ವಿಂಡೀಸ್‌ ನೆಲದಲ್ಲಿ ಬಾಂಗ್ಲಾ ಸರಣಿ ವಿಜಯ


Team Udayavani, Jul 14, 2022, 9:46 PM IST

ವಿಂಡೀಸ್‌ ನೆಲದಲ್ಲಿ ಬಾಂಗ್ಲಾ ಸರಣಿ ವಿಜಯ

ಗಯಾನಾ: ತವರಿನಾಚೆ ಅತೀ ದೊಡ್ಡ ಗೆಲುವು ದಾಖಲಿಸಿದ ಹೆಗ್ಗಳಿಕೆಯೊಂದಿಗೆ ಬಾಂಗ್ಲಾದೇಶ ತಂಡ ವೆಸ್ಟ್‌ ಇಂಡೀಸ್‌ ನೆಲದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಪ್ರೊವಿಡೆನ್ಸ್‌ ಸ್ಟೇಡಿಯಂನಲ್ಲಿ ನಡೆದ 2ನೇ ಮುಖಾಮುಖಿಯನ್ನು ಬಾಂಗ್ಲಾ ಪಡೆ 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿತು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ 35 ಓವರ್‌ಗಳಲ್ಲಿ ಕೇವಲ 108 ರನ್ನಿಗೆ ಕುಸಿಯಿತು. ಇದು ತವರಲ್ಲಿ ವಿಂಡೀಸ್‌ ದಾಖಲಿಸಿದ 2ನೇ ಅತೀ ಕಡಿಮೆ ಮೊತ್ತವಾಗಿದೆ. ಜವಾಬಿತ್ತ ಬಾಂಗ್ಲಾ 20.4 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 112 ರನ್‌ ಬಾರಿಸಿತು.

ಇದು ಭಾರತ-ಇಂಗ್ಲೆಂಡ್‌ ನಡುವಿನ ಮಂಗಳವಾರದ ಓವಲ್‌ ಮುಖಾಮುಖಿಯನ್ನು ನೆನಪಿಸಿತು! ಮಳೆಯಿಂದ ಅಡಚಣೆಗೊಳಗಾದ ಮೊದಲ ಪಂದ್ಯವನ್ನು ಬಾಂಗ್ಲಾದೇಶ 6 ವಿಕೆಟ್‌ಗಳಿಂದ ಜಯಿಸಿತ್ತು. ಅಂತಿಮ ಏಕದಿನ ಶನಿವಾರ ನಡೆಯಲಿದೆ.

ಬಾಂಗ್ಲಾ ಸ್ಪಿನ್ನಿಗೆ ವಿಂಡೀಸ್‌ ತತ್ತರಿಸಿತು. ಮೆಹಿದಿ ಹಸನ್‌ (29ಕ್ಕೆ 4) ಮತ್ತು ನಸುಮ್‌ ಅಹ್ಮದ್‌ (19ಕ್ಕೆ 3) ಸೇರಿಕೊಂಡು ವಿಕೆಟ್‌ ಬೇಟೆಯಾಡುತ್ತ ಹೋದರು. ಅಜೇಯ 25 ರನ್‌ ಮಾಡಿದ ಕೀಮೊ ಪೌಲ್‌ ಅವರದೇ ಹೆಚ್ಚಿನ ಗಳಿಕೆ. ಚೇಸಿಂಗ್‌ ವೇಳೆ ನಾಯಕ ತಮಿಮ್‌ ಇಕ್ಬಾಲ್‌ 50 ರನ್‌ ಮತ್ತು ಲಿಟನ್‌ ದಾಸ್‌ 32 ರನ್‌ ಮಾಡಿ ಅಜೇಯರಾಗಿ ಉಳಿದರು. ಉರುಳಿದ್ದು ನಜ್ಮುಲ್‌ ಹೊಸೇನ್‌ ವಿಕೆಟ್‌ ಮಾತ್ರ (20). ಇದು ಗುಡಕೇಶ್‌ ಮೋಟಿ ಪಾಲಾಯಿತು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-35 ಓವರ್‌ಗಳಲ್ಲಿ 108 (ಕೀಮೊ ಪೌಲ್‌ ಔಟಾಗದೆ 25, ಶೈ ಹೋಪ್‌ 18, ಕೈಲ್‌ ಮೇಯರ್ 17, ಮೆಹಿದಿ ಹಸನ್‌ 29ಕ್ಕೆ 4, ನಸುಮ್‌ ಅಹ್ಮದ್‌ 19ಕ್ಕೆ 3). ಬಾಂಗ್ಲಾದೇಶ-20.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 112 (ತಮಿಮ್‌ ಇಕ್ಬಾಲ್‌ ಔಟಾಗದೆ 50, ಲಿಟನ್‌ ದಾಸ್‌ ಔಟಾಗದೆ 32, ಗುಡಕೇಶ್‌ ಮೋಟಿ 39ಕ್ಕೆ 1).

ಟಾಪ್ ನ್ಯೂಸ್

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Veerappa Moily ಯುಪಿಎ ಬರ ಪರಿಹಾರ ಬಾಕಿ ಇಟ್ಟಿರಲಿಲ್ಲ

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Hebri ತೆಂಕೂಲ: ಆಲಮಡ್ಡಿ ಮೇಣ ಸಂಗ್ರಹಿಸುತ್ತಿದ್ದವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.