಲಿನ್‌    ಸಿ ಮತ್ತು ಬಿ ಗೋಪಾಲ್‌    18
ರಾಬಿನ್‌ ಉತ್ತಪ್ಪ    ಸಿ ಮತ್ತು ಬಿ ಗೌತಮ್‌    3
ನಿತೀಶ್‌ ರಾಣ    ಸಿ ಉನಾದ್ಕತ್‌ ಬಿ ಆರ್ಚರ್‌    3
ದಿನೇಶ್‌ ಕಾರ್ತಿಕ್‌    ಸಿ ರಹಾನೆ ಬಿ ಲವಿನ್‌    52
ಶುಭಮನ್‌ ಗಿಲ್‌    ಸಿ ಕ್ಲಾಸೆನ್‌ ಬಿ ಆರ್ಚರ್‌    28
ಆ್ಯಂಡ್ರೆ ರಸೆಲ್‌    ಔಟಾಗದೆ    49
ಸ್ಕ್ಯಾಂಟಲ್‌ಬರಿ    ಸಿ ಆರ್ಚರ್‌ ಬಿ ಲವಿÉನ್‌    2
ಪೀಯೂಷ್‌ ಚಾವ್ಲಾ    ಔಟಾಗದೆ    0

ಇತರ        10
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)    169
ವಿಕೆಟ್‌ ಪತನ: 1-4, 2-17, 3-24, 4-51, 5-106, 6-135, 7-164.

ಬೌಲಿಂಗ್‌:
ಕೃಷ್ಣಪ್ಪ ಗೌತಮ್‌        3-0-15-2
ಜೋಫ‌ ಆರ್ಚರ್‌        4-0-33-2
ಜೈದೇವ್‌ ಉನಾದ್ಕತ್‌        2-0-33-0
ಐಶ್‌ ಸೋಧಿ        4-0-15-0
ಶ್ರೇಯಸ್‌ ಗೋಪಾಲ್‌        4-0-34-1
ಬೆನ್‌ ಲವಿನ್‌        3-0-35-2

ರಾಜಸ್ಥಾನ್‌ ರಾಯಲ್ಸ್‌
ಅಜಿಂಕ್ಯ ರಹಾನೆ    ಸಿ ಮತ್ತು ಬಿ ಯಾದವ್‌    46
ರಾಹುಲ್‌ ತ್ರಿಪಾಠಿ    ಸಿ ಮತ್ತು ಬಿ ಚಾವ್ಲಾ    20
ಸಂಜು ಸ್ಯಾಮ್ಸನ್‌    ಸಿ ಸ್ಕ್ಯಾಂಟಲ್‌ಬರಿ ಬಿ ಚಾವ್ಲಾ    50
ಹೆನ್ರಿಚ್‌ ಕ್ಲಾಸೆನ್‌    ಔಟಾಗದೆ    18
ಸ್ಟುವರ್ಟ್‌ ಬಿನ್ನಿ    ಸಿ ಲಿನ್‌ ಬಿ ಪ್ರಸಿದ್ಧ್ ಕೃಷ್ಣ    0
ಕೆ. ಗೌತಮ್‌    ಔಟಾಗದೆ    9

ಇತರ        1
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)    144
ವಿಕೆಟ್‌ ಪತನ: 1-47, 2-109, 3-126, 4-130.

ಬೌಲಿಂಗ್‌: 
ಆ್ಯಂಡ್ರೆ ರಸೆಲ್‌        3-0-22-0
ಎಂ. ಪ್ರಸಿದ್ಧ್ ಕೃಷ್ಣ        4-0-28-1
ಪೀಯೂಷ್‌ ಚಾವ್ಲಾ        4-0-28-2
ಸುನೀಲ್‌ ನಾರಾಯಣ್‌        4-0-39-0
ಕುಲದೀಪ್‌ ಯಾದವ್‌        4-0-18-1
ಸ್ಕ್ಯಾಂಟಲ್‌ಬರಿ ಸಿಯರ್ಲೆಸ್‌    1-0-13-0

ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್‌

ಟಾಪ್ ನ್ಯೂಸ್

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

1-waadassda

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 15 ಮಂದಿ ಆರೋಪಿಗಳು ಖುಲಾಸೆ

Paper leak case: ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; 15 ಮಂದಿ ಆರೋಪಿಗಳು ಖುಲಾಸೆ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್‌ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ

1-asasa

Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.