ಅವೇರ್ ಫೌಂಡೇಶನ್ಗೆ ನೆರವಾಗಲು ರಾಹುಲ್ ನಿರ್ಧಾರ
ದೇಣಿಗೆ ಸಂಗ್ರಹಕ್ಕೆ ಬ್ಯಾಟ್, ಹೆಲ್ಮೆಟ್ ಹರಾಜು
Team Udayavani, Apr 21, 2020, 6:36 AM IST
ಬೆಂಗಳೂರು: ಮಕ್ಕಳ ಕಲ್ಯಾಣ ಸಲುವಾಗಿ ಶ್ರಮಿಸುತ್ತಿರುವ “ಅವೇರ್ ಫೌಂಡೇಶನ್’ಗೆ ನೆರವಾಗಲು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್, 2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ತಾವು ಬಳಸಿದ್ದ ಬ್ಯಾಟ್, ಪ್ಯಾಡ್ ಮತ್ತು ಹೆಲ್ಮೆಟ್ ಸಹಿತ ಪ್ರಮುಖ ವಸ್ತುಗಳನ್ನು ಹರಾಜಿಗೆ ಇಡಲು ನಿಶ್ಚಯಿಸಿದ್ದಾರೆ.
“ದಿ ಭಾರತ್ ಆರ್ಮಿ’ ಸಹಯೋಗದಲ್ಲಿ ಹರಾಜು
ಟೀಮ್ ಇಂಡಿಯಾದ ಅಧಿಕೃತ ಅಭಿಮಾನಿ ಬಳಗ “ದಿ ಭಾರತ್ ಆರ್ಮಿ’ ಸಹಯೋಗದಲ್ಲಿ ಹರಾಜು ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಈ ಕುರಿತಾಗಿ ವೀಡಿಯೊ ಸಂದೇಶವೊಂದನ್ನು ರವಾನಿಸಿರುವ ರಾಹುಲ್, ನಾನು ಒಂದು ಒಳ್ಳೆಯ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಇದು ಅತ್ಯಂತ ವಿಶೇಷವಾದದ್ದು ಕೂಡ. ನನ್ನ ಬ್ಯಾಟ್, ಪ್ಯಾಡ್, ಗ್ಲೌಸ್, ಹೆಲ್ಮೆಟ್ ಮತ್ತು ಸಮವಸ್ತ್ರ ಎಲ್ಲವನ್ನೂ ಭಾರತ್ ಆರ್ಮಿ ಜತೆಗಿನ ಸಹಯೋಗದಲ್ಲಿ ಹರಾಜು ಮಾಡಲಿದ್ದೇನೆ. ಈ ಹರಾಜಿನಿಂದ ಬರುವ ಹಣವನ್ನು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವೇರ್ ಫೌಂಡೇಶನ್ಗೆನೀಡಲಾಗುವುದು ಎಂದಿದ್ದಾರೆ.
ಇದೇ ಮೊದಲೇನಲ್ಲ
ರಾಹುಲ್ ಸಾಮಾಜಿಕ ಕಳಕಳಿ ಮೆರೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹಲವು ಪ್ರಾಣಿದಯಾ ಸಂಘಗಳಿಗೆ ನೆರವಾಗಿದ್ದಾರೆ. ಇನ್ನು ಲಾಕ್ಡೌನ್ ದಿನಗಳಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಆಹಾರ ಸಾಮಗ್ರಿ ಒದಗಿಸುವ ಕೆಲಸವನ್ನು ರಾಹುಲ್ ಮಾಡುತ್ತಿದ್ದು, ಈಗಾಗಲೇ ಹಲವಾರು ಬಾರಿ ದೇಣಿಗೆಯನ್ನು ಕೂಡ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?