ಮೇರಿಕಾಮ್ಗೆ ಐತಿಹಾಸಿಕ ಐದನೇ ಚಿನ್ನ
Team Udayavani, Nov 9, 2017, 7:00 AM IST
ಹೊ ಚಿ ಮಿನ್ ಸಿಟಿ (ವಿಯೆಟ್ನಾಂ): ಭಾರತದ ಖ್ಯಾತ ಬಾಕ್ಸರ್ ಎಂಸಿ ಮೇರಿಕಾಮ್ ಅವರು ಏಶ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಅಭೂತಪೂರ್ವ ರೀತಿಯಲ್ಲಿ ಐದನೇ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಐದು ಬಾರಿಯ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಕಂಚು ವಿಜೇತೆ ಮೇರಿಕಾಮ್ ಅವರು ಉತ್ತರ ಕೊರಿಯದ ಕಿಮ್ ಹ್ಯಾಂಗ್ ಮೀ ಅವರನ್ನು 5-0 ಅಂಕಗಳಿಂದ ಅವಿರೋಧವಾಗಿ ಉರುಳಿಸಿ ಸಂಭ್ರಮಿಸಿದರು.
ಆದರೆ ವಿಶ್ವ ಚಾಂಪಿಯನ್ಶಿಪ್ ಬೆಳ್ಳಿ ವಿಜೇತೆ ಸೋನಿಯಾ ಲಾತರ್ ಎರಡನೇ ಬಾರಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅವರು ಫೈನಲ್ ಹೋರಾಟದಲ್ಲಿ ಚೀನದ ಯಿನ್ ಜುನ್ಹುವಾ ಅವರಿಗೆ ಶರಣಾದರು.
ಮೇರಿಕಾಮ್ ಅವರ ಸಾಧನೆಯಿಂದ ಭಾರತ ಈ ಕೂಟದಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕ ಜಯಿಸಿ ಸ್ಪರ್ಧೆ ಮುಗಿಸಿತು.
2014ರ ಏಶ್ಯನ್ ಗೇಮ್ಸ್ ಬಳಿಕ ಮತ್ತು ಕಳೆದೊಂದು ವರ್ಷದಲ್ಲಿ ಇದು ಮೇರಿಕಾಮ್ ಅವರ ಮೊದಲ ಅಂತಾರಾಷ್ಟ್ರೀಯ ಮಟ್ಟದ ಚಿನ್ನದ ಪದಕವಾಗಿದೆ. ಈ ಕೂಟದಲ್ಲಿ ಮೇರಿಕಾಮ್ ಅದ್ಭುತ ದಾಖಲೆ ಹೊಂದಿದ್ದಾರೆ. ಆರು ಬಾರಿ ಈ ಕೂಟದಲ್ಲಿ ಸ್ಪರ್ಧಿಸಿದ ವೇಳೆ ಫೈನಲಿಗೇರಿದ್ದ ಮೇರಿಕಾಮ್ ಒಮ್ಮೆ ಮಾತ್ರ ಬೆಳ್ಳಿಯ ಪದಕ ಪಡೆದಿದ್ದರು. ಅವರು ಈ ಹಿಂದೆ 2003, 2005, 2010 ಮತ್ತು 2012ರಲ್ಲಿ ಚಿನ್ನ ಜಯಿಸಿದ್ದರು.
ಈ ಸ್ಪರ್ಧೆ ಸಾಗಿದ ರೀತಿಯಿಂದ ಸಂತೋಷವಾಗಿದೆ. ಈ ಗೆಲುವನ್ನು ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಸಮರ್ಪಿಸಲಿದ್ದೇನೆ. ಕಳೆದ ಕೆಲವು ತಿಂಗಳಿಂದ ನನ್ನ ಜತೆ ಅಭ್ಯಾಸದಲ್ಲಿ ನೆರವಾದ ತರಬೇತಿ ಸಿಬಂದಿಗಳಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಚಿನ್ನ ಗೆದ್ದ ಬಳಿಕ ಮೇರಿಕಾಮ್ ಹೇಳಿದರು. ಇಲ್ಲಿ ಫೈನಲ್ನಲ್ಲಿ ನನ್ನ ಎದುರಾಳಿ ಅತ್ಯಂತ ಕಠಿನ ಸ್ಪರ್ಧೆ ನೀಡಿದ್ದರು. ಆದರೆ ಪ್ರತಿಹೋರಾಟಕ್ಕೆ ನಾನು ಸಿದ್ಧನಾಗಿದ್ದೆ ಎಂದು 35ರ ಹರೆಯದ ಮೇರಿಕಾಮ್ ತಿಳಿಸಿದರು.
ಮೇರಿ ಸಹಿತ ಭಾರತೀಯ ಬಾಕ್ಸರ್ಗಳ ನಿರ್ವಹಣೆಗೆ ಭಾರತೀಯ ಬಾಕ್ಸಿಂಗ್ ಫೆಡರೇಶನ್ ಅಧ್ಯಕ್ಷ ಅಜಯ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ವನಿತಾ ಶಕ್ತಿಗೆ ಮೇರಿಕಾಮ್ ಅವರ ಚಿನ್ನ ಬಲುದೊಡ್ಡ ಗೆಲುವು ಆಗಿದೆ. ಮೂವರು ಮಕ್ಕಳ ತಾಯಿಯಾಗಿರುವ ಮೇರಿ ತನ್ನ ಛಲ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿ ಯುವ ಬಾಕ್ಸರ್ಗಳಿಗೆ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ